ಯಲಹಂಕ : ನಗರದ ಇನ್ಸ್ಪೈರ್ ಐ ಎಂ ಜಿ ಹಾಗು ಗೋ ಕ್ಯಾಂಪಸ್ ಸಹಯೋಗದೊಂದಿಗೆ ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಆಯೋಜಿಸಿದ್ದ ‘ಯು ಕೆ ವೈದ್ಯಕೀಯ ಉದ್ಯೋಗ ಮೇಳ 2023’ ಕಾರ್ಯಕ್ರಮದಲ್ಲಿ ವೈದ್ಯಕೀಯ ಪದವೀಧರರಿಗೆ ತಮ್ಮ ವೃತ್ತಿ ಜೀವನ ರೂಪಿಸಿಕೊಳ್ಳಲು ಅಗತ್ಯ ಸಲಹೆ, ಮಾರ್ಗದರ್ಶನದ ಜೊತೆಗೆ ವಿದೇಶಗಳಲ್ಲಿ ವೈದ್ಯಕೀಯ ಉದ್ಯೋಗದ ಅವಕಾಶವನ್ನು ಕಲ್ಪಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಗೋ ಕ್ಯಾಂಪಸ್ ನ ಸಂಸ್ಥಾಪಕಿ  ಅಶ್ವಿನಿ ಮಾತನಾಡಿ ‘ಗೋ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಶೈಕ್ಷಣಿಕ ಸಲಹೆ ಮತ್ತು ವಿದ್ಯಾರ್ಥಿ ನೆರವು ನೀಡುವ ಸಂಸ್ಥೆಯಾಗಿದೆ. ಈ ಮೇಳದಿಂದ ವೈದ್ಯಕೀಯ ಪದವೀಧರರಿಗೆ ವೈದ್ಯಕೀಯ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ವೃತ್ತಿಪರರು ಮತ್ತು ಮಹತ್ವಾಕಾಂಕ್ಷಿ ವೈದ್ಯರಿಗೆ ಬಹಳ ಉಪಯೋಗವಾಗಲಿದೆ ಎಂದರು.

 ಈ ಮೇಳವು ಇತರೆ ಸಂಸ್ಥೆಗಳು ನಡೆಸುವ ಮೇಳದಂತಲ್ಲ, ವಿದೇಶದಲ್ಲಿಯೇ ನೆಲೆಸಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನುರಿತ ವೈದ್ಯರು ಮೇಳದಲ್ಲಿ ಭಾಗವಹಿಸಿ ವಿದೇಶದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸುವುದರ ಬಗ್ಗೆ ಅಗತ್ಯ ಮಾಹಿತಿ ತಿಳಿಸಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಯುಕೆ ಯ ಪ್ರತಿಷ್ಠಿತ ಆರೋಗ್ಯ ವೃತ್ತಿಪರರಾದ ಡಾ.ಶ್ಯಾಮ್ ಕೆಲ್ವೇಕರ್, ಡಾ. ವಿಶ್ವನಾಥ ಆಚಾರ್ಯ, ಡಾ. ಅಬ್ದುಲ್ ಹಾದಿ ಶರೀಫ್ ರವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವೈದ್ಯಕೀಯ ಪದವೀಧರರಿಗೆ ಅಂತರರಾಷ್ಟ್ರೀಯ ವೃತ್ತಿ ಅವಕಾಶಗಳ ಕುರಿತು ಅಗತ್ಯ ಮಾರ್ಗದರ್ಶನ ನೀಡಿದರು.

ವೈದ್ಯಕೀಯ ವೃತ್ತಿಪರ ಮೇಳ :

ಯಲಹಂಕ : ನಗರದ ಇನ್ಸ್ಪೈರ್ ಐ ಎಂ ಜಿ ಹಾಗು ಗೋ ಕ್ಯಾಂಪಸ್ ಸಹಯೋಗದೊಂದಿಗೆ ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಆಯೋಜಿಸಿದ್ದ ‘ಯು ಕೆ ವೈದ್ಯಕೀಯ ಉದ್ಯೋಗ ಮೇಳ 2023’ ಕಾರ್ಯಕ್ರಮದಲ್ಲಿ ವೈದ್ಯಕೀಯ ಪದವೀಧರರಿಗೆ ತಮ್ಮ ವೃತ್ತಿ ಜೀವನ ರೂಪಿಸಿಕೊಳ್ಳಲು ಅಗತ್ಯ ಸಲಹೆ, ಮಾರ್ಗದರ್ಶನದ ಜೊತೆಗೆ ವಿದೇಶಗಳಲ್ಲಿ ವೈದ್ಯಕೀಯ ಉದ್ಯೋಗದ ಅವಕಾಶವನ್ನು ಕಲ್ಪಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಗೋ ಕ್ಯಾಂಪಸ್ ನ ಸಂಸ್ಥಾಪಕಿ  ಅಶ್ವಿನಿ ಮಾತನಾಡಿ ‘ಗೋ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಶೈಕ್ಷಣಿಕ ಸಲಹೆ ಮತ್ತು ವಿದ್ಯಾರ್ಥಿ ನೆರವು ನೀಡುವ ಸಂಸ್ಥೆಯಾಗಿದೆ. ಈ ಮೇಳದಿಂದ ವೈದ್ಯಕೀಯ ಪದವೀಧರರಿಗೆ ವೈದ್ಯಕೀಯ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ವೃತ್ತಿಪರರು ಮತ್ತು ಮಹತ್ವಾಕಾಂಕ್ಷಿ ವೈದ್ಯರಿಗೆ ಬಹಳ ಉಪಯೋಗವಾಗಲಿದೆ ಎಂದರು.

 ಈ ಮೇಳವು ಇತರೆ ಸಂಸ್ಥೆಗಳು ನಡೆಸುವ ಮೇಳದಂತಲ್ಲ, ವಿದೇಶದಲ್ಲಿಯೇ ನೆಲೆಸಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನುರಿತ ವೈದ್ಯರು ಮೇಳದಲ್ಲಿ ಭಾಗವಹಿಸಿ ವಿದೇಶದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸುವುದರ ಬಗ್ಗೆ ಅಗತ್ಯ ಮಾಹಿತಿ ತಿಳಿಸಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಯುಕೆ ಯ ಪ್ರತಿಷ್ಠಿತ ಆರೋಗ್ಯ ವೃತ್ತಿಪರರಾದ ಡಾ.ಶ್ಯಾಮ್ ಕೆಲ್ವೇಕರ್, ಡಾ. ವಿಶ್ವನಾಥ ಆಚಾರ್ಯ, ಡಾ. ಅಬ್ದುಲ್ ಹಾದಿ ಶರೀಫ್ ರವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವೈದ್ಯಕೀಯ ಪದವೀಧರರಿಗೆ ಅಂತರರಾಷ್ಟ್ರೀಯ ವೃತ್ತಿ ಅವಕಾಶಗಳ ಕುರಿತು ಅಗತ್ಯ ಮಾರ್ಗದರ್ಶನ ನೀಡಿದರು.

Leave a Reply

Your email address will not be published. Required fields are marked *