ಚಿಕ್ಕಬಳ್ಳಾಪುರ:ಪ್ರಕೃತಿಯನ್ನು ಕಾಪಾಡಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಇದರ ಬಗ್ಗೆ ಯುವಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಸಾಯಿ ಮಂದಿರ ಧರ್ಮಾಧಿಕಾರಿ ಜಿ.ಹೆಚ್.ನಾಗರಾಜ್ ತಿಳಿಸಿದರು.ಇಂದು ನಗರದ ಹೊರವಲಯದ ಸಾಯಿ ಮಂದಿರ ದಲ್ಲಿ ಪ್ರಕೃತಿ ಧರ್ಮಪೀಠ ವತಿಯಿಂದ ಹಮ್ಮಿಕೊಂಡಿದ್ದ ಪ್ರಕೃತಿ ಧರ್ಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಬಗ್ಗೆ ಇಂದು ನುರಿತ ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ.ವಾತಾವರಣದಲ್ಲಿ ಆಗುತ್ತಿರುವ ಏರು ಪೇರಿಂದಾಗಿ ಸಾಕಷ್ಟು ಅನಾಹುತಗಳಾಗುತ್ತಿದೆ ಪ್ರಕೃತಿಯನ್ನು ಕಾಪಾಡಲು ನಾವೆಲ್ಲರೂ ಮುಂದಾಗಬೇಕು ಇದರ ಜೊತೆಗೆ ಯುವಜನತೆಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಬೇಕು ಇಲ್ಲ ವಾದಲ್ಲಿ ಮುಂದೊಂದು ದಿನ ಅನಾಹುತಗಳು ಎದುರಿಸಬೇಕಾಗುತ್ತದೆ ಎಂದರು.ನಮ್ಮ ಮುಖ್ಯ ಉದ್ದೇಶ ಯುವಕರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ನೀಡುವುದು ಹಾಗಾಗಿ ಇಂದು ನುರಿತ ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ ಅವರ ಮಾರ್ಗದರ್ಶನದಲ್ಲಿ ಯುವಜನತೆ ಪ್ರಕೃತಿಯನ್ನು ಕಾಪಾಡಲು ಮುಂದಾಗಿ ಇತರರಿಗೊ ಪರಿಸರ ಸಂರಕ್ಷಣೆ ಬಗ್ಗೆ ತಿಳಿ ಹೇಳಿ ಇದರ ಜೊತೆಗೆ ಸಸಿ ನೆಡುವ ಬಗ್ಗೆ ಹಾಗೂ ಇದರಿಂದ ಆಗುವ ಒಳ್ಳೆ ಪರಿಣಾಮ ಬಗ್ಗೆ ಹೇಳಬೇಕೆಂದರು.ಮಾಜಿ ಚೀಫ್ ಜಸ್ಟೀಸ್ ವೆಂಕಟಾಚಲಯ್ಯ ರವರು ಕಾರ್ಯಕಮ ಉದ್ಘಾಟಿಸಿ ಮಾತನಾಡಿದರು,ನೀಲಿಮ ರೆಡ್ಡಿ, ಶ್ರೀನಿವಾಸ್ ರಾವ್ ಇತರರು ಉಪಸ್ಥಿತರಿದ್ದರು.