ಚಿಕ್ಕಬಳ್ಳಾಪುರ ನಗರದ ಹೊರವಲಯದ ಶ್ರೀ ಕೆ.ವಿ.ಮತ್ತು ಪಂಚಗಿರಿ ದತ್ತಿ ಮತ್ತು ಸಿವಿವಿ ರವರ ಹುಟ್ಟು ಹಬ್ಬದ ಅಂಗವಾಗಿ ದತ್ತಿ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಲಾಯಿತು.
ಡಾ.ಅಜಿತ್ ಪ್ರಸಾದ್, ನಿವೃತ್ತ ಡಿ.ಡಿ.ಪಿ.ಐ , ಡಾ.ನಾಗರಾಜ್, ನಾರು ಬೇರು ಕಲಾವಿದ, ನಂದಿ ಬೆಟ್ಟದ ದೇವಲಾಯದ ಪ್ರದಾನ ಅರ್ಚಕರು, ಪೃಥ್ವಿರಾಜ್.ಸಿ.ಎನ್. ನಿಸರ್ಗ ಪ್ರೇಮಿ, ಪ್ರಾಣಿ ಪಕ್ಷಿ, ಸಸ್ಯ ಸಂಕುಲ ಪ್ರಿಯರು ಮತ್ತು ಹಾವುಗಳನ್ನು ಹಿಡಿಯುವದರಲ್ಲಿ ಪರಿಣಿತರು, ಎನ್.ಶ್ರೀನಿವಾಸ್, ರಕ್ತದಾನಿ, ಅನಿಲ್ ಕುಮಾರ್, ಸಾಮಾಜಿಕ ಕಾರ್ಯಕರ್ತ, ಚಿಂತಾಮಣಿ, ಗುರುಪ್ರಸಾದ್ ಕಾಂಚಾಣ, ಸಾಮಾಜಿಕ ಕಾರ್ಯಕರ್ತ, ಶ್ರೀನಿವಾಸ ರೆಡ್ಡಿ, ಸಾಮಾಜಿಕ ಸೇವೆ ಅವರಲ್ಲದೆ ಇನ್ನೂ ೪ ಜನರನ್ನು ಈ ಸಂದರ್ಭದಲ್ಲಿ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ರವರು ಸನ್ಮಾನಿಸಿದರು.
