






ವಿಜೃಂಭಣೆಯಿಂದ ನೆರವೇರಿದ ಶ್ರೀ ಚೌಡೇಶ್ವರಿ ದೇವಿ 48ನೇ ವರ್ಷದ ಜ್ಯೋತಿ ಮಹೋತ್ಸವ :
ಯಲಹಂಕ : ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್, ಶ್ರೀ ತೊಗಟವೀರ ಕ್ಷತ್ರಿಯ ಸಂಘ ಮತ್ತು ಶ್ರೀ ಚೌಡೇಶ್ವರಿ ದೇವಿ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಂಜೆ ನಡೆದ ಯಲಹಂಕದ ಶ್ರೀ ಚೌಡೇಶ್ವರಿದೇವಿ ಜ್ಯೋತಿ ಮಹೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯಿಂದ ನೆರೆವೇರಿತು.
ಜ್ಯೋತಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 5 ಗಂಟಗೆ ದೇವಿಗೆ ಪಂಚಾಮೃತ ಅಭಿಷೇಕ, 8 ಗಂಟಗೆ ಕಳಶ ಸೇವೆ, ರಾಜಬೀದಿಗಳಲ್ಲಿ ಮೆರವಣಿಗೆ, ಸಂಜೆ ಅಗ್ನಿಕುಂಡ ಪ್ರವೇಶದೊಂದಿಗೆ ಚೌಡೇಶ್ವರಿ ಅಮ್ಮನವರ ಜ್ಯೋತಿ ಉತ್ಸವ, ಪಲ್ಲಕ್ಕಿ ಉತ್ಸವ ನೆರವೇರಿತು. ಈ ವೇಳೆಯಲ್ಲಿ ಆಂಧ್ರದ ಪ್ರಖ್ಯಾತ ಪ್ರೊದ್ದುಟೂರು ಬ್ಯಾಂಡ್ ಸೆಟ್, ಪಿಳ್ಳಂಗೋವಿ, ಸಾಗರದ ಮಹಿಳಾ ಡೋಲು ಕುಣಿತ, ಮಹಿಳಾ ವೀರಗಾಸೆ, ಬಂಟ್ವಾಳದ ಮಹಿಳಾ ಚಂಡೆ ಕುಣಿತ, ನಂದಿ ಕುಣಿತ, ಪಟದ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಚೌಡೇಶ್ವರಿ ದೇವಿಯ ಜ್ಯೋತಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಉತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ಇದೇ ವೇಳೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿಸುರೇಶ್, ರಾಜ್ಯ ತೊಗಟವೀರ ಕ್ಷತ್ರಿಯ ಸಂಘದ ಅಧ್ಯಕ್ಷ ಸೋಮ ಶೇಖರ್, ಸಮಾಜ ಸೇವಕರಾದ ಸೂರ್ಯ ನಾರಾಯಣಸ್ವಾಮಿ, ಜೀವಾನಂದಂ, ರಾಮಚಂದ್ರಪ್ಪ, ಸೋಮಶೇಖರ್, ಕಾಂತರಾಜು, ಚೌಡೇಶ್ವರಿ ವಾರ್ಡ್ ಬಿಜೆಪಿ ಮುಖಂಡರಾದ ವಿ.ವಿ. ರಾಮಮೂರ್ತಿ, ಕೆ.ವಿ.ರವಿಶಂಕರ್, ದಾಮೋದರ್, ವೇಣುಗೋಪಾಲ್, ಸುನಿಲ್ ಕುಮಾರ್ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ಉತ್ಸವದ ನೇತೃತ್ವವನ್ನು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷರಾದ ಎಂ.ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಆರ್.ನಾರಾಯಣ ರಾವ್, ಉಪಾಧ್ಯಕ್ಷ ಎ.ಎಸ್. ರಾಮದಾಸ್, ಪ್ರಧಾನ ಕಾರ್ಯದರ್ಶಿ ಆರ್.ಮಲ್ಲಿಕಾರ್ಜುನಪ್ಪ, ಟ್ರಸ್ಟಿಗಳಾದ ಜಿ.ಮಲ್ಲಿಕಾರ್ಜುನಪ್ಪ, ಆರ್.ವಿ.ವೆಂಕಟರಮಣ, ಜಿ.ಮದನಮೋಹನ್, ಎಸ್.ರಾಮಕೃಷ್ಣ, ಬಿ.ಕೇಶವ, ಯಲಹಂಕ ತೊಗಟವೀರ ಕ್ಷತ್ರಿಯ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸಲು, ಕಾರ್ಯಾಧ್ಯಕ್ಷ ಎ.ಎಸ್.ರಾಜ, ಕಾರ್ಯದರ್ಶಿ ಬಿ.ರಾಮಚಂದ್ರಯ್ಯ(ಬಿ.ಸಿ.), ಖಜಾಂಚಿ ಸಿ.ಆರ್.ಚಿನ್ನರೆಡ್ಡಪ್ಪ, ಉಪ ಖಜಾಂಚಿ ಆರ್.ವೆಂಕಟ ರಮಣಪ್ಪ ಮತ್ತು ಶ್ರೀ ಚೌಡೇಶ್ವರಿದೇವಿ ಸೇವಾ ಸಮಿತಿಯ ಅಧ್ಯಕ್ಷ ಎಂ.ಸಿ.ಸೋಮಶೇಖರ್, ಖಜಾಂಚಿ ಆರ್.ರವಿಕುಮಾರ್, ಉಪಾಧ್ಯಕ್ಷರಾದ ಎನ್.ಎಸ್. ಲಕ್ಷ್ಮೀನಾರಾಯಣ, ಎಂ.ವಿ. ರಂಗರಾಜು, ಉಪ ಕಾರ್ಯದರ್ಶಿಗಳಾದ ಸಿ.ಆರ್.ಮಂಜುನಾಥ್, ಎನ್.ವಿ.ನಾರಾಯಣಸ್ವಾಮಿ, ಉಪ ಖಜಾಂಚಿಗಳಾದ ಆರ್.ವಿ.ಹರಿಕೃಷ್ಣ, ಎನ್.ರಮೇಶ್, ಕಾರ್ಯ ನಿರ್ವಾಹಕರಾದ ಸಿ.ವಿ. ಶಿವಕುಮಾರ್, ಸಿ.ಆರ್. ವೆಂಕಟರಾಗುಲು ಸೇರಿದಂತೆ ಮೂರೂ ಸಂಘಗಳ ನಿರ್ದೇಶಕರು ವಹಿಸಿದ್ದರು.