Post navigation ಪಕ್ಷ ತೊರೆಯುವ ವಿಚಾರ ನವೆಂಬರ್ ನಲ್ಲಿ ಸ್ಪಷ್ಟಣೆ:ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಸುದ್ದಿಗೊಷ್ಠಿ ಚಿಕ್ಕಬಳ್ಳಾಪುರ: ಅಧಿಕಾರ ಶಾಶ್ವತವಲ್ಲ ಅದು ಇರಲಿ ಬಿಡಲಿ ಜನರ ಸೇವೆಗೆ ನಾನು ಸದಾ ಮುಂದು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ತಾಲ್ಲೂಕಿನ ಪೆರೇಸಂದ್ರ ಗ್ರಾಮ ವ್ಯಾಪ್ತಿಯ ಅರೂರು ಗ್ರಾಮ ಪಂಚಾಯತಿ ವತಿಯಿಂದ ಪೆರೇಸಂದ್ರದ ಶ್ರೀ ಮಂಜುನಾಥೇಶ್ವರ ಸಮುದಾಯ ಭವನದಲ್ಲಿ ಜನಪ್ರಿಯ ಶಾಶಕರಾದ ಪ್ರದೀಪ್ ಈಶ್ವರ್ ರವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು ಈ ವೇಳೆ ಮಾತನಾಡಿದ ಅವರು ಕೇವಲ ಚುನಾವಣೆ ಹತ್ತಿರ ಬಂದಾಗ ಜನರ ಸೇವೆ ಮಾಡುವುದು ಸರಿಯಲ್ಲ,ಜನರನ್ನ ತಮ್ಮ ಕಡೆ ಸೆಳೆಯಲು ಚುನಾವಣೆ ಸಂಧರ್ಭದಲ್ಲಿ ಅವರ ಹತ್ತಿರ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಿಲ್ಲ ನನಗೆ ಅಧಿಕಾರ ಸಿಕ್ಕಿದೆ ಜನರ ಸೇವೆಯೆ ನನ್ನ ಪ್ರಥಮ ಆದ್ಯತೆ ಅಧಿಕಾರ ಇರಲಿ ಬಿಡಲಿ ಮುಂದೆ ನಾನು ಗೆಲ್ಲಲಿ ಅಥವಾ ಸೋಲಲಿ ಜನರೊಂದಿಗೆ ಇರುತ್ತೇನೆ ಎಂದ ಅವರು ಶಾಸಕನಾದ ನಂತರ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮುಖಾಂತರ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.ಈ ಕಾರ್ಯಕಮ ಎಂದಿಗೂ ನಿಲ್ಲಲ್ಲ ನನ್ನನ್ನು ಆಯ್ಕೆ ಮಾಡಿ ಈ ಕ್ಷೇತ್ರದ ಜನ ವಿಧಾನ ಸೌಧ ಗೆ ಕಳಿಸಿದ್ದಾರೆ ಅವರ ಪ್ರತಿ ಒಂದು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನನ್ನದು ಹಾಗಾಗಿ ನನ್ನ ಜನರ ಅನುಕೂಲಕ್ಕಾಗಿ ಏನೆಲ್ಲಾ ಮಾಡಬೇಕು ಹಂತ ಹಂತವಾಗಿ ಮಾಡಲಾಗುವುದು ಎಂದರು.