ಚಿಕ್ಕಬಳ್ಳಾಪುರ: ಶಾಸಕನಾಗಿ ಆಯ್ಕೆಯಾಗಿರುವುದೇ ಲಾಟರಿ, ಇದರಿಂದ ಇತರೆ ರಾಜಕಾರಣಿಗಳಂತೆ ಅಭತ್ರೆ ಇಲ್ಲ. ಈ ನಿಟ್ಟಿನಲ್ಲಿ ಇನ್ನೂ ೩೦ ವರ್ಷ ಅಧಿಕಾರ ಎನ್ನದೆ, ೫ ವರ್ಷ ಕ್ಷೇತ್ರದ ಜನತೆಗೆ ಅಗತ್ಯವಿರುವ ಸೇವೆ ಮಾಡುವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಆಟೋ ಚಾಲಕರ ಮಕ್ಕಳಿಗೆ ತಲಾ ೫ ಸಾವಿರ ನಗದು ವಿತರಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಬದಲಾವಣೆ ತರಲು ಆಶಿಸಿದ್ದು, ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದೆ,ಇನ್ನು ೫ ವರ್ಷಗಳಲ್ಲಿ ತಾವು ಆಶಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ, ಇದಕ್ಕೆ ಸಿದ್ದತೆ ನಡೆಸುತ್ತಿದ್ದಂತೆ ತಮ್ಮ ವಿರುದ್ಧ ಕೆಲ ರಾಜಕಾರಣಿಗಳು ತಿರುಗಿಬಿದ್ದಿದ್ದಾರೆ ಎಂದು ನುಡಿದರು.
ಚುನಾವಣೆಯ ಗಿಮಿಕ್ ಮಾಡುತ್ತಿಲ್ಲ, ಚುನಾವಣೆಗೆ ಇನ್ನೂ ನಾಲ್ಕೂವರೆ ವರ್ಷವಿದೆ. ಆದರೆ ಅದಕ್ಕೂ ಮುನ್ನವೇ ಮತದಾರರಿಗೆ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ, ಚುನಾವಣೆಯಲ್ಲಿ ನಾನು ಯಾರ ಬಳಿಯೂ ಮತ ಕೇಳುವುದಿಲ್ಲ. ನಾನು ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ, ನನ್ನನ್ನು ಆಯ್ಕೆ ಮಾಡಿ, ಇಲ್ಲವೆ ನಿಮಗೆ ಒಳ್ಳೆಯದ್ದನ್ನು ಮಾಡುವರೆಂದು ಯಾರನ್ನೇ ಚುನಾಯಿಸಿದರೂ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.
ಕ್ಷೇತ್ರವನ್ನು ಸಿಂಗಪುರ ಮಾಡಲ್ಲ ಆದರೆ ನಿಜವಾದ ಚಿಕ್ಕಬಳ್ಳಾಪುರ ಮಾಡುವೆ, ಸರ್ಕಾರ ಗ್ಯಾರೆಂಟಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜನತೆಗೆ ಅನುವು ಮಾಡಿಕೊಡುವೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಒಂದು ನಯಾ ಪೈಸೆ ನೀಡದೆ ಮಾಡಿಸಿಕೊಳ್ಳಿ, ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಅವಲಂಬಿಸದೇ ಸಮಸ್ಯೆಯಿದ್ದರೆ ತಮ್ಮನ್ನು ಸಂಪರ್ಕಿಸುವoತೆ ಹೇಳಿದರು.
ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು, ಯಾವುದೇ ಕಾರಣಕ್ಕೂ ವಾಹನಗಳನ್ನು ಮದ್ಯಸೇವಿಸಿ, ವೇಗವಾಗಿ ಚಲಾಯಿಸುವುದು ಮಾಡಬಾರದು. ಇದರಿಂದ ಅಪಘಾತಗಳು ಆದಲ್ಲಿ ಯಾರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ನಿಮ್ಮ ಮಕ್ಕಳು ಕುಟುಂಬದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ವಾಹನ ಚಾಲನೆ ಮಾಡಬೇಕೆಂದು ಸಲಹೆ ನೀಡಿದರು.
ತಾವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಮಾರ್ಚ್ನಿಂದ ಕ್ಷೇತ್ರದಲ್ಲಿ ಉಚಿತ ಸಿಇಟಿ, ನೀಟ್ ತರಬೇತಿ ಆರಂಭಿಸಲಾಗುವುದು. ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ತೆರೆದು ಉಚಿತ ತರಬೇತಿ ನೀಡುವ ಜೊತೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ೫ ವರ್ಷಗಳ ಕಾಲ ೧ ರಿಂದ ೧೦ ರವರೆಗಿನ ೨೦ ಸವಿರ ಶಾಲಾ ಮಕ್ಕಳಿಗೆ ಗಣೇಶನ ಹಬ್ಬಕ್ಕೆ ಬಟ್ಟೆ ನೀಡುವ ಜೊತೆಗೆ ಪ್ರತಿ ಮನೆಗೆ ವರಮಹಾಲಕ್ಷಿ ಹಬ್ಬದಂದು ಸೀರೆ ನೀಡುವುದಾಗಿ ಭರವಸೆ ನೀಡಿದರು.

ಬಾಕ್ಸ್
ಒಬ್ಬರನ್ನು ನಂಬಿ ಕೆಟ್ಟೆ
ಸುಧಾಕರ್ ಜೈ ಅನ್ನಬೇಡಿ, ಪ್ರದೀಪ್ ಈಶ್ವರ್ ಜೈ ಅನ್ನಬೇಡಿ. ನಾವು ಎಲ್ಲರೂ ಸ್ವಾರ್ಥಿಗಳೇ, ಯಾರನ್ನು ನಂಬಿಕೊoಡು ಹೋಗಬೇಡಿ ಮುಂದೆ ತೊಂದರೆ ಅನುಭವಿಸುವವರು ನೀವು. ನಾನು ಒಬ್ಬ ಲೀಡರ್ ಹಿಂದೆ ಹೋಗಿ ಕಷ್ಟಪಟ್ಟೆ ಎಂದು ಶಾಸಕ ಪ್ರದೀಪ್ ಈಶ್ವರ್ ನುಡಿದರು.
ಇತ್ತೀಚಿಗೆ ಕಿತ್ತಾಡಿದರು ಪ್ರಕರಣ ದಾಖಲಾಗಿದ್ದು ಅವರ ಬೆಂಬಲಿಗರ ಮೇಲೆ, ಮಾಜಿ ಸಚಿವ ಸುಧಾಕರ್ ಎಸಿ ಮನೆ, ಪಂಚತಾರಾ ಹೊಟೆಲ್‌ನಲ್ಲಿ ರ‍್ತಾರೆ. ಬೇಜಾರಾದರೆ ಲಂಡನ್ ಹೋಗ್ತಾರೆ, ಆದರೆ ನೀವು ಯಾರನ್ನಾದರೂ ನಂಬಿದರೆ ಅಣಕನೂರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆಂಬಲಿಗರಿಗೆ ಎಚ್ಚರಿಸಿದರು. ನಾನು ಯಾರ ಮೇಲು ವಿನಾಕಾರಣ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ತಿಳಿಸಿರುವೆ, ಪ್ರಕರಣ ದಾಖಲಾದ ಮೇಲೆ ನ್ಯಾಯಾಲಯದ ಸುತ್ತ ಸುತ್ತಲು ಆಗಲ್ಲ, ಈ ಕಷ್ಟವನ್ನು ನಾನು ೫ ವರ್ಷ ಅನುಭವಿಸಿರುವೆ, ಅದಕ್ಕೆ ಎಂಎಲ್‌ಎ ಆದೆ ಎಂದು ಹೇಳಿದರು.

ಬಾಕ್ಸ್
ಉಚಿತ ಆಂಬುಲೆನ್ಸ್ ಸೇವೆ
ಸ್ವಂತ ದುಡ್ಡಲ್ಲಿ ೫ ಆಂಬುಲೆನ್ಸ್ ಖರೀದಿಸಿ ಒಂದು ತಿಂಗಳಲ್ಲಿ ಉಚಿತ ಸೇವೆಯನ್ನು ಆರಂಭಿಸಿರುವುದಾಗಿ ತಿಳಿಸಿದ ಶಾಸಕ ಪ್ರದೀಪ್ ಈಶ್ವರ್, ಕ್ಷೇತ್ರದ ನಂದಿ, ಪೆರೇಸಂದ್ರ, ತಲಾ ಒಂದು ಚಿಕ್ಕಬಳ್ಳಾಪುರ ನಗರದಲ್ಲಿ ೨ ಆಂಬುಲೆನ್ಸ್ ಸೇವೆ ಸಂಪೂರ್ಣ ಉಚಿತವಾಗಿ ದಿನದ ೨೪ ಗಂಟೆಗಳ ಕಾಲ ಒದಗಿಸಲಿದ್ದು, ಆಪತ್ಕಾಲದಲ್ಲಿ ಚಿಕ್ಕಬಳ್ಳಾಪುರ ಅಥವಾ ಬೆಂಗಳೂರಿಗೆ ಒಂದೂ ರೂ ಸ್ವೀಕರಿಸದೆ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ಬಾಕ್ಸ್
ತೆಲುಗುನಲ್ಲಿ ಭಾಷಣ
ಎಂತೆಯ್ಯನಾ ಕೂಟಿಕೆ, ಎನ್ನಾಳ್ಳು ಬದುಕಿನ ಕಾಟಿಕೆ, ಬಿಡ್ಲಕಿ-ಮೊನಮ್ಲುಕಿ ಅನಾಕೊಡುಕಲಾಕಾ ಎತ್ತಿ ಪೆಟ್ಟೇಕಾ ಕಷ್ಟ ಪಡೆದಿ, ಕೊನಾ ಕಾಲಮುಲಾ ಕೂಡು ಕೂಡ ಎಯ್ಯರು, ಅಂತ ದುಡ್ಡು ಶೇಷಿ ಪೆಡಿತೆ. ಅಂದಿಕೆ ಬಿಡ್ಲಕಿ ಶೇಷೆಕಿ ಪೋವದ್ದಂಡಾ, ನಾಕಿ ಬಾಗ ತೆಲುಸು, ರೇಪು ಪುದ್ದುನ್ನೇ ನಾಬಿಡ್ಲು ಶೈಪೊಡತಾರೋ ಲೇದು ತೆಲುಸು, ಕಾನಿ ಬಳಾಪುರಮೊಳ್ಳು ಮೀರಂತು ಅನ್ನಮು ಪಡೆತಾರು ಎಂದು ತೆಲುಗು ಭಾಷೆಯಲ್ಲಿ ಭಾಷಣ ನೀಡಿ ಗಮನ ಸೆಳೆದರು.

ಬಾಕ್ಸ್
ಆಟೋ ಓಡಿಸಿದ ಪ್ರದೀಪ್
ಕಾರ್ಯಕ್ರಮ ಆರಂಭಕ್ಕೂ ಮುನ್ನ ಆಟೋ ಚಲಾಯಿಸಿ ಗಮನ ಸೆಳೆದ ಶಾಸಕ ಪ್ರದೀಪ್ ಈಶ್ವರ್ ಬಳಿಕ ಮಾತನಾಡಿ, ನನ್ನ ಕಷ್ಟಕಾಲದಲ್ಲಿ ನಾನೂ ಆಟೋ ಓಡಿಸಿದ್ದೇನೆ, ಈ ನಿಟ್ಟಿನಲ್ಲಿ ಆಟೋ ಚಾಲಕ ಸಮಸ್ಯೆಗಳ ಬಗ್ಗೆ ತಮಗೂ ಅರಿವಿದೆ. ನಿಮ್ಮ ಕಷ್ಟಕಾಲದಲ್ಲಿ ನಿಮ್ಮೊಂದಿಗೆ ಇರುವೆ, ನಾನು ಚುನಾವಣೆಯ ಗಿಮಿಕ್ ಮಾಡುತ್ತಿಲ್ಲ. ಇಂದು ನೀಡುತ್ತಿರುವ ೫ ಸಾವಿರ ಹಣದಲ್ಲಿ ಮಕ್ಕಳ ಶಾಲಾ ಶುಲ್ಕ ಪಾವತಿಸಿ, ಹೊಸ ಬಟ್ಟೆ ಕೊಡಿಸಿ, ಕುಟುಂಬದೊoದಿಗೆ ಸೇರಿ ಒಳ್ಳೆಯ ಊಟ ಮಾಡಿ, ಆದರೆ ಹಣವನ್ನು ಪೋಲು ಮಾಡದಿರಿ ಎಂದು ಸಲಹೆ ನೀಡಿದರು.

ಬಾಕ್ಸ್
ನಗರಸಭೆಯನ್ನು ಕ್ಲೀನ್ ಮಾಡುವೆ
ನಗರಸಭೆ ಸದ್ಯರು ಭಷ್ಟರೇ ಎಂದು ಪುನರುಚ್ಚರಿಸಿದ ಶಾಸಕ ಪ್ರದೀಪ್ ಈಶ್ವರ್, ನಗರಸಭೆಯಲ್ಲಿ ಭ್ರಷ್ಟಾಚಾರವು ನಡೆಯುತ್ತಿಲ್ಲ ಎಂದು ೧೦ ಮಂದಿಯಿoದ ಸಹಿ ಮಾಡಿಸಿಕೊಡಲಿ ನೋಡೋಣ ಎಂದು ಸವಾಲೆಸದರು. ಯಾರ ಬಳಿ ಕೈಚಾಚಿಲ್ಲ, ಯಾರನ್ನು ಕೈಚಾಚಲು ಬಿಡಲ್ಲ. ನಗರಸಭೆಯನ್ನು ಯಾವುದೇ ಕಾರಣಕ್ಕೂ ಕ್ಲೀನ್ ಮಾಡುವುದಾಗಿ ಶಪಥ ಮಾಡಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಂತೆ ಸದಸ್ಯರೆಲ್ಲರೂ ಸೇರಿ ನನ್ನ ವಿರುದ್ಧ ಆರೋಪ ಮಾಡಲು ಮುಂದಾಗುತ್ತಿದ್ದಾರೆ. ಆದರ ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದಲ್ಲಿ ಪ್ರಾಮಾಣಿಕತೆಗೆ ಮುನ್ನುಡಿ ಬರೆಯುತ್ತಿದ್ದು, ಸಾರ್ವಜನಿಕರು ಕಚೇರಿಯಲ್ಲಿ ಕೆಲಸ ಕಾರ್ಯ ಮಾಡಿಸಿಕೊಳ್ಳಲು ದಲ್ಲಾಳಿಗಳ ಮೊರೆ ಹೋಗದಂತೆ ಪುನರುಚ್ಚರಿಸಿದರು.
ಈ ಸಂದರಭದಲ್ಲಿ ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಖಲೀಲ್, ರಘು, ದಾಂಬೋ ಶ್ರೀನಿವಾಸ್, ಕೊಡಸ್ ವೆಂಕ್ತೇಶ್, ಯಲವಹಳ್ಳಿ ಜನಾರ್ಧನ್,ಕುಬೇರು ಅಚ್ಚು, ಪ್ರಸನ್ನ ಕುಮಾರ್,ಬಂಗಾರಿ, ಸಾದಿಕ್ ಮತ್ತು ಆಟೋ ಚಾಲಕರ ಮಕ್ಕಳು ಪ್ರದೀಪ್ ಅಭಿಮಾನಿಗಳು ಭಾಗವಹಿಸಿದ್ದರು.

ಶಾಸಕನಾಗಿ ಆಯ್ಕೆಯಾಗಿರುವುದೇ ಲಾಟರಿ-ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಶಾಸಕನಾಗಿ ಆಯ್ಕೆಯಾಗಿರುವುದೇ ಲಾಟರಿ, ಇದರಿಂದ ಇತರೆ ರಾಜಕಾರಣಿಗಳಂತೆ ಅಭತ್ರೆ ಇಲ್ಲ. ಈ ನಿಟ್ಟಿನಲ್ಲಿ ಇನ್ನೂ ೩೦ ವರ್ಷ ಅಧಿಕಾರ ಎನ್ನದೆ, ೫ ವರ್ಷ ಕ್ಷೇತ್ರದ ಜನತೆಗೆ ಅಗತ್ಯವಿರುವ ಸೇವೆ ಮಾಡುವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಆಟೋ ಚಾಲಕರ ಮಕ್ಕಳಿಗೆ ತಲಾ ೫ ಸಾವಿರ ನಗದು ವಿತರಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಬದಲಾವಣೆ ತರಲು ಆಶಿಸಿದ್ದು, ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದೆ,ಇನ್ನು ೫ ವರ್ಷಗಳಲ್ಲಿ ತಾವು ಆಶಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ, ಇದಕ್ಕೆ ಸಿದ್ದತೆ ನಡೆಸುತ್ತಿದ್ದಂತೆ ತಮ್ಮ ವಿರುದ್ಧ ಕೆಲ ರಾಜಕಾರಣಿಗಳು ತಿರುಗಿಬಿದ್ದಿದ್ದಾರೆ ಎಂದು ನುಡಿದರು.
ಚುನಾವಣೆಯ ಗಿಮಿಕ್ ಮಾಡುತ್ತಿಲ್ಲ, ಚುನಾವಣೆಗೆ ಇನ್ನೂ ನಾಲ್ಕೂವರೆ ವರ್ಷವಿದೆ. ಆದರೆ ಅದಕ್ಕೂ ಮುನ್ನವೇ ಮತದಾರರಿಗೆ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ, ಚುನಾವಣೆಯಲ್ಲಿ ನಾನು ಯಾರ ಬಳಿಯೂ ಮತ ಕೇಳುವುದಿಲ್ಲ. ನಾನು ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ, ನನ್ನನ್ನು ಆಯ್ಕೆ ಮಾಡಿ, ಇಲ್ಲವೆ ನಿಮಗೆ ಒಳ್ಳೆಯದ್ದನ್ನು ಮಾಡುವರೆಂದು ಯಾರನ್ನೇ ಚುನಾಯಿಸಿದರೂ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.
ಕ್ಷೇತ್ರವನ್ನು ಸಿಂಗಪುರ ಮಾಡಲ್ಲ ಆದರೆ ನಿಜವಾದ ಚಿಕ್ಕಬಳ್ಳಾಪುರ ಮಾಡುವೆ, ಸರ್ಕಾರ ಗ್ಯಾರೆಂಟಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜನತೆಗೆ ಅನುವು ಮಾಡಿಕೊಡುವೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಒಂದು ನಯಾ ಪೈಸೆ ನೀಡದೆ ಮಾಡಿಸಿಕೊಳ್ಳಿ, ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಅವಲಂಬಿಸದೇ ಸಮಸ್ಯೆಯಿದ್ದರೆ ತಮ್ಮನ್ನು ಸಂಪರ್ಕಿಸುವoತೆ ಹೇಳಿದರು.
ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು, ಯಾವುದೇ ಕಾರಣಕ್ಕೂ ವಾಹನಗಳನ್ನು ಮದ್ಯಸೇವಿಸಿ, ವೇಗವಾಗಿ ಚಲಾಯಿಸುವುದು ಮಾಡಬಾರದು. ಇದರಿಂದ ಅಪಘಾತಗಳು ಆದಲ್ಲಿ ಯಾರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ನಿಮ್ಮ ಮಕ್ಕಳು ಕುಟುಂಬದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ವಾಹನ ಚಾಲನೆ ಮಾಡಬೇಕೆಂದು ಸಲಹೆ ನೀಡಿದರು.
ತಾವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಮಾರ್ಚ್ನಿಂದ ಕ್ಷೇತ್ರದಲ್ಲಿ ಉಚಿತ ಸಿಇಟಿ, ನೀಟ್ ತರಬೇತಿ ಆರಂಭಿಸಲಾಗುವುದು. ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ತೆರೆದು ಉಚಿತ ತರಬೇತಿ ನೀಡುವ ಜೊತೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ೫ ವರ್ಷಗಳ ಕಾಲ ೧ ರಿಂದ ೧೦ ರವರೆಗಿನ ೨೦ ಸವಿರ ಶಾಲಾ ಮಕ್ಕಳಿಗೆ ಗಣೇಶನ ಹಬ್ಬಕ್ಕೆ ಬಟ್ಟೆ ನೀಡುವ ಜೊತೆಗೆ ಪ್ರತಿ ಮನೆಗೆ ವರಮಹಾಲಕ್ಷಿ ಹಬ್ಬದಂದು ಸೀರೆ ನೀಡುವುದಾಗಿ ಭರವಸೆ ನೀಡಿದರು.

ಬಾಕ್ಸ್
ಒಬ್ಬರನ್ನು ನಂಬಿ ಕೆಟ್ಟೆ
ಸುಧಾಕರ್ ಜೈ ಅನ್ನಬೇಡಿ, ಪ್ರದೀಪ್ ಈಶ್ವರ್ ಜೈ ಅನ್ನಬೇಡಿ. ನಾವು ಎಲ್ಲರೂ ಸ್ವಾರ್ಥಿಗಳೇ, ಯಾರನ್ನು ನಂಬಿಕೊoಡು ಹೋಗಬೇಡಿ ಮುಂದೆ ತೊಂದರೆ ಅನುಭವಿಸುವವರು ನೀವು. ನಾನು ಒಬ್ಬ ಲೀಡರ್ ಹಿಂದೆ ಹೋಗಿ ಕಷ್ಟಪಟ್ಟೆ ಎಂದು ಶಾಸಕ ಪ್ರದೀಪ್ ಈಶ್ವರ್ ನುಡಿದರು.
ಇತ್ತೀಚಿಗೆ ಕಿತ್ತಾಡಿದರು ಪ್ರಕರಣ ದಾಖಲಾಗಿದ್ದು ಅವರ ಬೆಂಬಲಿಗರ ಮೇಲೆ, ಮಾಜಿ ಸಚಿವ ಸುಧಾಕರ್ ಎಸಿ ಮನೆ, ಪಂಚತಾರಾ ಹೊಟೆಲ್‌ನಲ್ಲಿ ರ‍್ತಾರೆ. ಬೇಜಾರಾದರೆ ಲಂಡನ್ ಹೋಗ್ತಾರೆ, ಆದರೆ ನೀವು ಯಾರನ್ನಾದರೂ ನಂಬಿದರೆ ಅಣಕನೂರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆಂಬಲಿಗರಿಗೆ ಎಚ್ಚರಿಸಿದರು. ನಾನು ಯಾರ ಮೇಲು ವಿನಾಕಾರಣ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ತಿಳಿಸಿರುವೆ, ಪ್ರಕರಣ ದಾಖಲಾದ ಮೇಲೆ ನ್ಯಾಯಾಲಯದ ಸುತ್ತ ಸುತ್ತಲು ಆಗಲ್ಲ, ಈ ಕಷ್ಟವನ್ನು ನಾನು ೫ ವರ್ಷ ಅನುಭವಿಸಿರುವೆ, ಅದಕ್ಕೆ ಎಂಎಲ್‌ಎ ಆದೆ ಎಂದು ಹೇಳಿದರು.

ಬಾಕ್ಸ್
ಉಚಿತ ಆಂಬುಲೆನ್ಸ್ ಸೇವೆ
ಸ್ವಂತ ದುಡ್ಡಲ್ಲಿ ೫ ಆಂಬುಲೆನ್ಸ್ ಖರೀದಿಸಿ ಒಂದು ತಿಂಗಳಲ್ಲಿ ಉಚಿತ ಸೇವೆಯನ್ನು ಆರಂಭಿಸಿರುವುದಾಗಿ ತಿಳಿಸಿದ ಶಾಸಕ ಪ್ರದೀಪ್ ಈಶ್ವರ್, ಕ್ಷೇತ್ರದ ನಂದಿ, ಪೆರೇಸಂದ್ರ, ತಲಾ ಒಂದು ಚಿಕ್ಕಬಳ್ಳಾಪುರ ನಗರದಲ್ಲಿ ೨ ಆಂಬುಲೆನ್ಸ್ ಸೇವೆ ಸಂಪೂರ್ಣ ಉಚಿತವಾಗಿ ದಿನದ ೨೪ ಗಂಟೆಗಳ ಕಾಲ ಒದಗಿಸಲಿದ್ದು, ಆಪತ್ಕಾಲದಲ್ಲಿ ಚಿಕ್ಕಬಳ್ಳಾಪುರ ಅಥವಾ ಬೆಂಗಳೂರಿಗೆ ಒಂದೂ ರೂ ಸ್ವೀಕರಿಸದೆ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ಬಾಕ್ಸ್
ತೆಲುಗುನಲ್ಲಿ ಭಾಷಣ
ಎಂತೆಯ್ಯನಾ ಕೂಟಿಕೆ, ಎನ್ನಾಳ್ಳು ಬದುಕಿನ ಕಾಟಿಕೆ, ಬಿಡ್ಲಕಿ-ಮೊನಮ್ಲುಕಿ ಅನಾಕೊಡುಕಲಾಕಾ ಎತ್ತಿ ಪೆಟ್ಟೇಕಾ ಕಷ್ಟ ಪಡೆದಿ, ಕೊನಾ ಕಾಲಮುಲಾ ಕೂಡು ಕೂಡ ಎಯ್ಯರು, ಅಂತ ದುಡ್ಡು ಶೇಷಿ ಪೆಡಿತೆ. ಅಂದಿಕೆ ಬಿಡ್ಲಕಿ ಶೇಷೆಕಿ ಪೋವದ್ದಂಡಾ, ನಾಕಿ ಬಾಗ ತೆಲುಸು, ರೇಪು ಪುದ್ದುನ್ನೇ ನಾಬಿಡ್ಲು ಶೈಪೊಡತಾರೋ ಲೇದು ತೆಲುಸು, ಕಾನಿ ಬಳಾಪುರಮೊಳ್ಳು ಮೀರಂತು ಅನ್ನಮು ಪಡೆತಾರು ಎಂದು ತೆಲುಗು ಭಾಷೆಯಲ್ಲಿ ಭಾಷಣ ನೀಡಿ ಗಮನ ಸೆಳೆದರು.

ಬಾಕ್ಸ್
ಆಟೋ ಓಡಿಸಿದ ಪ್ರದೀಪ್
ಕಾರ್ಯಕ್ರಮ ಆರಂಭಕ್ಕೂ ಮುನ್ನ ಆಟೋ ಚಲಾಯಿಸಿ ಗಮನ ಸೆಳೆದ ಶಾಸಕ ಪ್ರದೀಪ್ ಈಶ್ವರ್ ಬಳಿಕ ಮಾತನಾಡಿ, ನನ್ನ ಕಷ್ಟಕಾಲದಲ್ಲಿ ನಾನೂ ಆಟೋ ಓಡಿಸಿದ್ದೇನೆ, ಈ ನಿಟ್ಟಿನಲ್ಲಿ ಆಟೋ ಚಾಲಕ ಸಮಸ್ಯೆಗಳ ಬಗ್ಗೆ ತಮಗೂ ಅರಿವಿದೆ. ನಿಮ್ಮ ಕಷ್ಟಕಾಲದಲ್ಲಿ ನಿಮ್ಮೊಂದಿಗೆ ಇರುವೆ, ನಾನು ಚುನಾವಣೆಯ ಗಿಮಿಕ್ ಮಾಡುತ್ತಿಲ್ಲ. ಇಂದು ನೀಡುತ್ತಿರುವ ೫ ಸಾವಿರ ಹಣದಲ್ಲಿ ಮಕ್ಕಳ ಶಾಲಾ ಶುಲ್ಕ ಪಾವತಿಸಿ, ಹೊಸ ಬಟ್ಟೆ ಕೊಡಿಸಿ, ಕುಟುಂಬದೊoದಿಗೆ ಸೇರಿ ಒಳ್ಳೆಯ ಊಟ ಮಾಡಿ, ಆದರೆ ಹಣವನ್ನು ಪೋಲು ಮಾಡದಿರಿ ಎಂದು ಸಲಹೆ ನೀಡಿದರು.

ಬಾಕ್ಸ್
ನಗರಸಭೆಯನ್ನು ಕ್ಲೀನ್ ಮಾಡುವೆ
ನಗರಸಭೆ ಸದ್ಯರು ಭಷ್ಟರೇ ಎಂದು ಪುನರುಚ್ಚರಿಸಿದ ಶಾಸಕ ಪ್ರದೀಪ್ ಈಶ್ವರ್, ನಗರಸಭೆಯಲ್ಲಿ ಭ್ರಷ್ಟಾಚಾರವು ನಡೆಯುತ್ತಿಲ್ಲ ಎಂದು ೧೦ ಮಂದಿಯಿoದ ಸಹಿ ಮಾಡಿಸಿಕೊಡಲಿ ನೋಡೋಣ ಎಂದು ಸವಾಲೆಸದರು. ಯಾರ ಬಳಿ ಕೈಚಾಚಿಲ್ಲ, ಯಾರನ್ನು ಕೈಚಾಚಲು ಬಿಡಲ್ಲ. ನಗರಸಭೆಯನ್ನು ಯಾವುದೇ ಕಾರಣಕ್ಕೂ ಕ್ಲೀನ್ ಮಾಡುವುದಾಗಿ ಶಪಥ ಮಾಡಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಂತೆ ಸದಸ್ಯರೆಲ್ಲರೂ ಸೇರಿ ನನ್ನ ವಿರುದ್ಧ ಆರೋಪ ಮಾಡಲು ಮುಂದಾಗುತ್ತಿದ್ದಾರೆ. ಆದರ ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದಲ್ಲಿ ಪ್ರಾಮಾಣಿಕತೆಗೆ ಮುನ್ನುಡಿ ಬರೆಯುತ್ತಿದ್ದು, ಸಾರ್ವಜನಿಕರು ಕಚೇರಿಯಲ್ಲಿ ಕೆಲಸ ಕಾರ್ಯ ಮಾಡಿಸಿಕೊಳ್ಳಲು ದಲ್ಲಾಳಿಗಳ ಮೊರೆ ಹೋಗದಂತೆ ಪುನರುಚ್ಚರಿಸಿದರು.
ಈ ಸಂದರಭದಲ್ಲಿ ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಖಲೀಲ್, ರಘು, ದಾಂಬೋ ಶ್ರೀನಿವಾಸ್, ಕೊಡಸ್ ವೆಂಕ್ತೇಶ್, ಯಲವಹಳ್ಳಿ ಜನಾರ್ಧನ್,ಕುಬೇರು ಅಚ್ಚು, ಪ್ರಸನ್ನ ಕುಮಾರ್,ಬಂಗಾರಿ, ಸಾದಿಕ್ ಮತ್ತು ಆಟೋ ಚಾಲಕರ ಮಕ್ಕಳು ಪ್ರದೀಪ್ ಅಭಿಮಾನಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *