[25/08, 10:58 am] R Hanumanthu: ಈ ಜಗತ್ತಿನ ಸೃಷ್ಟಿಯಲ್ಲಿ ಎಲ್ಲವೂ ಆ ಪರಮಾತ್ಮನ ಅವತಾರವೆಂದು ನಾವು ನಂಬಿದ್ದೇವೆ. ಆದರೆ ಇಡೀ ಸೃಷ್ಟಿಯಲ್ಲಿ ಒಂದು ಕ್ರಮವಿದ್ದರೆಷ್ಟು ಅಥವಾ ಇಲ್ಲದಿದ್ದರೆಷ್ಟು. ಹೊರ ರೂಪ ಶಿಷ್ಟವೋ ಅಲ್ಲವೋ ಆದರೆ ಅಂತರ್ಯದಲ್ಲಿರುವ ಆ ಪರಮಾತ್ಮ ತತ್ವವು ಹೊರರೂಪಗಳಿಗೆ ಅತೀತವಾಗಿ ವಿಕಾರಗೊಳ್ಳುವುದಿಲ್ಲ. ಹಾಗಾಗಿ ನಾವು ನಮ್ಮ ದೃಷ್ಟಿಯನ್ನು ಆ ಪರತತ್ವದಲ್ಲಿ ಕೇಂದ್ರೀಕರಿಸಬೇಕು ಎನ್ನುವುದೇ ಈ ಕಗ್ಗದ ಹೂರಣ.
[25/08, 10:58 am] R Hanumanthu: ಒಂದು ಮಹಾ ಶಕ್ತಿ ಕೋಟಿ ಕೋಟಿ ವರ್ಷಗಳ ಹಿಂದೆ ತನ್ನಿಚ್ಚೆಯಂತೆ, ತನ್ನಿಂದಲೇ, ಎಲ್ಲವನ್ನೂ ಆಗ ಮಾಡಿತು. ಅದನ್ನೇ ನಾವು ಪರಮಾತ್ಮ ಶಕ್ತಿಯಂದು ಕರೆಯುತ್ತೇವೆ. ಎರಡಾಗಿ ಪ್ರಕಟವಾಯ್ತು. ಒಂದು ಬಾಹ್ಯ ರೂಪ, ಎರಡು ಅಂತರ್ಯದ ಚೇತನ. ಬಾಹ್ಯ ರೂಪಗಳು ಕೋಟಿ ವಿಧ ಆದರೆ ಅಂತರ್ಯದ ಚೇತನ ಒಂದೇ. ಪ್ರಾಣಿಗಳು, ಪಕ್ಷಿಗಳು, ಕೀಟಗಳು, ಗಿಡಮರಗಳು, ಜಲಚರಗಳು, ಹೀಗೆ ಎಷ್ಟೊಂದು ವಿಧ ಆದರೆ ಅವೆಲ್ಲರ ಅಸ್ತಿತ್ವಕ್ಕೆ ಮತ್ತು ಜೀವನಕ್ಕೆ ಪೂರಕವಾದ ಶಕ್ತಿ ಒಂದೇ. ಅದಕ್ಕೆ ರೂಪವೇ ಇಲ್ಲ. ಅಥವಾ ಎಲ್ಲರೂಪಗಳೂ ಅದೇ ಎಂದರೂ ಸರಿಯಾಗಬಹುದು. ” ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ” ಎಂದು ಅನ್ನಮಾಚಾರ್ಯರ ಹಾಡು. “ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ, ಎಲ್ಲಾರ ರೂಪವೂ ತಾನೇ ಆಗಿ” ಎಂದು. ಎಲ್ಲಕ್ಕೂ ಬಲ ಎಲ್ಲದರಲ್ಲೂ ವ್ಯಾಪಕವಾಗಿರುವವನೆ ಆ ಪರಮಾತ್ಮ ಎಂದು ಕನ್ನಡದ ಆದಿಕವಿ ” ಪುರಂದರ ದಾಸರೂ “ಹೇಳುತ್ತಾರೆ. ಹೊರ ರೂಪಗಳು ಒಂದೇ ಸಮನಾಗಿಲ್ಲದೆ, ಕೆಲವು ಸುಂದರವಾಗಿ, ಕೆಲವು ಕುರೂಪವಾಗಿ, ಕೆಲವು ಅತೀ ಸೂಕ್ಷ್ಮವಾಗಿ, ಕೆಲವು ಬೃಹತ್ತಾಗಿ, ಹೀಗೆ ಸಾವಿರಾರು ವೈವಿಧ್ಯತೆಗಳನ್ನು ಹೊಂದಿದ್ದರೂ ಶಿಷ್ಟವಲ್ಲದೆ ಇದ್ದರೂ ಅಂತರ್ಯದಲ್ಲಿರುವ ಚೇತನ ಶಿಷ್ಟವಾಗಿದೆ ಅದು ಬಾಹ್ಯ ರೂಪದಂತೆ ಬೇಧಹೊಂದುವುದಿಲ್ಲಈ ಜಗತ್ತಿನ ಎಲ್ಲ ಜೀವ ರಾಶಿಗಳ ರೂಪಗಳು ಬೇರೆ ಬೇರೆಯಾದರೂ, ಅವುಗಳು ಜನ್ಮ ತಳೆಯಲು, ಬೆಳೆಯಲು, ಜೀವಿಸಲು ಪೂರಕವಾದ ಶಕ್ತಿಯೇ ಆ ಪರಮಾತ್ಮ ಶಕ್ತಿ. ಅದಿಲ್ಲದಿದ್ದರೆ ಬೇರೆಯಾವುದೂ ಇಲ್ಲ. ನಾವು ನಮ್ಮ ಭೌತಿಕ ಕಣ್ಣುಗಳಿಗೆ ಕಾಣುವ ರೂಪಗಳಿಂದ ವಸ್ತುಗಳ ವೈವಿಧ್ಯತೆಯನ್ನು ನೋಡುತ್ತಿದ್ದೇವೆ, ಭೇದಮಾಡುತ್ತಿದ್ದೇವೆ, ಪ್ರೀತಿಸುತ್ತೇವೆ, ದ್ವೇಷಿಸುತ್ತೇವೆ. ಅಂದರೆ ಈ ಪರಮಾತ್ಮನ ಸೃಷ್ಟಿಯಲ್ಲಿನ ಎಲ್ಲ ವಸ್ತುಗಳ ಪ್ರತಿ ನಮಗಿರುವ ಭಾವಗಳೆಲ್ಲ, ಬಾಹ್ಯ ರೂಪ ಸಂಬಂಧಿಸಿದ್ದು. ಎಲ್ಲದರಲ್ಲೂ ಇರುವುದು ಒಂದೇ ಅಂತಃಶಕ್ತಿಯಂದು ನಾವು ಗುರುತಿಸುವುದೇ ಇಲ್ಲ. ಹಿಂದೆಯೂ ಇದೆ ದೃಷ್ಟಾಂತವನ್ನು ಕೊಟ್ಟಿದ್ದೇನೆ. ಹೇಗೆ ವಿದ್ಯುತ್ ಬಲ್ಬಗಳು, ಬೇರೆ ಬೇರೆ ಆಕಾರ, ಬಣ್ಣದಲ್ಲಿದ್ದರೂ, ಅದು ಪ್ರಕಾಷಿಸಲು ಒಂದೇ ವಿದ್ಯುತ್ತಿನ ಹೇಗೆ ಉಪಯೋಗಿಸಿಕೊಳ್ಳುತ್ತದೋ, ಹಾಗೆಯೇ ಎಲ್ಲ ಜೀವಿಗಳ ಜೀವನಕ್ಕೆ ಹೇತುವಾದ, ಚೇತನವು ಒಂದೇ, ರೂಪಗಳು ಬೇರೆ ಬೇರೆಯಾದರೂ ಅವು ಶಾಶ್ತ್ವತವಲ್ಲ. ನಿತ್ಯವಲ್ಲ. ಈ ಜಗತ್ತಿನಲ್ಲಿ ಶಾಶ್ವತವಾಗಿರುವುದು ಕೇವಲ ಆ ಪರಮಾತ್ಮ ಚೇತನ. ಅದನ್ನು ನಾವು ಗುರುತಿಸಬೇಕು ಎಂಬ ಭಾವವನ್ನು ನಮಗೆ ಭೋಧಿಸುವಂತೆ “ದೃಷ್ಟಿ ಸತ್ವದೊಳಿರಲಿ” ಎಂದು ಮಾನ್ಯ ಗುಂಡಪ್ಪನವರು ಅಪ್ಪಣೆ ಕೊಡಿಸಿದ್ದಾರೆ, ಈ ಕಗ್ಗದಲ್ಲಿ. ಸತ್ಯವಾಗಿ ಒಳಗಿರುವುದೇ ಸತ್ವ. ಅದೇ ಅಂತಸತ್ವ. ಅದನ್ನು ಭಾವಿಸಬೇಕು, ಕಾಣಬೇಕು ಮತ್ತು ಅನುಭವಿಸಬೇಕು. ಅದೇ ನಿಜವಾದ ಪೂಜೆ.
[25/08, 10:58 am] R Hanumanthu: ಆ ಬೃಹಚ್ಚೇತನದ ಒಂದು ಅಂಶವಾದ ನಮ್ಮೊಳಗಿರುವ ಚೇತನ ಯಾವುದೋ ಒಂದು ಅಂಗದಲ್ಲಿರದೆ, ಎಲ್ಲ ಅಂಗಗಳಿಗೂ ಏನು, ಇಡೀ ದೇಹಕ್ಕೇ ಇಂಬು ಕೊಡುವ ಅದು ದೇಹದಲ್ಲೆಲ್ಲ ಒಂದು ಅಂಗುಲವೂ ಬಿಡದೆ, ಸಮಾನವಾಗಿ ವ್ಯಾಪಿಸಿಕೊಂಡಿದೆ, ಅಷ್ಟೇ ಅಲ್ಲ ಒಳಗಿರುವ ಆ ಚೈತನ್ಯವೇ ಜಗತ್ತೆಲ್ಲ ವ್ಯಾಪಿಸಿಕೊಂಡಿದೆ ಎನ್ನುವುದು ಪರಮ ಸತ್ಯ. ಜಗತ್ತಿನ ಜಡ ಚರ ಎಲ್ಲವಸ್ತುಗಳಲ್ಲೂ, ಕೆಲವು ಕಡೆ ಸುಪ್ತವಾಗಿ ಕೆಲವು ಕಡೆ ಸಕ್ರಿಯವಾಗಿ ಇರುವ ಚೈತನ್ಯವೇ ಆ ಪರಮ ಪುರುಷನ ಶಕ್ತಿ. ಏಕೆಂದರೆ ಆ ಪರಮ ಚೈತನ್ಯವೇ ತನ್ನದೇ ಶಕ್ತಿಯಿಂದ ತಾನೇ ಬೇರೆ ರೂಪದಲ್ಲಿ ಪ್ರಕಟಗೊಂಡು ಆ ರೂಪಗಳ ಸಕ್ರಿಯತೆಗೆ ತಾನೇ ಕಾರಣವಾಗಿರುವಾಗ, ಅದು ಇಲ್ಲದ ಸ್ಥಳವಿರಲು ಸಾಧ್ಯವೇ. ಇದನ್ನೇ ಮಾನಿ ಡಿ.ವಿ.ಜಿ ಯವರು “ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ” ಎನ್ನುತ್ತಾರೆ.ಆದರೆ ಆ ಚೈತನ್ಯದ ಸ್ವರೂಪವೇನೆಂದು ಯಾರೂ ಅರಿಯರು. ಎಲ್ಲ ರೂಪಗಳೂ ಅದೇ ಆಗಿರುವಾಗ, ಯಾವುದೇ ಒಂದು ರೂಪಕ್ಕೆ ಅದನ್ನು ಸೀಮಿತಗೊಳಿಸಲಾಗುವುದಿಲ್ಲ, ಅಲ್ಲವೇ? ಎಲ್ಲವನ್ನೂ ಮಾಡಿ ಎಲ್ಲದರೊಳಗೂ ಇದ್ದು ಎಲ್ಲವನ್ನೂ ಸಕ್ರಿಯವಾಗಿ ಇಡಲು ಪೂರಕವಾದ ಈ ಚೈತನ್ಯ ಯಾವುದಕ್ಕೂ ಅಂಟದೆ ಇದ್ದೂ ಇಲ್ಲದ ಹಾಗೆ, ಅಂಟೀ ಅಂಟದ ಹಾಗೆ, ಕಂಡೂ ಕಾಣದ ಹಾಗೆ ಇದೆ. ನಾವು ಎಲ್ಲದರಲ್ಲೂ ಇರುವ ಆ ಮಹಾ ಚೈತನ್ಯಕ್ಕೆ ನಮಿಸೋಣ, ಅದನ್ನು ಭಾವಿಸೋಣ, ಈ ಸೃಷ್ಟಿಯ ಎಲ್ಲದರಲ್ಲೂ ಆ ಚೈತನ್ಯವೇ ಇದೆಯೆಂಬ ಭಾವವನ್ನು ನಮ್ಮ ನಮ್ಮ ಮನಗಳಲ್ಲಿ ಗಟ್ಟಿಯಾದ ನಂಬಿಕೆಯಿಂದ, ಎಲ್ಲವನ್ನೂ, ಆ ಪರಮಾತ್ಮನ ಪ್ರತಿರೂಪವೆಂದು ಗೌರವಿಸುವ ಮನಸ್ಸು ನಮಗೆ ಆ ಪರಮಾತ್ಮ ಕರುಣಿಸಲಿ ಅಲ್ಲವೇ