

ಯಲಹಂಕ ಸುದ್ದಿ.
ಯಲಹಂಕ ಉಪನಗರದಲ್ಲಿ
ಸಮರಕಲೆಯ ರಾಜ್ಯಮಟ್ಟದ ಚಾಂಪಿಯನ್ ಶಿಪ್ ಕಾರ್ಯಕ್ರಮ
. *
ಯಲಹಂಕ: ಕಲರಿ ಪಯಟ್ಟು ಕೌನ್ಸಿಲ್ ಆಫ್ ಕರ್ನಾಟಕ ವತಿಯಿಂದ ಯಲಹಂಕ ಉಪನಗರ 5ನೇ ಹಂತದಲ್ಲಿರುವ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಸಭಾಂಗಣದಲ್ಲಿ (ನಿಸರ್ಗ ಕ್ರೀಡಾಂಗಣ)
ಕಲರಿಪಯಟ್ಟು ರಾಜ್ಯ ಚಾಂಪಿಯನ್ ಶಿಫ್ 2024- 25ರ ಮಕ್ಕಳ ಸಮರ ಕಲೆ ಪ್ರದರ್ಶನ ನೆಡೆಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಲಹಂಕ ಕ್ಷೇತ್ರದ ಶಾಸಕರಾದ ಎಸ್.ಆರ್ ವಿಶ್ವನಾಥ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಆಯೋಜಕರಾದ ವಿ.ಕಮ್ಯುನಿಟಿಯ ಶ್ರೀಮತಿ ಶೈಲಜಾ ವೆಂಕಟ್ ಮತ್ತು ಚಂದನ್ ವರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅಥಿತಿಗಳಾದ ಕ್ಯಾಪ್ಟನ್ ಎಂ ರಾಜೇಶ್ ಜಯಸಿಂಹ(ಕರ್ನಾಟಕ ಸರ್ಕಾರದ ಕಮಾಂಡೆಂಟ್ ಮತ್ತು ಸಿ ವಿ ಓ) ರವರಿಗೆ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು. ಕರಾಟೆ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಶಾಸಕರು ಪ್ರಶಸ್ತಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಆರ್ ವಿಶ್ವನಾಥ್ ಸಮರಕಲೆಯ 2024 25ರ ರಾಜ್ಯ ಚಾಂಪಿಯನ್ ಶಿಪ್ ಗೆ
ರಾಜ್ಯದ ಮೂಲೆ ಮೂಲೆಗಳಿಂದ ಗಂಡು ಮತ್ತು ಹೆಣ್ಣು ಮಕ್ಕಳು ಸಬ್ ಜೂನಿಯರ್ ಜೂನಿಯರ್ ಮತ್ತು ಸೀನಿಯರ್
ವಿಭಾಗಗಳಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಳ್ಳುತ್ತಿದ್ದಾರೆ. ಅಲ್ಲೇ ತಮ್ಮ ಪ್ರಬುದ್ಧ ಪ್ರದರ್ಶನ ನೀಡಿ ಚಾಂಪಿಯನ್ ಗಳಾಗಿ ಹೊರ ಹೊಮ್ಮಲಿರುತ್ತಾರೆ. ಮಕ್ಕಳ ಪ್ರತಿಭೆಯನ್ನು ಹೊರ ಹಾಕುವುದೇ ಕಲರಿಪಯಟ್ಟು, ಸಮರಕಲೆಯ ಉದ್ದೇಶವಾಗಿದೆ.
ಕರಾಟೆ ಮುಂತಾದ ಸಮರ ಕಲೆಗಳನ್ನು ಚಿಕ್ಕವಯಸ್ಸಿನ ಮಕ್ಕಳಿಗೆ ಕಲಿಸಿ ಅವರನ್ನು ಸ್ವಯಂ ರಕ್ಷಣೆ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿ ದೈಹಿಕವಾಗಿ ಶಕ್ತರಾಗಿ ಮಾಡುತ್ತಿರುವ ಕಲರಿ ಪಯಟ್ಟು ಕೌನ್ಸಿಲ್ ಆಫ್ ಕರ್ನಾಟಕದ ಸಾಧನೆ ಶ್ಲಾಘನೀಯವಾಗಿದೆ ಎಂದರು.
ಉಮೇಶ್, ಯಲಹಂಕ