ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಲಲಿತಾ ಲಕ್ಷಾರ್ಚನೆ ಕಾರ್ಯಕ್ರಮ :

ಯಲಹಂಕ : ಬ್ರಾಹ್ಮಣ ಸಮುದಾಯದ ಜನತೆ ತಮಗಾಗಿ ಪೂಜೆ ಸಲ್ಲಿಸುವುದಕ್ಕಿಂತ ಲೋಕ ಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸುವುದೇ ಹೆಚ್ಚು, ಅದು ಅವರ ಸದ್ಗುಣಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಯಲಹಂಕದ ಬಿಡಿಕೆ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಲಲಿತಾ ಲಕ್ಷಾರ್ಚನೆ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆದಿ ಕಾಲದಿಂದಲೂ ಬ್ರಾಹ್ಮಣರು ಲೋಕದ ಹಿತಕ್ಕಾಗಿ ಪೂಜೆ, ಹೋಮ, ಹವನಾದಿ ದೈವ ಕಾರ್ಯಗಳನ್ನು ನೆರವೇರಿಸಿಕೊಂಡು ಬರುವ ಮೂಲಕ ಒಂದು ಸತ್ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದು, ಹೃದಯ ವೈಶಾಲ್ಯತೆಯ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು. 

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದಿಂದ ಆಯೋಜಿಸಿರುವ ಲಲಿತಾ ಲಕ್ಷಾರ್ಚನೆಯ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಮಾತೆಯರು ಪವಿತ್ರ ಭಾವದೊಂದಿಗೆ ದೇವಿಗೆ ಪೂಜೆ ಸಲ್ಲಿಸುತ್ತಿರುವ ನಯನ ಮನೋಹರ ದೃಶ್ಯವನ್ನು ಕಂಡು ನಿಜಕ್ಕೂ ಮನಸ್ಸು ತುಂಬಿ ಬಂದಿದೆ. ಭಾರತೀಯ ಪರಂಪರೆಯ ನಮ್ಮ ಆಚಾರ, ವಿಚಾರ, ಆದರ್ಶ, ಸಂಪ್ರದಾಯಗಳನ್ನು ಪೋಷಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಗಳು ಹೆಚ್ಚು ಪ್ರೇರಣೆ ನೀಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕರು, ಆಧ್ಯಾತ್ಮಿಕ ಚಿಂತಕರಾದ ವಿದ್ವಾನ್ ಗಣೇಶ್ ಭಟ್ಟ ಹೋಬಳಿ ರವರಿಂದ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ವಿದ್ವಾನ್ ಗಣೇಶ್ ಭಟ್ಟ ಹೋಬಳಿಯವರು ದೇವರ ಗುಣ, ಸ್ವರೂಪ, ಪೂಜೆಯ ಮಹತ್ವ, ನಾವು ಸಲ್ಲಿಸುವ ಪೂಜೆ ನಮಗಾಗಿಯೋ ಅಥವಾ ದೇವರಿಗಾಗಿಯೋ, ಪೂಜೆಯಿಂದ ನಮಗಾಗುವ ಪ್ರಯೋಜನಗಳು ಎಂಬಿತ್ಯಾದಿ ಸಹಜವಾಗಿ ಜಿಜ್ಞಾಸೆ ಮೂಡಿಸುವ ಹಲವು ವಿಷಯಗಳ ಕುರಿತು ಆಧ್ಯಾತ್ಮಿಕ ಹಾಗೂ ವಿಮರ್ಷಾತ್ಮಕವಾದ ಮಾಹಿತಿ ನೀಡಿದರು.

ಸಹಸ್ರಾರು ಮಾತೆಯರು ಒಮ್ಮನದಿಂದ ಲಲಿತಾ ಲಕ್ಷಾರ್ಚನೆ ನೆರವೇರಿಸಿದ ಮಹತ್ವದ ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ವೈ.ಜಿ.ವೈದ್ಯನಾಥಶಾಸ್ತ್ರಿ, ಉಪಾಧ್ಯಕ್ಷರಾದ ವೈ.ಜಿ.ರಾಘವೇಂದ್ರರಾವ್, ಆರ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಭೀಮಸೇನಾಚಾರ್ಯ, ಜಂಟಿ ಕಾರ್ಯದರ್ಶಿ ಟಿ.ಎಲ್.ಅರುಣ್‌ಕುಮಾರ್, ಸಂ.ಕಾರ್ಯದರ್ಶಿ ಎಲ್.ಸಂಜೀವ್‌ರಾವ್, ಖಜಾಂಚಿ ಜಿ.ವಿ.ಪ್ರಭಾಕರ್ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಪೂಜೆಗಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬ್ರಾಹ್ಮಣ ಸಮುದಾಯದ ಭಕ್ರಾದಿಗಳಿದ್ದರು.

ಬ್ರಾಹ್ಮಣರು ಲೋಕ ಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸುವುದೇ ಹೆಚ್ಚು : ಎಸ್.ಆರ್.ವಿಶ್ವನಾಥ್

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಲಲಿತಾ ಲಕ್ಷಾರ್ಚನೆ ಕಾರ್ಯಕ್ರಮ :

ಯಲಹಂಕ : ಬ್ರಾಹ್ಮಣ ಸಮುದಾಯದ ಜನತೆ ತಮಗಾಗಿ ಪೂಜೆ ಸಲ್ಲಿಸುವುದಕ್ಕಿಂತ ಲೋಕ ಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸುವುದೇ ಹೆಚ್ಚು, ಅದು ಅವರ ಸದ್ಗುಣಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಯಲಹಂಕದ ಬಿಡಿಕೆ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಲಲಿತಾ ಲಕ್ಷಾರ್ಚನೆ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆದಿ ಕಾಲದಿಂದಲೂ ಬ್ರಾಹ್ಮಣರು ಲೋಕದ ಹಿತಕ್ಕಾಗಿ ಪೂಜೆ, ಹೋಮ, ಹವನಾದಿ ದೈವ ಕಾರ್ಯಗಳನ್ನು ನೆರವೇರಿಸಿಕೊಂಡು ಬರುವ ಮೂಲಕ ಒಂದು ಸತ್ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದು, ಹೃದಯ ವೈಶಾಲ್ಯತೆಯ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು. 

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದಿಂದ ಆಯೋಜಿಸಿರುವ ಲಲಿತಾ ಲಕ್ಷಾರ್ಚನೆಯ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಮಾತೆಯರು ಪವಿತ್ರ ಭಾವದೊಂದಿಗೆ ದೇವಿಗೆ ಪೂಜೆ ಸಲ್ಲಿಸುತ್ತಿರುವ ನಯನ ಮನೋಹರ ದೃಶ್ಯವನ್ನು ಕಂಡು ನಿಜಕ್ಕೂ ಮನಸ್ಸು ತುಂಬಿ ಬಂದಿದೆ. ಭಾರತೀಯ ಪರಂಪರೆಯ ನಮ್ಮ ಆಚಾರ, ವಿಚಾರ, ಆದರ್ಶ, ಸಂಪ್ರದಾಯಗಳನ್ನು ಪೋಷಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಗಳು ಹೆಚ್ಚು ಪ್ರೇರಣೆ ನೀಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕರು, ಆಧ್ಯಾತ್ಮಿಕ ಚಿಂತಕರಾದ ವಿದ್ವಾನ್ ಗಣೇಶ್ ಭಟ್ಟ ಹೋಬಳಿ ರವರಿಂದ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ವಿದ್ವಾನ್ ಗಣೇಶ್ ಭಟ್ಟ ಹೋಬಳಿಯವರು ದೇವರ ಗುಣ, ಸ್ವರೂಪ, ಪೂಜೆಯ ಮಹತ್ವ, ನಾವು ಸಲ್ಲಿಸುವ ಪೂಜೆ ನಮಗಾಗಿಯೋ ಅಥವಾ ದೇವರಿಗಾಗಿಯೋ, ಪೂಜೆಯಿಂದ ನಮಗಾಗುವ ಪ್ರಯೋಜನಗಳು ಎಂಬಿತ್ಯಾದಿ ಸಹಜವಾಗಿ ಜಿಜ್ಞಾಸೆ ಮೂಡಿಸುವ ಹಲವು ವಿಷಯಗಳ ಕುರಿತು ಆಧ್ಯಾತ್ಮಿಕ ಹಾಗೂ ವಿಮರ್ಷಾತ್ಮಕವಾದ ಮಾಹಿತಿ ನೀಡಿದರು.

ಸಹಸ್ರಾರು ಮಾತೆಯರು ಒಮ್ಮನದಿಂದ ಲಲಿತಾ ಲಕ್ಷಾರ್ಚನೆ ನೆರವೇರಿಸಿದ ಮಹತ್ವದ ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ವೈ.ಜಿ.ವೈದ್ಯನಾಥಶಾಸ್ತ್ರಿ, ಉಪಾಧ್ಯಕ್ಷರಾದ ವೈ.ಜಿ.ರಾಘವೇಂದ್ರರಾವ್, ಆರ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಭೀಮಸೇನಾಚಾರ್ಯ, ಜಂಟಿ ಕಾರ್ಯದರ್ಶಿ ಟಿ.ಎಲ್.ಅರುಣ್‌ಕುಮಾರ್, ಸಂ.ಕಾರ್ಯದರ್ಶಿ ಎಲ್.ಸಂಜೀವ್‌ರಾವ್, ಖಜಾಂಚಿ ಜಿ.ವಿ.ಪ್ರಭಾಕರ್ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಪೂಜೆಗಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬ್ರಾಹ್ಮಣ ಸಮುದಾಯದ ಭಕ್ರಾದಿಗಳಿದ್ದರು.

Leave a Reply

Your email address will not be published. Required fields are marked *