ಎನ್ ಎಂ ಎಂ ಎಸ್ ಆಯ್ಕೆ.
ಹರಳಯ್ಯ ಸಮಾಜದಿಂದ ಸನ್ಮಾನ.
ಬದಾಮಿ 18.ಇತ್ತೀಚಿಗೆ ಪ್ರಕಟಗೊಂಡ ರಾಷ್ಟ್ರ ಮಟ್ಟದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಬದಾಮಿಯ ನಮ್ಮ ಸಮಾಜದ ವಿದ್ಯಾರ್ಥಿ ಮನೋಜ್ ರವಿಕುಮಾರ್ ಗಾಮನಗಟ್ಟಿ ತಾಲೂಕಿಗೆ 10 ನೇ ಸ್ಥಾನ ಪಡೆದು ಆಯ್ಕೆಯಾಗಿ ಸಮಾಜಕ್ಕೆ, ಕಲಿತ ಶಾಲೆಗೆ ಮತ್ತು ತಂದೆ ತಾಯಿಗೆ ಕೀರ್ತಿ ತಂದ ಪ್ರಯುಕ್ತ ಸ್ಥಳೀಯ ಶ್ರೀ ಶಿವಶರಣ ಹರಳಯ್ಯ ಸಮಾಜ ವತಿಯಿಂದ ಅದ್ಯಕ್ಷ ನಾಗರಾಜ ಹ ಹೊಸಮನಿ ಶಾಲು ಹೊದಿಸಿ. ಫಲ ಪುಷ್ಪ ನೀಡಿ ಸನ್ಮಾನಿಸಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ವಿದ್ಯಾರ್ಥಿ ಮನೋಜ್ ತನ್ನ ಶೈಕ್ಷಣಿಕ ಸಾಮರ್ಥ್ಯವನ್ನು ಈ ಮೂಲಕ ತೋರಿಸಿ ಕೊಟ್ಟಿದ್ದು, ಇನ್ನುಳಿದ ನಮ್ಮ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಅತೀ ಹೆಚ್ಚು ಅಂಕಗಳನ್ನು ಪಡೆಯುವದರ ಮೂಲಕ ತಮ್ಮ ಶೈಕ್ಷಣಿಕ ಸಾಮರ್ಥ್ಯ ತೋರಿಸುತ್ತ ಈಗಿನಿಂದಲೇ ಕಾರ್ಯ ಪ್ರವ್ರತ್ತರಾಗುವಂತೆ ಸನ್ಮಾನಿಸಿ ಅದ್ಯಕ್ಷ ನಾಗರಾಜ ಹ ಹೊಸಮನಿ ಮಾತನಾಡಿದರು.
ಸನ್ಮಾನಿತ ವಿದ್ಯಾರ್ಥಿ ಮನೋಜ್ ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಇದೇರೀತಿ ಸಾಧನೆ ಮಾಡುತ್ತ ಉನ್ನತ ಹುದ್ದೆ ಪಡೆಯುವಂತಾಗಲೆಂದು ಸಮಾಜದ ಹಿರಿಯ ಮುಖಂಡ ಮಲಕಾಜಪ್ಪ ಚಂದಾವರಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮನೋಜ್ ತಂದೆ, ತಾಯಿ, ಅಜ್ಜಿ, ಹಾಗೂ ಸಮಾಜದ ಮುಖಂಡರು, ಮಹಿಳಾ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *