


ದಿನಾಂಕ : 21.03.2025
ಸಂಘಟಿತ ಹೋರಾಟದಿಂದ ದೇವಸ್ಥಾನಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸೋಣ ! – ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ದೇವಸ್ಥಾನಗಳ ಸಂಸ್ಕೃತಿಯನ್ನು ರಕ್ಷಿಸಲು ಗೋಣಿಕೊಪ್ಪದಲ್ಲಿ ತಾಲೂಕು ಮಟ್ಟದ ಮಂದಿರ ಅಧಿವೇಶನ !
ಗೋಣಿಕೊಪ್ಪ : ದೇವಸ್ಥಾನಗಳ ಸರಕಾರೀಕರಣದ ವಿರುದ್ಧದ ಹೋರಾಟವಿರಲಿ ಅಥವಾ ಸರಕಾರೀಕರಣವಾಗಿರುವ ಮಂದಿರಗಳಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟವಿರಲಿ, ಸಮಿತಿಯು ನಿರಂತರ ಮುಂಚೂಣಿಯಲ್ಲಿರುತ್ತದೆ. ಇಂದಿನ ‘ಸೆಕ್ಯುಲರ್’ ರಾಜ್ಯದಲ್ಲಿ ಸರಕಾರಿ ಹಸ್ತಕ್ಷೇಪದ ಮೂಲಕ ದೇವಸ್ಥಾನಗಳ ನೂರಾರು ವರ್ಷಗಳ ಪರಂಪರೆಯನ್ನು ನಷ್ಟಗೊಳಿಸಲಾಗುತ್ತಿದೆ. ಅನೇಕ ಸ್ಥಳಗಳಲ್ಲಿ ದೇವಸ್ಥಾನಗಳ ಹಿತದೃಷ್ಟಿಯ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ; ಆದ್ದರಿಂದಲೇ ಈ ಧರ್ಮಹಾನಿಯನ್ನು ತಡೆಗಟ್ಟಲು ಸಂಘಟಿತ ಹೋರಾಟದಿಂದ ದೇವಸ್ಥಾನಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸೋಣ` ಎಂದು ಉಪಸ್ಥಿತರಿಗೆ ಶ್ರೀ. ಮೋಹನ್ ಗೌಡ ಇವರು ಕರೆ ನೀಡಿದರು.
ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜಿತ ‘ತಾಲೂಕು ಮಟ್ಟದ ಮಂದಿರ ಅಧಿವೇಶನ’ ವು ಪಾಮ್ ವ್ಯಾಲಿ ರೆಸಾರ್ಟ್ ಪಾಲಿಬೆಟ್ಟ ರಸ್ತೆ ಅತ್ತೂರ್- ಗೋಣಿಕೊಪ್ಪದಲ್ಲಿ ಯಶಸ್ವಿಯಾಗಿ ನಡೆಯಿತು.
ದೇವಸ್ಥಾನಗಳ ಸಂರಕ್ಷಣೆಯೆಂದರೆ ಹಿಂದೂ ರಾಷ್ಟ್ರ ಸ್ಥಾಪನೆಯೆಡೆಗೆ ಮೊದಲ ಹೆಜ್ಜೆ ! – ಕೊಲ್ಲಿರ ಶ್ರೀ. ಧರ್ಮಜ
ದೇವಸ್ಥಾನಗಳ ಸಂರಕ್ಷಣೆಯು ನಮ್ಮೆಲ್ಲ ವಿಶ್ವಸ್ಥರ ಕರ್ತವ್ಯವಾಗಿದೆ. ನಮ್ಮಲ್ಲಿರುವ ಸಂಘಟನೆಯ ಅಭಾವ, ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂ ಸಂಸ್ಕೃತಿಯ ನಾಶವಾಗುತ್ತಿದ್ದು, ಅದರ ರಕ್ಷಣೆ ಮಾಡುವ ಕರ್ತವ್ಯ ವಿಶ್ವಸ್ಥರದ್ದಾಗಿದೆ. ಮುಂದಿನ ಪೀಳಿಗೆಯು ನಮ್ಮ ಬೆಳೆದುಬಂದ ದೇವಸ್ಥಾನವನ್ನು ನಡೆಸಿಕೊಂಡು ಹೋಗಬೇಕಾದರೆ ಅವರಿಗೆ ಧರ್ಮಶಿಕ್ಷಣವನ್ನು ನೀಡುವುದು ಅಗತ್ಯ. ದೇವಸ್ಥಾನಗಳ ಸಂರಕ್ಷಣೆಯೆಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಡೆಗೆ ಮೊದಲ ಹೆಜ್ಜೆಯಾಗಿದೆ, ಈ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ ಕೊಲ್ಲಿರ ಶ್ರೀ. ಧರ್ಮಜ ಇವರು ಕರೆ ನೀಡಿದರು.
ದೇವಸ್ಥಾನಗಳ ರಕ್ಷಣೆಯಾಗಲು ಹಿಂದೂಗಳು ಸಂಘಟಿತರಾಗುವುದು ಅವಶ್ಯಕ ! – ಶ್ರೀ. ಮುಕ್ಕಟ್ಟಿರ ಕ್ಯಾಪ್ಟನ್ ಎ. ಮಾದಪ್ಪ
ಒಂದು ದೇವಸ್ಥಾನದ ರಕ್ಷಣೆಯ ಕಾರ್ಯ ಮಾಡುವಾಗ ಅವರಿಗೆ ಸಿಕ್ಕಿದ ಅನುಭವವನ್ನು ಹಂಚಿಕೊಳ್ಳುತ್ತಾ ಕ್ಯಾಪ್ಟನ್ ಮಾದಪ್ಪ ಇವರು ಉಪಸ್ಥಿತ ದೇವಸ್ಥಾನದ ವಿಶ್ವಸ್ಥರ ಮನಸ್ಸಿನಲ್ಲಿ ಹಿಂದೂ ಸಂಘಟನೆಯ ಮಹತ್ವವನ್ನು ಬಿಂಬಿಸಿದರು. ದೇವಸ್ಥಾನಗಳ ರಕ್ಷಣೆಯಾಗಲು ಹಿಂದೂಗಳು ಸಂಘಟಿತರಾಗುವುದು ತುಂಬಾ ಅಗತ್ಯವಾಗಿದೆ` ಎಂದರು.
ಈ ಅಧಿವೇಶನದಲ್ಲಿ 175 ಕ್ಕೂ ಅಧಿಕ ದೇವಸ್ಥಾನ ವಿಶ್ವಸ್ಥರು, ಪ್ರತಿನಿಧಿಗಳು, ಪುರೋಹಿತರು, ದೇವಸ್ಥಾನದ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು ಮುಂತಾದವರು ಉಪಸ್ಥಿತರಿದ್ದರು.
ತಮ್ಮ ಸವಿನಯ,
ಶ್ರೀ. ವಿಜಯ ಕುಮಾರ
ಕರ್ನಾಟಕ ಮಂದಿರ ಮಹಾಸಂಘ
(ಸಂಪರ್ಕ : 7204082652)