ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಿಸಿದ ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆ : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದೆ. ಇದರಲ್ಲಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಿಸುವ ಕಾರ್ಯಕ್ರಮವು ಒಂದಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ನಗರದಲ್ಲಿರುವ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲೂಕು ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಒದಗಿಸಿರುವ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಂಕೇತಿಕವಾಗಿ ಶಾಲಾ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಿ ಮಾತನಾಡಿದರು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ಗಳ ಸೌಲಭ್ಯ ಒದಗಿಸಲಾಗಿದೆ, ಕಟ್ಟಡ ಕಾರ್ಮಿಕ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದೆ ಬರಬೇಕು. ಸರ್ಕಾರ ನೀಡಿರುವ ಈ ಶೈಕ್ಷಣಿಕ ಪರಿಕರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನಮ್ಮ ತಾಲೂಕಿನಲ್ಲಿ ಸುಮಾರು 8 ಸಾವಿರ ಕುಟುಂಬಗಳು ಕಟ್ಟಡ ಕಾರ್ಮಿಕರ ವಲಯವನ್ನು ಸೇರಿದವರಾಗಿದ್ದಾರೆ, ಅವರ ಮಕ್ಕಳಿಗೆ ಅನುಕೂಲವಾಗಲಿ ಎಂದು ಒಂದು ಕಿಟ್ ಸುಮಾರು 10 ಸಾವಿರ ಬೆಲೆ ಬಾಳುವಂತಹ ಕಿಟ್ ಗಳನ್ನು ವಿತರಣೆ ಮಾಡಿದ್ದೇವೆ, ಕಾರ್ಮಿಕ ಇಲಾಖೆ ಇಷ್ಟು ಮಟ್ಟಕ್ಕೆ ಬೆಳೆದಿದೆ ಅಂದರೆ ಪ್ರಮುಖವಾಗಿ ಕೊಡುಗೆ ಇರುವಂತಹದು ಮಲ್ಲಿಕಾರ್ಜುನ ಖರ್ಗೆ ರವರು, ಬಿ ಎನ್ ಬಚ್ಚೇಗೌಡ ರವರು ಅವರ ಕಾಲದಲ್ಲಿ ಮಾಡಿದಂತಹ ಕಾರ್ಯಕ್ರಮಗಳಿಂದ ಕಟ್ಟಡ ಕಾರ್ಮಿಕರು ಎಲ್ಲರೂ ಅನುಕೂಲಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು, ಮುಖಂಡರುಗಳಾದ ಬಿ.ವಿ. ಬೈರೇಗೌಡ, ಹೆಚ್ ಎಂ. ಸುಬ್ಬರಾಜು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾರ್ಮಿಕ ವಿಭಾಗ ಹರೀಶ್ ಚಕ್ರವರ್ತಿ, ಹಾಗೂ ನಗರ ಸಭೆ ಸದಸ್ಯರಾದ ರೂಪ ಉಮೇಶ್, ಹಾಗೂ ನವಾಜ್ ,ನಿಸಾರ್ ಅಹ್ಮದ್, ಯುವ ಮುಖಂಡ ರಾಕೇಶ್, ಕೆಸಿ ಸುರೇಶ್, ಚಂದ್ರೇಗೌಡ ,ರವಿರಾಜ್, ಸೂರ್ಯ ವಿಷ್ಣು ಸೇರಿದಂತೆ ಹಲವಾರು ಮುಖಂಡರುಗಳು ಹಾಜರಿದ್ದರು.
