ಚಿಕ್ಕಬಳ್ಳಾಪುರ: ವಿಧ್ಯಾರ್ಥಿಗಳೆ ನೀವು ಯಶಸ್ಸು ಕಾಣಬೇಕಾ,ತಂದೆ ತಾಯಿಗೆ ಚನ್ನಾಗಿ ನೋಡ್ಕೂ ಬೇಕಾ ದುಡ್ಡು ಸಂಪಾದನೆ ಮಾಡಬೇಕಾ ಒಂದು ಗೋಲ್ಡನ್ ಸೀಕ್ರೇಟ್ ಹೇಳುತ್ತೇನೆ ಕೇಳಿ ನಿಮ್ಮ ಮನಸ್ಸಿಗೆ ಯಾವುದು ಸರಿ ಅನ್ನಿಸುತ್ತೆ ಅದನ್ನು ಮಾಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ದೀ ಗೋಲ್ಡನ್ ಗ್ಲೀಮ್ಸ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ( ಫ್ರೆಶರ್ಸ್ ಡೆ )”ಆಹ್ವಾನ”2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯಶಸ್ಸು ಗಳಿಸಲು ಸಾಧ್ಯವಾಗಿದೆ ದುಡುಕು ನಿರ್ಧಾರ ತೆಗೆದುಕೊಳ್ಳುವ ಮೂಲಕ ತಮ್ಮನ್ನು ತಾವೆ ನಷ್ಟ ಮಾಡಿಕೊಳ್ಳ ಬೇಡಿ, ಶ್ರಮದಿಂದ ಮುಂದೆ ನುಗ್ಗಿ ಮುಂದೊಂದು ದಿನ ಯಶಸ್ಸು ಸಿಗಲಿದೆ,ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ಮಾಡಬೇಡಿ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ಕಲಿಕಾ ಸಾಮರ್ಥ್ಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಕಲಿಕಾ ಸಾಮರ್ಥ್ಯ ಹೆಚ್ಚು ಮಾಡಲು ತಮ್ಮನ್ನು ತಾವೆ ತಯಾರಿ ಮಾಡಿ ಶ್ರಮ ವಹಿಸಿ ಮುಂದೆ ಬನ್ನಿ ಯಶಸ್ಸು ನಿಮ್ಮದೇ ಆಗಲಿದೆ ಎಂದರು.
ದೀ ಗೋಲ್ಡನ್ ಗ್ಲೀಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಸಿ.ಎಂ.
ಮುನಿಕೃಷ್ಣ ಮಾತನಾಡಿ ವಿಧ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಬೆಳೆಯಲು ಶಿಕ್ಷಕರ ಪಾತ್ರ
ಬಹುಮುಖ್ಯ,ವಿಧ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಏರಿದರೆ ಅದನ್ನು ನೋಡಿ ಶಿಕ್ಷಕರು ಖುಷಿ ಪಡುತ್ತಾರೆ ಆ ಒಂದು ಖುಷಿಯೆ ಶಿಕ್ಷಕರ ಮನಸ್ಸಿಗೆ ತ್ರುಪ್ತಿ ಕೊಡುತ್ತೆ ವಿಧ್ಯಾರ್ಥಿಗಳ ಫಲಿತಾಂಶವನ್ನ ಸಂಭ್ರಮ ಪಡುವ ವ್ಯಕ್ತಿಗಳಲ್ಲಿ ಪ್ರಥಮ ಸ್ಥಾನ ಶಿಕ್ಷಕರದ್ದು ಎಂದು ಹೇಳಿದರು,
ವಿಧ್ಯಾರ್ಥಿಗಳು ಒಳ್ಳೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಒಳ್ಳೆ ವ್ಯಕ್ತಿಗಳಾಗಿ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕು ನಿಮ್ಮ ಸುತ್ತ ಮುತ್ತ ಬಹಳಷ್ಟು ಶ್ರಮ ವಹಿಸಿ ಮುಂದೆ ಬಂದಿರುವ ವ್ಯಕ್ತಿಗಳು ಇರುತ್ತಾರೆ ಅವರಿಗೆ ಆದರ್ಶವಾಗಿ ತೆಗೆದುಕೊಂಡು ಮುಂದೆ ಬರಬೇಕು ಉನ್ನತ ಶಿಕ್ಷಣ ಪಡೆಯಲು ಶ್ರಮ ವಹಿಸಬೇಕು ಶ್ರಮದಿಂದ ಎಲ್ಲವೂ ಸಾಧ್ಯ,
ವಿಧ್ಯಾರ್ಥಿಗಳು ಶ್ರಮ ಪಡುವ ರೂಡಿ ರೂಪಿಸಿಕೊಳ್ಳಬೇಕು ನೀವು ಮಾಡುವ ಶ್ರಮ ಒಂದಲ್ಲ ಒಂದು ದಿನ ಫಲ ನೀಡಲಿದೆ,ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ ಎಂದ ಅವರು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಹಾಗೂ ಶೈಕ್ಷಣಿಕ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಶಿಕ್ಷಣದಿಂದ ಒಳ್ಳೆಯ ಬದುಕು ಕಟ್ಟಿಕೊಳ್ಳ ಬಹುದು ಪ್ರತಿಯೊಬ್ಬರೂ ಶಿಕ್ಷಣ ಪಡೆದು ಒಳ್ಳೆಯ ವ್ಯಕ್ತಿಗಳಾಬೇಕು ಎಂದರು. ವೇದಿಕೆ ಮೇಲೆ ಉಪಸ್ಥಿತರಿದ್ದ ಶಾಸಕರಾದ ಪ್ರದೀಪ್ ಈಶ್ವರ್ ರವರ ಬಗ್ಗೆ ಮಾತನಾಡಿದ ಪ್ರಾಂಶುಪಾಲ ಮುನಿಕೃಷ್ಣ ಶಾಸಕರು ವಿಧ್ಯಾರ್ಥಿಗಳಿಗೆ ಶಿಕ್ಷಣ ಬಗ್ಗೆಯೆ ಹೆಚ್ಚು ಮಾತನಾಡುತ್ತಾರೆ ವಿಧ್ಯಾರ್ಥಿಗಳು ಅವರ ಮಾತುಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತಾರೆ ಅವರು ಪಡೆದಂತಹ ಶ್ರಮದಿಂದ ಇಂದು ಅವರು ಶಾಸಕ ರಾಗಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ 
ಚಂದ್ರಯ್ಯ, ಸರ್ಕಾರಿ ವಿಶ್ವ ವಿದ್ಯಾಲಯ ಶಿಕ್ಷಣ ಕಾಲೇಜು ಪ್ರರಾಧ್ಯಾಪಕರಾದ ಲೋಕನಾಥ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಕಾಲೇಜು ವತಿಯಿಂದ ಶಾಸಕರಾದ ಪ್ರದೀಪ್ ಈಶ್ವರ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಹೆಚ್ಚು ಅಂಕ ಪಡೆದ ಕಾಲೇಜಿನ ಎರಡು ವಿದ್ಯಾರ್ಥಿಗಳಿಗೆ
ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಮೋಹನ್ ಆರ್,
ಉಪನ್ಯಾಸಕರಾದ ಮಂಜುನಾಥ್,
ಕವಿತಾ ಮತ್ತು ಇನ್ನಿತರರು ಉಪಸ್ಥಿತರಿದ್ದರು.ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

Leave a Reply

Your email address will not be published. Required fields are marked *