[15/08, 4:54 am] Sawmi Pakk: ☘“ದುಃಖಿಸುವುದರಿಂದ ನಾಳಿನ ತೊಂದರೆಗಳೇನೂ ಕಡಿಮೆಯಾಗುವುದಿಲ್ಲ. ಬದಲಾಗಿ ಇಂದಿನ ಶಾಂತಿಯನ್ನು ಕಳೆದುಕೊಳ್ಳುತ್ತೇವೆ. ಇಂದಿನ ಶಾಂತಿ ಉಳಿಸಿಕೊಳ್ಳೋಣ. ಕಳೆದುಹೋದ ಘಟನೆಗಳಿಂದ ಗಟ್ಟಿಯಾಗಬೇಕು. ಅದು ನಮ್ಮನ್ನು ದುರ್ಬಲಗೊಳಿಸಲು ಬಿಡಬಾರದು. ಅನುಭವಗಳಿಂದ ಮಾಗಬೇಕೇ ಹೊರತು, ಬಾಗಬಾರದು”
🙏🙏ಶುಭ ದಿನ 🙏🙏
[16/08, 6:22 am] Kiran Kesari Kumar: ಜಡವೇನು? ಜೀವವೇನು? ಚೈತನ್ಯ ಎಲ್ಲೆಲ್ಲಿ ನಿದ್ರಿಸಿದೆಯೋ ಅದೆಲ್ಲ ಜಡ. ಕಲ್ಲು ಕಡ್ಡಿ ಕಸ ಹೀಗೆ. ಹಾಗೆ ಅಡಗಿರುವ ಅಥವಾ ಸುಪ್ತವಾಗಿರುವ ಚೈತನ್ಯ ಎಚ್ಚರವಾದರೆ ಆ ವಸ್ತು ಜೀವಂತವಾಗುತ್ತದೆ. ಹಾಗಾಗಿ ಜಡವೆ ಜೀವಕ್ಕೆ ಮನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
[16/08, 6:22 am] Kiran Kesari Kumar: ಜಂತು” ಎನ್ನುವ ಪದಕ್ಕೆ ” ಜೀವಂತಿ ಇತಿ ಜಂತು: ” ಎನ್ನುವ ಅರ್ಥ ಉಂಟು. ಅಂದರೆ ಯಾವುದು ಜೀವಂತವಾಗಿದೆಯೋ ಅದು ಜಂತು ಎಂದು ಅರ್ಥ. ಜೀವವೆಂದರೆ ಚೇತನ. ಚೇತನವೆಂದರೆ ಚೈತನ್ಯ, ಶಕ್ತಿ. ಆ ಶಕ್ತಿಯಿದ್ದರೆ ಎಲ್ಲಾ ಪ್ರಾಣಿಗಳೂ ಎದ್ದು ಓಡಾಡಬಹುದು. ಅದಿಲ್ಲದಿದ್ದರೆ, ಅದು ಜಡ ಎಂದು ಪರಿಗಣಿಸಲಾಗುತ್ತದೆ. ಜಡವೆಂದರೆ ಜೀವವಿಲ್ಲದ್ದು. ಆ ಜಡದೊಳಕ್ಕೆ ಜೀವ ತುಂಬಿದರೆ ಅದು ಜಂತುವಾಗುತ್ತದೆ.ಈ ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳನ್ನೂ ಜಡ ಮತ್ತು ಜೀವ ಎಂದು ವಿಭಾಗಿಸಲಾಗಿದೆ. ಮೇಲೆ ಹೇಳಿದಂತೆ ಜೀವ ವಿರುವುದು ಜಂತು ಮತ್ತು ಜೀವವಿಲ್ಲದ್ದು ಜಡ. ಜಡವು ಎಲ್ಲ ಕಡೆಯೂ ಇದೆ. ಜೀವವೂ ಎಲ್ಲಕಡೆಯೂ ಇದೆ. ಇವರೆಡೂ ಬೇರೆಬೇರೆಯಾಗಿ ಇರುವತನಕ ಜಡ ಜೀವಗಳೆಂಬ ಬೇಧ. ಒಂದಾದರೆ ಕೇವಲ ಜಂತು. ಆದರೆ ಜಡ ಜೀವಗಳ ಅವಿನಾಭಾವ ಸಂಬಂಧವನ್ನು ನಾವು ಈ ಜಗತ್ತಿನಲ್ಲಿ ನೋಡಬಹುದು. ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ಥಿತ್ವವಿಲ್ಲ ಏಕೆಂದರೆ ಇಡೀ ಜಗತ್ತಿನಲ್ಲಿರುವ ಎಲ್ಲ ಪ್ರಾಣಿಗಳೂ ಒಂದು ಜಡ ಮತ್ತೊಂದು ಜೀವನದ ಸಮ್ಮಿಲನದಿಂದಲೇ ಆಗಿರುವುದು. ಸಮ್ಮಿಲನವಾದರೆ, ಒಂದು ಜೀವಿಯ ಆವಿರ್ಭಾವ. ಇಲ್ಲದಿದ್ದರೆ ಜಡ ಜಡವಾಗಿ ಮತ್ತು ಜೀವ ಜೀವವಾಗೆ ಇರುತ್ತದೆ.ಇಲ್ಲಿ ಒಂದು ದೃಷ್ಟಾಂತವನ್ನು ನೋಡೋಣ. ಹತ್ತು ಹಿಡಿ ಅಕ್ಕಿ. ಅದಕ್ಕೆ ಚಲನೆಯಿಲ್ಲ. ಹಾಗಾಗಿ ಅದನ್ನು ಜಡವೆಂದೇ ಪರಿಗಣಿಸಿದರೂ, ಅದನ್ನು ಬೇಯಿಸಿ ಅನ್ನವಾಗಿಸಿ ದೇಹಕ್ಕೆ ಉಣಬಡಿಸಿದರೆ, ಅದರಿಂದ ಜೀವಿಗೆ ಚೈತನ್ಯ ಉಂಟಾಗುತ್ತದೆ. ಅಂದರೆ ಆ ಚೈತನ್ಯ ಆ ಹತ್ತು ಹಿಡಿ ಅಕ್ಕಿಯಲ್ಲಿ ಇತ್ತು ಎಂದು ಅರ್ಥವಲ್ಲವೇ? ಏಕೆಂದರೆ ಒಂದು ವಸ್ತುವಿನಲ್ಲಿ ಇಲ್ಲದ್ದು ಪ್ರಕಟವಾಗುವುದು ಹೇಗೆ. ಜೀವಕ್ಕೆ, ಚೈತನ್ಯಕ್ಕೆ ಹೇತುವಾದ ಆನ್ನ ಜಡವೆಂದು ಹೇಗೆ ಒಪ್ಪಿಕೊಳ್ಳುವುದು?. ಈ ದೃಷ್ಟಾಂತವನ್ನು ಎಲ್ಲ ಚೈತನ್ಯದಾಯಕ ವಸ್ತುಗಳಿಗೂ ಹೋಲಿಸಬಹುದು. ಜಡವಾಗಿ ಒಂದೇ ಕಡೆ ನಿಂತಿರುವ ಮರಕ್ಕೆ ಜೀವವಿಲ್ಲವೇ. ಹಾಗಾಗಿ ಇದನ್ನು ನಾವು ಜೀವ ಮತ್ತು ನಿರ್ಜೀವ ವಸ್ತುಗಳೆಂದು ಪರಿಗಣಿಸಿದರೆ, ನಿರ್ಜೀವ ವಸ್ತುಗಳಿಗೆ ಜೀವ ಬಂದರೆ ಅದು ಜೀವಿಯಾಗುತ್ತದೆ. ತೈತ್ತರೀಯ ಉಪನಿಷತ್ತು” ಅನ್ನಂ ಬ್ರಹ್ಮೇತಿವ್ಯ ಜಾನಾತ್” ಎನ್ನುತ್ತದೆ. ಹಾಗಾಗಿ ಅನ್ನವು ಜೀವ. ಅಲ್ಲಿ ಚೈತನ್ಯ ಸುಪ್ತವಾಗಿದೆ. ಹಾಗೆ ಸುಪ್ತವಾಗಿರುವ ಚೈತನ್ಯವು ಪ್ರಕಟಗೊಂಡರೆ, ಜಡವು, ಜೀವಂತವಾಗುತ್ತದೆ.ಜೀವಕ್ಕೆ ಅಂದರೆ ಚೈತನ್ಯಕ್ಕೆ ಜಡವೆ ಆಧಾರ. ಒಂದು ಚಿತ್ರಕ್ಕೆ ಭಿತ್ತಿಯು ಹೇಗೆ ಅಧಾರವೋ ಹಾಗೆ ಜೀವಕ್ಕೆ ಜಡದ ಮಾಧ್ಯಮದಿಂದಲೇ ಈ ಜಗತ್ತಿನಲ್ಲಿ ಪ್ರಕಟವಾಗಬಹುದು. ತನ್ನ ಇರುವಿಕೆಯನ್ನು ಮತ್ತು ತನ್ನ ಕಾರ್ಯ ಸಾಧನೆಗೆ ಜೀವಕ್ಕೆ ಜಡವೆ ಕರಣ. ಜೀವವು ಕಾರಣ ದೇಹ ಕರಣ ಮತ್ತು ಇಲ್ಲಿ ಇವರಿಬ್ಬರ ಸಮಾಗಮದಿಂದ ನಡೆಯುವ ಜಗದ್ವ್ಯಾಪಾರವೇ ಕಾರ್ಯ. ಆದರೆ ಎಲ್ಲವೂ ಪರಮಾತ್ಮನಿಂದ ಸಿಡಿದು ಹೊರಬಂದು ಬೇರೆ ಬೇರೆ ರೂಪಗಳನ್ನು ತಳೆದು ಬೇರೆ ಬೇರೆ ಹೆಸರುಗಳನ್ನೂ ಪಡೆದು ಇದು ಜೀವ , ಇದು ಜಡ ಎಂದು ಕರೆಸಿ ಕೊಳ್ಳಲ್ಪಡುವ ಎಲ್ಲ ವಸ್ತುಗಳಿಗೂ ಮೂಲ ಆ ಪರಮಾತ್ಮ ಚೇತನವೇ ಅಲ್ಲವೇ? ಆ ಪರಮಾತ್ಮನನ್ನ್ನು ” ಕರಣಂ ಕಾರಣಂ ಕರ್ತಾ” ಎಂದೂ ಹೇಳಲಾಗಿದೆ. ಹಾಗಾಗಿ ಜಡವು ಕಾರ್ಯಪ್ರವೃತ್ತನಾಗಬೇಕಾದರೆ ಜೀವದೊಂದಿಗೆ ಸಂಗಮವಾಗಬೇಕು. ಹಾಗೆಯೇ ಜೀವ ತನ್ನ ಕಾರ್ಯ ನಿರ್ವಹಣೆ ಮಾಡಬೇಕಾದರೆ ಜಡವೆಂಬ ಮಾಧ್ಯಮ ಬೇಕು. ಅದನ್ನೇ ಮಾನ್ಯ ಗುಂಡಪ್ಪನವರು ” ಜಡವೆ ಜೀವದ ವಸತಿ ” ಎಂದರು.ಇಂತಹ ಉತ್ತಮ ಮತ್ತು ಉನ್ನತ ವಿಚಾರಗಳು ಮನುಷ್ಯ ತನ್ನನ್ನು ತಾನು ಅರಿತುಕೊಳ್ಳಲು ಸಹಾಯವಾಗುತ್ತದೆ. ತನ್ನನ್ನು ತಾನು ಜಡವೆಂದುಕೊಂಡಾಗ ಒಂದು ರೀತಿಯಾಗಿಯೂ ತಾನು ಜೀವ ಅಥವಾ ಚೇತನ ಮಾತ್ರ ಎಂದು ಅರಿತುಕೊಂಡಾಗ ಮತ್ತೊಂದು ರೀತಿಯಾಗಿಯೂ ಆನಂದವನ್ನು ಅನುಭವಿಸುತ್ತಾನೆ. ಹಾಗಾಗಿ ವಾಚಕರೆ, ನಾವೂ ಸಹ ಯೋಚನೆ ಮಾಡೋಣ, ನಮ್ಮ ನೆಲೆಯನ್ನು ಅರಿತುಕೊಳ್ಳೋಣ.
[17/08, 5:33 am] Kiran Kesari Kumar: ಶಾಪಗ್ರಸ್ತಳಾಗಿ, ಕಲ್ಲಾಗಿ ನಿದ್ರಿಸುತ್ತಿದ್ದ ಋಷಿಯ ಪತ್ನಿ ಅಹಲ್ಯೆ, ರಾಮನ ಪದ ಸೋಕಿ ಜೀವಂತವಾದಂತೆ, ಇದು ಚಲಿಸದು, ಇದು ಜಡ ಎಂದು ಯಾವುದು ಕರೆಯಲ್ಪಡುತ್ತದೋ ಅದು ಸತ್ವದ, ಚೈತನ್ಯದ, ಜೀವ ಶಕ್ತಿಯ ಸಂಸರ್ಗದಿಂದ, ಶಕ್ತಿಯನ್ನು ಪಡೆದು ಜೀವಂತವಾಗುತ್ತದೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
[17/08, 5:33 am] Kiran Kesari Kumar: ಹಿಂದೆಯೂ ವಿವರಿಸಿದಂತೆ ಈ ಜಗತ್ತು ಒಂದೇ ಮೂಲದಿಂದ ಪ್ರಕಟಗೊಂಡಿದೆ. ” ವಾಗರ್ಥಾವಿವ ಸಂಪ್ರುಕ್ತೌ ” ಎಂದು ಕಾಳಿದಾಸ ” ರಘುವಂಶ” ಕಾವ್ಯವನ್ನು ಶುರುಮಾಡುತ್ತಾನೆ. ವಾಕ್ ಎಂದರೆ ಶಬ್ದ. ಅರ್ಥವೆಂದರೆ ಆ ಶಬ್ದಕ್ಕಿರುವ ಭಾವ. ಹೇಗೆ ಅವೆರಡೂ ಒಂದನ್ನಗಲಿ ಮತ್ತೊಂದಿರಲಾರದೋ, ಹಾಗೆಯೇ ಈ ಜಡ ಜೀವಗಳ ಸಂಬಂಧವೂ ಸಹ. ” ಕಲ್ಲಾಗಿದ್ದ ಅಹಲ್ಯೆ ರಾಮನ ಪದ ಸೋಕಿ ” ಎಂದಾಗ ಕಲ್ಲು ಎನ್ನುವುದು ಜಡವನ್ನೂ, ರಾಮ ಎನ್ನುವ ಪದವನ್ನು ಆ ಪರಮಾತ್ಮ ಚೈತನ್ಯವನ್ನೂ ಪ್ರತಿನಿಧಿಸುತ್ತದೆ. ಇವೆರಡರ ಸಂಸರ್ಗದಿಂದ ಅಹಲ್ಯೆ ಜೀವಂತವಾದಳು ಎಂದು ಉಲ್ಲೇಖವಿದೆ. ಇದು ಕೇವಲ ಒಂದು ದೃಷ್ಟಾಂತವಷ್ಟೇ!!.ನಮಗೆ ಕಾಣುವ ಜಡ ಪದಾರ್ತಗಳೆಂದು ಪರಿಗಣಿಸಲ್ಪಟ್ಟ ಕಲ್ಲು ಬೆಟ್ಟ ಭೂಮಿ, ಎಲ್ಲದರಲ್ಲೂ ಆ ಚೈತನ್ಯ ಸುಪ್ತವಾಗಿದೆ. ಆ “”ಗಾಳಿಯೋ ಸೋಕೆ ಬಲ ತೀವಿ ಚಲಿಪುದದು ” ಎಂದಾಗ, ಆ ಜಡವಸ್ತುವಿಗೆ ಚೈತನ್ಯದ ಗಾಳಿ ಸೋಕಿದರೆ “ಬಲ ತೀವಿ ” ಎಂದರೆ ಶಕ್ತಿಯನ್ನು ಪಡೆದುಕೊಂಡು ಚಲಿಸುತ್ತದೆ ಅಲ್ಲವೇ? ಮನೆಯಲ್ಲಿ ವಿಧ್ಯುತ್ ಉಂಟು, ಅದರ ಮೂಲದಿಂದ ಪ್ರಕಾಶಿಸಬೇಕಾದ “ಬಲ್ಬ್” ತನಕ ವಿಧ್ಯುತ್ ಪ್ರವಾಹವೂ ಉಂಟು. ಆದರೆ, ಆ ಬಲ್ಬ್ ಬೆಳಗಬೇಕಾದರೆ, ಸ್ವಿಚ್ ಒತ್ತಬೇಕು. ” ಗಾಳಿಯೋ ಸೋಕೆ” ಒತ್ತಿದಾಗ, ಬೆಳಕು ಚೆಲ್ಲುತ್ತದೆ ಆ ಬಲ್ಬ್. ಪ್ರಕಾಶಿಸುವ ಸಾಮರ್ತ್ಯವಿದ್ದಾಗ್ಗ್ಯೂ ಮೂಲ ಚೈತನ್ಯದೊಡನೆ ಸಂಪರ್ಕ ಕಲ್ಪಿಸಬೇಕು ಆಗಲೇ ಅದು ಪ್ರಕಾಶಿಸುವುದು.ಆದರೆ ಆ ಜಡ ಪೂರ್ಣ ರೂಪದಲ್ಲಿ ಸಮರ್ಥವಾಗಿರಬೇಕು. ತನ್ನ ಸ್ವಗುಣ ಸಾಮರ್ಥ್ಯವನ್ನು ಕಳೆದುಕೊಂಡಿದ್ದರೆ ಚೈತನ್ಯದ ಸಂಸರ್ಗ ಸಿಕ್ಕರೂ ಜೀವಂತವಾಗಲು, ಬೆಳಗಲು ಸಾಧ್ಯವೇ ಇಲ್ಲ. ನೋಡಿ ಒಂದು ಕಡಲೆ ಬೀಜವನ್ನು ನೆಲದಲ್ಲಿ ನೆಟ್ಟು ನೀರು ಹನಿಸಿದರೆ, ತನ್ನ ಸಾಮರ್ತ್ಯದಿಂದಲೇ, ಪ್ರಕೃತಿಯಲ್ಲಿನ ಜೀವ ಸತ್ವವನ್ನು ಹೀರಿ ತಾನು ಒಂದು ಜೀವಂತ ಸಸಿಯಾಗುತ್ತದೆ, ಫಲ ನೀಡುತ್ತದೆ. ಅದೇ ಬೀಜವನ್ನು ಹುರಿದುಬಿಟ್ಟರೆ ಅದು ತನ್ನ ಸಾಮರ್ತ್ಯವನ್ನು ಕಳೆದುಕೊಂಡು ನೆಲದಲ್ಲಿ ನೆಟ್ಟರೂ ನೀರು ಹನಿಸಿದರೂ ಮೊಳಕೆಯೊಡೆದು ಸಸಿಯಾಗಲು ಸಾಧ್ಯವೇ ಇಲ್ಲ. ಹಾಗಾಗಿ ಜಡಕ್ಕೂ ಚೈತನ್ಯವನ್ನು ಸ್ವೀಕರಿಸುವ ಗುಣವಿದ್ದರೆ ಅದು ಜೀವಂತವಾಗಲು ಸಾಧ್ಯ.ನಾವೂ ಸಹ ಚೈತನ್ಯ ಸದೃಶವಾದ ಜ್ಞಾನವನ್ನು ಪಡೆಯಲು, ಸ್ವೀಕರಿಸುವ ಯೋಗ್ಯತೆಯನ್ನು ಉಳಿಸಿಕೊಂಡಿದ್ದರೆ, ಅಗಾಧ ಜ್ಞಾನ ಭಂಡಾರದಿಂದ ಏನನ್ನಾದರೂ ಸ್ವೀಕರಿಸಿ ನಮ್ಮ ಬುದ್ಧಿಶಕ್ತಿಯನ್ನು ಚಿಗುರಿಸಿ ಪಲ್ಲವಿಸಬಹುದು. ಅಂತಹ ಸ್ವೀಕಾರ ಗುಣಗಳನ್ನೆಲ್ಲ, ನಮ್ಮ ಸ್ವಾರ್ತ, ಅಹಂಕಾರ ಮುಂತಾದ ದುರ್ಗುಣಗಳ ಬೆಂಕಿಯಲ್ಲಿ ಸುಟ್ಟುಬಿಟ್ಟರೆ , ಜ್ಞಾನಬರುವುದು ಸಾಧ್ಯವೇ ಇಲ್ಲ. ಜಡವೂ ಜೀವವೂ ಸೇರಿದ್ದರೂ ಪ್ರಕಾಶಿಸುವುದೇ ಇಲ್ಲ, ಪಲ್ಲವಿಸುವುದೇ ಇಲ್ಲ. ಹಾಗಾಗಿ ನಾವು ಜಡ ಸ್ವರೂಪವನ್ನು(ಅಜ್ಞಾನವನ್ನು) ಶುದ್ಧಿ ಮಾಡಿಕೊಳ್ಳಬೇಕು. ಚೈತನ್ಯವನ್ನು ಬರಮಾಡಿಕೊಳ್ಳಲು ಅಣಿಯಾಗಿಸಿಟ್ಟುಕೊಂಡಿರಬೇಕು. ನಮ್ಮ ಸ್ವಾರ್ಥ ಅಹಂಕಾರ ಮುಂತಾದ ದುರ್ಗುಣಗಳನ್ನು ಧ್ಯಾನದ, ಅಧ್ಯಯನದ, ಜ್ಞಾನದ, ತಪಸ್ಸಿನ ಬೆಂಕಿಯಲ್ಲಿ ಸುಟ್ಟಾಗ, ಜ್ಞಾನ ಸ್ವೀಕಾರ ಗುಣಗಳು ಚುರುಕಾಗಿ, ನಮ್ಮ ರಿಸೀವರ್ ಶುದ್ಧವಾಗಿ, ಯೋಗ್ಯವಾಗಿ,ನಮ್ಮಲ್ಲೂ ಜಡ ಚೈತನ್ಯಗಳ ಸಮಾಗಮವಾಗಿ, ನಾವೂ ಸಹ ಪ್ರಕಾಸಿಸಬಹುದು, ಪಲ್ಲವಿಸಬಹುದು. ನಾವೂ ಸಹ ಅಂತಹ ಪ್ರಯತ್ನವನ್ನು ಮಾಡೋಣ.