ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಹಿಂದುಸಾಗರ ಸಮುದಾಯ ಭವನದಲ್ಲಿ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠ, ಹರಿಹರಪುರದ ಶ್ರೀ ಮಠ, ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿ, ಶ್ರೀ ಆರ್ಷವಿದ್ಯಾಸಂವರ್ಧಿನೀ ಸಭಾ ವತಿಯಿಂದ ಇಂದು ನಡೆದ ವಿಶೇಷ ಅನುಗ್ರಹ ಪ್ರಶಸ್ತಿ ಪ್ರದಾನ, ಅನುಗ್ರಹ ಅಶೀರ್ವಚನ ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ.ಗೋಪಾಲಯ್ಯನವರು ಉದ್ಘಾಟಿಸಿದರು.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಯವರು ಆಶೀರ್ವಚವನ್ನು ನಡೆಸಿದರು.
ಇದೇ ವೇಳೆ ವಿದ್ವಾಂಸರುಗಳಾದ ವೇದಬ್ರಹ್ಮಶ್ರೀ ಮಹಾಮಹೋಪಾಧ್ಯಾಯ ಮಣಿ ದ್ರಾವಿಡ ಶಾಸ್ತ್ರಿಗಳು,
ವೇದಬ್ರಹ್ಮ ಶ್ರೀ ಆಚಾರ್ಯ ರಾಜಾರಾಂ ಶುಕ್ಲವರ್ಯ,
ವೇದಬ್ರಹ್ಮ ಶ್ರೀ ಆಚಾರ್ಯ ಕೆ.ಎಸ್. ಗಣಪತಿ ಭಟ್ಟ,
ವೇದಬ್ರಹ್ಮ ಶ್ರೀ ಶ್ರೀಗಣೇಶ ಈಶ್ವರ ಭಟ್ಟ,
ವೇದಬ್ರಹ್ಮ ಶ್ರೀ ಆಚಾರ್ಯ ಕೆ.ಎಸ್. ಸತೀಶ, ವೇದಬ್ರಹ್ಮ ಶ್ರೀ ಶ್ರೀಹರಿಧಾಯಿಗುಡೆ , ವೇದಬ್ರಹ್ಮಶ್ರೀ ಶ್ರೀಕುವಲಯದತ್ತ ಮಹಾಭಾಗ, ವೇದಬ್ರಹ್ಮ ಶ್ರೀ ಎಂ.ಎಸ್. ವರದರಾಜನ್, ವೇದಬ್ರಹ್ಮ ಶ್ರೀ ಜೆ.ಎಸ್. ಸುರೇಶಕೃಷ್ಣ, ವೇದಬ್ರಹ್ಮಶ್ರೀ ಟಿ.ಎಸ್. ಶ್ರೀಧರ ಸೇರಿದಂತೆ ಇತರರು ಉಸ್ಥಿತರಿದ್ದರು.