















ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಕೃಷ್ಣಬೈರೇಗೌಡ ಚಾಲನೆ :
ಯಲಹಂಕ. ಬ್ಯಾಟರಾಯನಪುರ : ಕ್ಷೇತ್ರದ ಅಗ್ರಹಾರ ಬಡಾವಣೆ-ದಿನಾಂಕ 20 12 2025 ರಂದು ತಿರುಮೇನಹಳ್ಳಿ ಮುಖ್ಯರಸ್ತೆ ಇಂದ ಅಗ್ರಹಾರ ಬಡಾವಣೆ, ಸರ್ಕಾರಿ ಆಸ್ಪತ್ರೆಯಿಂದ ಹಜ್ ಭವನ್ ಮುಖ್ಯರಸ್ತೆಯವರೆಗೆ ಮತ್ತು ಎಸ್ಟೀಮ್ ಮಾಲ್-ಸಿಂಧಿಕಾಲೇಜು- ಕೆಂಪಾಪುರ ಮುಖ್ಯರಸ್ತೆ ಸೇರಿದಂತೆ 2 ಕೋಟಿ ರು. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಶನಿವಾರ ತಿರುಮೇನಹಳ್ಳಿಯಲ್ಲಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಗೋಪಾಲ್ ಗೌಡ, ಬ್ಯಾಟರಾಯನಪುರ ಕ್ಷೇತ್ರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಪಿಗೆಹಳ್ಳಿ H A ಶಿವಕುಮಾರ್, ಕೋಗಿಲು ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಗೋಕುಲ್ ರೆಡ್ಡಿ, ಮಾಜಿ ಅಧ್ಯಕ್ಷ ತಿರುಮೇನಹಳ್ಳಿ ರಾಜಣ್ಣ, ಕಾಂಗ್ರೆಸ್ ಮುಖಂಡರಾದ ವೆಂಕಟರಾಮರೆಡ್ಡಿ, ಎನ್.ಮಂಜುನಾಥ್, ಕೆಂಪಣ್ಣ, ಬಾಬು, ಆಂಜನೇಯಗೌಡ, S R ಅಣ್ಣಯ್ಯ.ಹನುಮಂತು, ಟಿ.ಎಂ.ದೇವರಾಜ್ ಹಾಗೂ ಈ ಭಾಗದ ಅಪಾರ್ಟ್ಮೆಂಟ್ನ ಕೆಲವರು ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout
Yelahanka Bangalore Karnataka
9845085793. 7349337989
