‘ಬಿಎಸ್ಎಫ್’ ರೋಜ್ಗಾರ್ ಮೇಳದಲ್ಲಿ ಕೇಂದ್ರ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಅಭಿಮತ :
ಬ್ಯಾಟರಾಯನಪುರ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಯೋಜನೆ ‘ಚಂದ್ರಯಾನ-3’ರ ಯಶಸ್ಸು ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಆಗಸದೆತ್ತರಕ್ಕೆ ಏರಿಸಿದ್ದು, ವಿಶ್ವದ ಹಲವು ಅಗ್ರಗಣ್ಯ ದೇಶಗಳು ಭಾರತೀಯರ ಈ ಸಾಧನೆಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ, ಆದರೆ ವಿಚಾರವಂತರು ಎಂಬ ಹಣೆ ಪಟ್ಟಿ ಧರಿಸಿರುವ ಕೆಲವು ಭಾರತೀಯರು ಇಸ್ರೋ ಸಂಸ್ಥೆಯ ನಮ್ಮ ವಿಜ್ಞಾನಿಗಳ ಈ ಸಾಧನೆಯನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವ ಮೂಲಕ ಅಣಕಿಸುವಂತೆ ಮಾತನಾಡುತ್ತಿರುವುದು ಶೋಭೆ ತರುವಂತಹದ್ದಲ್ಲ, ದೇಶಭಕ್ತಿ, ದೇಶದ ರಕ್ಷಣೆ, ದೇಶದ ಗೌರವದ ವಿಷಯ ಬಂದಾಗ ರಾಜಕೀಯ ದೃಷ್ಟಿಕೋನವನ್ನು ಬದಿಗಿಟ್ಟು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಒಗ್ಗಟ್ಟಾಗಬೇಕು ಎಂದು ಕೇಂದ್ರ ಪಂಚಾಯತ್ ರಾಜ್ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಕ್ರಾಸ್ ಸಮೀಪ ಇರುವ ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರೋಜ್ಗಾರ್ ಮೇಳದಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲು ತರಬೇತಿಗಾಗಿ ಆಯ್ಕೆಯಾಗಿರುವ 224 ಯುವ ಸೇನಾನಿಗಳಿಗೆ ನಿಯುಕ್ತಿ ಪತ್ರ ವಿತರಿಸಿದ ನಂತರ ಅವರು ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ಇಂದು ಯುವಕರಿಗಾಗಿ ರೋಜ್ಗಾರ್ ಮೇಳ(ಉದ್ಯೋಗ ಮೇಳ) ನಡೆಯುತ್ತಿದ್ದು, ಇದರ ಭಾಗವಾಗಿ ಬೆಂಗಳೂರಿನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ 224 ಯುವಕ-ಯುವತಿಯರಿಗೆ ಭಾರತೀಯ ಸೇನೆಯ ಬಿಎಸ್ಎಫ್, ಸಿಆರ್ಪಿಎಫ್, ಎಸ್ಎಸ್ಬಿ ಮತ್ತು ಐಟಿಬಿಪಿ ಮುಂತಾದ ವಿಭಾಗಗಗಳಲ್ಲಿ ಕಾರ್ಯನಿರ್ವಹಿಸಲು ನೇಮಕಾತಿ ಮಾಡಿ, ಇಂದು ನಿಯುಕ್ತಿ ಪತ್ರ ವಿತರಿಸಲಾಗಿದ್ದು, ನಿಯುಕ್ತಿ ಪತ್ರ ಪಡೆದ ಯುವ ಸೇನಾನಿಗಳು ತಾವು ಕಾರ್ಯನಿರ್ವಹಿಸಲಿರುವ ವಿಭಾಗಗಳಲ್ಲಿ ತರಬೇತಿಗಾಗಿ ತೆರಳಲಿದ್ದಾರೆ. ಬದಲಾಗುತ್ತಿರುವ ಬಲಿಷ್ಠ ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಲು ಈ 224 ಯುವ ಸೈನಿಕರು ಸರ್ವ ರೀತಿಯಲ್ಲಿ ಸಜ್ಜಾಗಿ ತೆರಳುತ್ತಿದ್ದಾರೆ ಇವರಿಗೆ ಶುಭವಾಗಲಿ ಎಂದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ರಕ್ಷಣೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ತಲುಪುತ್ತಿದ್ದು, ಇತ್ತೀಚೆಗೆ ಯಶಸ್ವಿಯಾದ ಚಂದ್ರಯಾನ-3 ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿದೆ. ಚಂದ್ರನ ದಕ್ಷಿಣ ದೃವಕ್ಕೆ ಜಗತ್ತಿನಲ್ಲೇ ಮೊದಲು ಉಪಗ್ರಹ ಉಡಾವಣೆ ಮಾಡಿರುವ ಅಪ್ರತಿಮ ಕೀರ್ತಿಗೆ ಭಾರತ ಭಾಜನವಾಗಿದೆ. ಈ ದಿಸೆಯಲ್ಲಿ ಭಾರತ ವಿಶ್ವಗುರುವಾಗುವತ್ತ ಧಾಪುಗಾಲು ಹಾಕುತ್ತಿರುವುದು ಹೆಮ್ಮೆಯ ಸಂಗತಿ ಆದರೆ ವಿಚಾರವಂತರೆಂಬ ಹಣೆ ಪಟ್ಟೆ ಹೊಂದಿರುವ ನಮ್ಮ ದೇಶದ ಕೆಲವರು ಚಂದ್ರಯಾನ-೩ರ ಯಶಸ್ಸಿನ ಬಗ್ಗೆ ಕುಹಕದ ಮಾತನಾಡುವ ಮೂಲಕ ನಮ್ಮ ವಿಜ್ಞಾನಿಗಳ ಸಾಧನೆಯನ್ನು ಅಪಮಾನಿಸಿರುವುದು ದುರ್ದೈವದ ಸಂಗತಿ, ದೇಶದ ಕೀರ್ತಿಯನ್ನು ಆಗಸದೆತ್ತರಕ್ಕೆ ಕೊಂಡೊಯ್ದಿರುವ ನಮ್ಮ ವಿಜ್ಞಾನಿಗಳ ಸಾಧನೆಯನ್ನು ರಾಜಕೀಯ ದೃಷ್ಟಿಕೋನದಲ್ಲಿ ನೋಡುವ ಪರಿಕ್ರಮ ಸರಿಯಾದದ್ದಲ್ಲ, ಇಂತಹ ಮನಸ್ಥಿತಿಗಳು ಬದಲಾಗಬೇಕು. ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಮೇಳೈಸಬೇಕೆ ಹೊರತು ಇಂತಹ ರಾಜಕೀಯ ದೃಷ್ಟಿಕೋನ ಉತ್ತಮವಾದ ನಡೆಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದ ಐಜಿ ಗಳಾದ ಜಾರ್ಜ್ ಮಂಜೂರನ್, ಪಿ.ವಿ.ಈಪನ್, ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.
ಚಿತ್ರಸುದ್ದಿ :
ನಗರದ ಬಾಗಲೂರು ಕ್ರಾಸ್ ಸಮೀಪ ಇರುವ ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ರೋಜ್ಗಾರ್ ಮೇಳ’ದಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ತರಬೇತಿಗಾಗಿ ಆಯ್ಕೆಯಾಗಿರುವ 224 ಯುವ ಸೇನಾನಿಗಳಿಗೆ ಕೇಂದ್ರ ಪಂಚಾಯತ್ ರಾಜ್ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ನಿಯುಕ್ತಿ ಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದ ಐಜಿ ಗಳಾದ ಜಾರ್ಜ್ ಮಂಜೂರನ್, ಪಿ.ವಿ.ಈಪನ್, ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.
ದೇಶದ ವಿಷಯದಲ್ಲಿ ರಾಜಕೀಯ ದೃಷ್ಟಿಕೋನ ಸಲ್ಲದು :
‘ಬಿಎಸ್ಎಫ್’ ರೋಜ್ಗಾರ್ ಮೇಳದಲ್ಲಿ ಕೇಂದ್ರ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಅಭಿಮತ :
ಬ್ಯಾಟರಾಯನಪುರ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಯೋಜನೆ ‘ಚಂದ್ರಯಾನ-3’ರ ಯಶಸ್ಸು ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಆಗಸದೆತ್ತರಕ್ಕೆ ಏರಿಸಿದ್ದು, ವಿಶ್ವದ ಹಲವು ಅಗ್ರಗಣ್ಯ ದೇಶಗಳು ಭಾರತೀಯರ ಈ ಸಾಧನೆಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ, ಆದರೆ ವಿಚಾರವಂತರು ಎಂಬ ಹಣೆ ಪಟ್ಟಿ ಧರಿಸಿರುವ ಕೆಲವು ಭಾರತೀಯರು ಇಸ್ರೋ ಸಂಸ್ಥೆಯ ನಮ್ಮ ವಿಜ್ಞಾನಿಗಳ ಈ ಸಾಧನೆಯನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವ ಮೂಲಕ ಅಣಕಿಸುವಂತೆ ಮಾತನಾಡುತ್ತಿರುವುದು ಶೋಭೆ ತರುವಂತಹದ್ದಲ್ಲ, ದೇಶಭಕ್ತಿ, ದೇಶದ ರಕ್ಷಣೆ, ದೇಶದ ಗೌರವದ ವಿಷಯ ಬಂದಾಗ ರಾಜಕೀಯ ದೃಷ್ಟಿಕೋನವನ್ನು ಬದಿಗಿಟ್ಟು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಒಗ್ಗಟ್ಟಾಗಬೇಕು ಎಂದು ಕೇಂದ್ರ ಪಂಚಾಯತ್ ರಾಜ್ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಕ್ರಾಸ್ ಸಮೀಪ ಇರುವ ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರೋಜ್ಗಾರ್ ಮೇಳದಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲು ತರಬೇತಿಗಾಗಿ ಆಯ್ಕೆಯಾಗಿರುವ 224 ಯುವ ಸೇನಾನಿಗಳಿಗೆ ನಿಯುಕ್ತಿ ಪತ್ರ ವಿತರಿಸಿದ ನಂತರ ಅವರು ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ಇಂದು ಯುವಕರಿಗಾಗಿ ರೋಜ್ಗಾರ್ ಮೇಳ(ಉದ್ಯೋಗ ಮೇಳ) ನಡೆಯುತ್ತಿದ್ದು, ಇದರ ಭಾಗವಾಗಿ ಬೆಂಗಳೂರಿನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ 224 ಯುವಕ-ಯುವತಿಯರಿಗೆ ಭಾರತೀಯ ಸೇನೆಯ ಬಿಎಸ್ಎಫ್, ಸಿಆರ್ಪಿಎಫ್, ಎಸ್ಎಸ್ಬಿ ಮತ್ತು ಐಟಿಬಿಪಿ ಮುಂತಾದ ವಿಭಾಗಗಗಳಲ್ಲಿ ಕಾರ್ಯನಿರ್ವಹಿಸಲು ನೇಮಕಾತಿ ಮಾಡಿ, ಇಂದು ನಿಯುಕ್ತಿ ಪತ್ರ ವಿತರಿಸಲಾಗಿದ್ದು, ನಿಯುಕ್ತಿ ಪತ್ರ ಪಡೆದ ಯುವ ಸೇನಾನಿಗಳು ತಾವು ಕಾರ್ಯನಿರ್ವಹಿಸಲಿರುವ ವಿಭಾಗಗಳಲ್ಲಿ ತರಬೇತಿಗಾಗಿ ತೆರಳಲಿದ್ದಾರೆ. ಬದಲಾಗುತ್ತಿರುವ ಬಲಿಷ್ಠ ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಲು ಈ 224 ಯುವ ಸೈನಿಕರು ಸರ್ವ ರೀತಿಯಲ್ಲಿ ಸಜ್ಜಾಗಿ ತೆರಳುತ್ತಿದ್ದಾರೆ ಇವರಿಗೆ ಶುಭವಾಗಲಿ ಎಂದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ರಕ್ಷಣೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ತಲುಪುತ್ತಿದ್ದು, ಇತ್ತೀಚೆಗೆ ಯಶಸ್ವಿಯಾದ ಚಂದ್ರಯಾನ-3 ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿದೆ. ಚಂದ್ರನ ದಕ್ಷಿಣ ದೃವಕ್ಕೆ ಜಗತ್ತಿನಲ್ಲೇ ಮೊದಲು ಉಪಗ್ರಹ ಉಡಾವಣೆ ಮಾಡಿರುವ ಅಪ್ರತಿಮ ಕೀರ್ತಿಗೆ ಭಾರತ ಭಾಜನವಾಗಿದೆ. ಈ ದಿಸೆಯಲ್ಲಿ ಭಾರತ ವಿಶ್ವಗುರುವಾಗುವತ್ತ ಧಾಪುಗಾಲು ಹಾಕುತ್ತಿರುವುದು ಹೆಮ್ಮೆಯ ಸಂಗತಿ ಆದರೆ ವಿಚಾರವಂತರೆಂಬ ಹಣೆ ಪಟ್ಟೆ ಹೊಂದಿರುವ ನಮ್ಮ ದೇಶದ ಕೆಲವರು ಚಂದ್ರಯಾನ-೩ರ ಯಶಸ್ಸಿನ ಬಗ್ಗೆ ಕುಹಕದ ಮಾತನಾಡುವ ಮೂಲಕ ನಮ್ಮ ವಿಜ್ಞಾನಿಗಳ ಸಾಧನೆಯನ್ನು ಅಪಮಾನಿಸಿರುವುದು ದುರ್ದೈವದ ಸಂಗತಿ, ದೇಶದ ಕೀರ್ತಿಯನ್ನು ಆಗಸದೆತ್ತರಕ್ಕೆ ಕೊಂಡೊಯ್ದಿರುವ ನಮ್ಮ ವಿಜ್ಞಾನಿಗಳ ಸಾಧನೆಯನ್ನು ರಾಜಕೀಯ ದೃಷ್ಟಿಕೋನದಲ್ಲಿ ನೋಡುವ ಪರಿಕ್ರಮ ಸರಿಯಾದದ್ದಲ್ಲ, ಇಂತಹ ಮನಸ್ಥಿತಿಗಳು ಬದಲಾಗಬೇಕು. ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಮೇಳೈಸಬೇಕೆ ಹೊರತು ಇಂತಹ ರಾಜಕೀಯ ದೃಷ್ಟಿಕೋನ ಉತ್ತಮವಾದ ನಡೆಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದ ಐಜಿ ಗಳಾದ ಜಾರ್ಜ್ ಮಂಜೂರನ್, ಪಿ.ವಿ.ಈಪನ್, ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.
ಚಿತ್ರಸುದ್ದಿ :
ನಗರದ ಬಾಗಲೂರು ಕ್ರಾಸ್ ಸಮೀಪ ಇರುವ ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ರೋಜ್ಗಾರ್ ಮೇಳ’ದಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ತರಬೇತಿಗಾಗಿ ಆಯ್ಕೆಯಾಗಿರುವ 224 ಯುವ ಸೇನಾನಿಗಳಿಗೆ ಕೇಂದ್ರ ಪಂಚಾಯತ್ ರಾಜ್ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ನಿಯುಕ್ತಿ ಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದ ಐಜಿ ಗಳಾದ ಜಾರ್ಜ್ ಮಂಜೂರನ್, ಪಿ.ವಿ.ಈಪನ್, ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.