ಹುಬ್ಬಳ್ಳಿ :- ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ , ಜಗದೀಶ್ ಶೆಟ್ಟರ್ ಯಾರು ಸಹ ನನ್ನನ್ನು ಪಕ್ಷಕ್ಕೆ ಕರೆದಿಲ್ಲ ಎಂದ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಬೇಕು ಎನ್ನುವ ಬಯಕೆ ನನಗಿಲ್ಲ.ಯಾವುದೇ ಸಭೆ ಮಾಡಿಲ್ಲ, ಮನೆಯಲ್ಲಿ ಕಹಿ ಘಟನೆ ನಡೆದಿವೆ ಹಾಗಾಗಿ ನವೆಂಬರ್ ತನಕ ಯಾವುದೇ ಸಕ್ರಿಯವಾಗಿ ರಾಜಕೀಯದ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ.ಆದರೆ ನನಗೆ ಸ್ವಲ್ಪ ಭಿನ್ನಾಭಿಪ್ರಾಯಗಳಿವೆ ಇದು ಸತ್ಯ.
ಧಾರವಾಡ ಜಿಲ್ಲೆಯಲ್ಲಿ ಅನೇಕರು ನಮ್ಮ ಪಕ್ಷ ಬಿಟ್ಟುಕೊಟ್ಟಿದ್ದಾರೆ.ಪ್ರಹ್ಲಾದ್ ಜೋಶಿ ಅವರ ಮೇಲೆ ಬಹಳಷ್ಟು ದೊಡ್ಡ ಜವಾಬ್ದಾರಿಯಿದೆ.ಅವರು ಎಲ್ಲ ನಾಯಕರನ್ನು ಎಲ್ಲಾ ಸಮುದಾಯವನ್ನು ಜೊತೆಗೆ ತೆಗೆದುಕೊಂಡು ಹೋಗವ ಕೆಲಸ ಜೋಶಿ ಮಾಡಬೇಕು.
ಬಿಜೆಪಿ ಪಕ್ಷದಲ್ಲಿ ಅನಂತಕುಮಾರ್ ಇಲ್ಲ, ಜಗದೀಶ್ ಶೆಟ್ಟರ್ ಮೂರು ತಿಂಗಳಿನಿಂದ ಪಾರ್ಟಿಯಲ್ಲಿ ಇಲ್ಲ ಇದನ್ನು ಜೋಶಿ ಅರ್ಥ ಮಾಡಿಕೊಳ್ಳಬೇಕು.ಈ ಹಿಂದೆ ಅವರಿಂದ ಜಾಸ್ತಿ ತಪ್ಪಾಗಿದೆ. ನಿಗಮ ಮಂಡಳಿಗಳನ್ನು ನೀಡುವಾಗ , ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿದ ಆರೋಪವಿದೆ.ಪಕ್ಷದಲ್ಲಿರುವ ಅಸಮಾಧಾನದ ಜವಾಬ್ದಾರಿಯನ್ನು ಪ್ರಹ್ಲಾದ್ ಜೋಶಿ ತೆಗೆದುಕೊಳ್ಳಬೇಕು.ಕಾರ್ಯಕರ್ತರಿಗೆ ನೋವಾದಾಗ ನನಗೆ ಸಂಕಟವಾಗುತ್ತದೆ.
ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ನನ್ನ ಬೆಳವಣಿಗೆ ಕಾರಣಿಭೂತರು.ಅನಂತಕುಮಾರ ಇದ್ದಿದ್ದರೆ ಇವತ್ತು ಕರ್ನಾಟಕದಲ್ಲಿ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಕಲಘಟಗಿ ಮಾಜಿ ಶಾಸಕ ನಿಂಬಣ್ಣವರು ನಮ್ಮೊಂದಿಗಿಲ್ಲ.
ಮುಂದಿನ ಜನೆವರಿ ತಿಂಗಳ ಕೊನೆಯ ಹಂತದಲ್ಲಿ ನನ್ನ ನಿರ್ಧಾರ ತೆಗೆದುಕೊಳ್ಳುತ್ತನೆ.ಈ ವಿಚಾರವನ್ನು ಮಾಧ್ಯಮ ಮುಂದೆ ತಿಳಿಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

