8 ಕೋಟಿ ರು.ವೆಚ್ಚದ ಈಜುಕೊಳ, ಕ್ರೀಡಾ ಸಮುಚ್ಚಯ ಉದ್ಘಾಟನೆ :
ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಅಲ್ಲಾಳಸಂದ್ರ ಕೆರೆ ಸಮೀಪ 8 ಕೋಟಿ ರು.ಅಂದಾಜು ವೆಚ್ಚದಲ್ಲಿ ನೂತನವಾಗಿ ನಿರ್ಮಿತವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಈಜುಕೊಳ, ಕ್ರೀಡಾ ಸಮುಚ್ಚಯವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಉತ್ತಮ ದೈಹಿಕ‌ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ, ವಿಶೇಷವಾಗಿ ಈಜು‌ ಈ ದಿಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಖಾಸಗಿ ಈಜುಕೊಳಗಳಲ್ಲಿ ದುಬಾರಿ ಬೆಲೆತೆತ್ತು ಈಜಾಡುವುದು ಕಷ್ಟಸಾಧ್ಯವಿರುವ ಕಾರಣದಿಂದಾಗಿ ಇತ್ತೀಚಿನ ಮಕ್ಕಳು, ಯುವಕರು ಈಜನ್ನು ಮರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ 8 ಕೋಟಿ ರು.ವೆಚ್ಚದಲ್ಲಿ ಒಂದೇ ಸೂರಿನ ಅಡಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಒಳಗೊಂಡ ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್, ಜಿಮ್ ಒಳಗೊಂಡ ಕ್ರೀಡಾ ಸಮುಚ್ಚಯವನ್ನು ನಿರ್ಮಿಸಿ ಕೈಗೆಟುಗುವ ದರದಲ್ಲಿ ಈಜು ತರಬೇತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳು, ಯುವಕರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು. ವಿಶೇಷವಾಗಿ ಮಕ್ಕಳು ಮತ್ತು ಯುವಕರು ಇಲ್ಲಿ ಉತ್ತಮ ಈಜು ತರಬೇತಿ ಪಡೆದುಕೊಳ್ಳುವ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಈಜುಪಟುಗಳಾಗಿ ಹೊರಹೊಮ್ಮುವಂತಾಗಲಿ ಎಂದು ಶುಭ ಹಾರೈಸಿದರು.
ಈಜುಕೊಳ ನಿರ್ಮಿಸಿರುವ ಸ್ಪೂರ್ತಿ ಕನ್ಸ್ಟ್ರಕ್ಷನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ವರಯ್ಯ ಮಾತನಾಡಿ ‘ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಒಳಗೊಂಡ ಈಜುಕೊಳವನ್ನು ಇಲ್ಲಿ ನಿರ್ಮಿಸಲಾಗಿದ್ದು, ಇಲ್ಲಿನ ಪರಿಸರ ಸಹ ಪೂರಕವಾಗಿ ಉತ್ತಮವಾಗಿ ಇರುವುದರಿಂದ ಸಾರ್ವಜನಿಕರು ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಮಕ್ಕಳು, ಯುವಕರಿಗೆ ಈಜು ತರಬೇತಿ ನೀಡಲು ಅತ್ಯುತ್ತಮ ತಜ್ಞ ತರಬೇತುದಾರನ್ನು ನೇಮಿಸುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಅತ್ಯುತ್ತಮ ಈಜುಪಟುಗಳನ್ನು ಇಲ್ಲಿಂದ ಕೊಡುಗೆಯಾಗಿ ನೀಡಬೇಕಡಂಬುದು ನಮ್ಮ ಆಶಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಮುನಿರಾಜು, ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಸುಧಾಕರ್, ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ , ಮುರಾರಿರಾಮು, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಯಲಹಂಕ ಉಪನಗರ ವಾರ್ಡ್ 4ರ ಬಿಜೆಪಿ ಅಧ್ಯಕ್ಷ ಎಸ್.ರಾಜಣ್ಣ, ನಗರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಯುವ ಮೋರ್ಚಾ ಅಧ್ಯಕ್ಷ ಎಸ್.ಎಚ್.ಕಿರಣ್, ಅಕ್ಷತ್, ಮುಖ್ಯ ತರಬೇತುದಾರ ಮಧುಕುಮಾರ್ ಬಿ.ಎಂ. ಬಿಜೆಪಿ ಮುಖಂಡರಾದ ಅಲ್ಲಾಳಸಂದ್ರ ಸೋಮಶೇಖರ್, ಎ.ಎನ್.ಮಧುಸೂದನ್, ಓಂ ರವೀಂದ್ರ, ವೆಂಕಟೇಗೌಡ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *