ವರದಿ:ಮೇಘರಾಜ ವಾಲಿಕಾರ
ವಿಜಯಪುರ :ಆ.14:ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರಾವಣ ಮಾಸದ ಸಾಧನ ಸಪ್ತಾಹವು ಶ್ರಾವಣ ಶುದ್ದ ಪ್ರತಿಪದ ಗುರುವಾರ ದಿನಾಂಕ 17 ಅಗಷ್ಟ 2023 ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದ ಸದ್ಗುರುಗಳಾದ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ ಹಾಗೂ ಗದ್ದುಗೆಗಳ ಪೂಜೆಯೋಂದಿಗೆ ಪ್ರಾರಂಭವಾಗಿ ಶ್ರಾವಣ ಬಹುಳ ದ್ವಾದಶಿ ಸೋಮವಾರ ದಿನಾಂಕ 11 ಸೆಪ್ಟೆಂಬರ 2023 ರಂದು ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಳ್ಳುವದು.
ತಿಂಗಳ ಪಯರ್ಂತ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಕಾಕಡಾರತಿ,ಶೇಜಾರತಿ. ನಂತರ ಹನ್ನೊಂದು ಗಂಟೆಯವರೆಗೆ ಧ್ಯಾನ ನಂತರ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರಿಂದ ಹಾಗೂ ವಿವಿಧಡೆಯಿಂದ ಆಗಮಿಸಿದ ಮಹಾತ್ಮರಿಂದ ಪುರಾಣ. ಪ್ರವಚನ ಮಧ್ಯಾಹ್ನದ ಭಜನೆ ನಂತರ ಪ್ರಸಾದ ಸಾಯಂಕಾಲ ಐದು ಗಂಟೆಯವರೆಗೆ ಶ್ರಮದಾನ. ವಿಶ್ರಾಂತಿ. ಸಾಯಂಕಾಲ ಐದು ಗಂಟೆಗೆ ಭಜನೆ ಪುರಾಣ ಪ್ರವಚನ,ಪ್ರಸಾದ, ನಂತರ ಎಂಟು ಗಂಟೆಗೆ ರಾತ್ರಿ ಭಜನೆಯೊಂದಿಗೆ ದಿನಚರಿ ಮುಗಿಯುವದು. ಗುರುವಾರ ದಿನಾಂಕ 7 ಸೆಪ್ಟೆಂಬರ 2023 ರಂದು ಶ್ರೀಕೃಷ್ಣಾಷ್ಠಮಿ ನಿಮಿತ್ಯ ಶ್ರೀಕೃಷ್ಣ ತೊಟ್ಟಿಲೋತ್ಸವ ಕಾರ್ಯಕ್ರಮ ಜರಗುವದು. ಅತ್ಯಂತ ವೈಶಿಷ್ಟ್ಯವಾಗಿ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿ ದಿನ ಶ್ರೀ ಸದ್ಗುರು ಸಮರ್ಥ ರಾಮದಾಸ ಮಹಾರಾಜರ ದಾಸಬೋದ.ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಜ್ಞಾನೇಶ್ವರಿ, ಶ್ರೀ ಸಂತ ವಿನೋಬಾ ಭಾವೆ ಅವರ ಗೀತಾ ಪ್ರವಚನ, ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಮುಂತಾದ ಮಹಾತ್ಮರ ಗ್ರಂಥ ವಾಚನ. ಶರಣ ಶರಣೆಯರಿಂದ ಭಕ್ತಿ ಸಂಗೀತ, ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗುವವು. ಈ ಸರ್ವ ಕಾರ್ಯಕ್ರಮಗಳು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರಗುವವು. ಅತ್ಯಂತ ವಿಜೃಂಭಣೆಯಿಂದ ಜರಗುವ ಈ ಶ್ರಾವಣ ಸಾಧನ ಸಪ್ತಾಹಕ್ಕೆ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಭರತೇಶ ಹಾಸಿಲಕರ್ ಮನವಿ ಮಾಡಿದ್ದಾರೆ.
ಇಂಚಗೇರಿ ಮಠದಲ್ಲಿ ಅ. 17 ರಿಂದ ಶ್ರಾವಣ ಮಾಸದ ಸಪ್ತಾಹ
ವರದಿ:ಮೇಘರಾಜ ವಾಲಿಕಾರ
ವಿಜಯಪುರ :ಆ.14:ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರಾವಣ ಮಾಸದ ಸಾಧನ ಸಪ್ತಾಹವು ಶ್ರಾವಣ ಶುದ್ದ ಪ್ರತಿಪದ ಗುರುವಾರ ದಿನಾಂಕ 17 ಅಗಷ್ಟ 2023 ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದ ಸದ್ಗುರುಗಳಾದ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ ಹಾಗೂ ಗದ್ದುಗೆಗಳ ಪೂಜೆಯೋಂದಿಗೆ ಪ್ರಾರಂಭವಾಗಿ ಶ್ರಾವಣ ಬಹುಳ ದ್ವಾದಶಿ ಸೋಮವಾರ ದಿನಾಂಕ 11 ಸೆಪ್ಟೆಂಬರ 2023 ರಂದು ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಳ್ಳುವದು.
ತಿಂಗಳ ಪಯರ್ಂತ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಕಾಕಡಾರತಿ,ಶೇಜಾರತಿ. ನಂತರ ಹನ್ನೊಂದು ಗಂಟೆಯವರೆಗೆ ಧ್ಯಾನ ನಂತರ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರಿಂದ ಹಾಗೂ ವಿವಿಧಡೆಯಿಂದ ಆಗಮಿಸಿದ ಮಹಾತ್ಮರಿಂದ ಪುರಾಣ. ಪ್ರವಚನ ಮಧ್ಯಾಹ್ನದ ಭಜನೆ ನಂತರ ಪ್ರಸಾದ ಸಾಯಂಕಾಲ ಐದು ಗಂಟೆಯವರೆಗೆ ಶ್ರಮದಾನ. ವಿಶ್ರಾಂತಿ. ಸಾಯಂಕಾಲ ಐದು ಗಂಟೆಗೆ ಭಜನೆ ಪುರಾಣ ಪ್ರವಚನ,ಪ್ರಸಾದ, ನಂತರ ಎಂಟು ಗಂಟೆಗೆ ರಾತ್ರಿ ಭಜನೆಯೊಂದಿಗೆ ದಿನಚರಿ ಮುಗಿಯುವದು. ಗುರುವಾರ ದಿನಾಂಕ 7 ಸೆಪ್ಟೆಂಬರ 2023 ರಂದು ಶ್ರೀಕೃಷ್ಣಾಷ್ಠಮಿ ನಿಮಿತ್ಯ ಶ್ರೀಕೃಷ್ಣ ತೊಟ್ಟಿಲೋತ್ಸವ ಕಾರ್ಯಕ್ರಮ ಜರಗುವದು. ಅತ್ಯಂತ ವೈಶಿಷ್ಟ್ಯವಾಗಿ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿ ದಿನ ಶ್ರೀ ಸದ್ಗುರು ಸಮರ್ಥ ರಾಮದಾಸ ಮಹಾರಾಜರ ದಾಸಬೋದ.ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಜ್ಞಾನೇಶ್ವರಿ, ಶ್ರೀ ಸಂತ ವಿನೋಬಾ ಭಾವೆ ಅವರ ಗೀತಾ ಪ್ರವಚನ, ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಮುಂತಾದ ಮಹಾತ್ಮರ ಗ್ರಂಥ ವಾಚನ. ಶರಣ ಶರಣೆಯರಿಂದ ಭಕ್ತಿ ಸಂಗೀತ, ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗುವವು. ಈ ಸರ್ವ ಕಾರ್ಯಕ್ರಮಗಳು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರಗುವವು. ಅತ್ಯಂತ ವಿಜೃಂಭಣೆಯಿಂದ ಜರಗುವ ಈ ಶ್ರಾವಣ ಸಾಧನ ಸಪ್ತಾಹಕ್ಕೆ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಭರತೇಶ ಹಾಸಿಲಕರ್ ಮನವಿ ಮಾಡಿದ್ದಾರೆ.