ಚಿಕ್ಕಬಳ್ಳಾಪುರ: ಅಧಿಕಾರ ಶಾಶ್ವತವಲ್ಲ ಅದು ಇರಲಿ ಬಿಡಲಿ ಜನರ ಸೇವೆಗೆ ನಾನು ಸದಾ ಮುಂದು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ತಾಲ್ಲೂಕಿನ ಪೆರೇಸಂದ್ರ ಗ್ರಾಮ ವ್ಯಾಪ್ತಿಯ ಅರೂರು ಗ್ರಾಮ ಪಂಚಾಯತಿ ವತಿಯಿಂದ ಪೆರೇಸಂದ್ರದ ಶ್ರೀ ಮಂಜುನಾಥೇಶ್ವರ ಸಮುದಾಯ ಭವನದಲ್ಲಿ ಜನಪ್ರಿಯ ಶಾಶಕರಾದ ಪ್ರದೀಪ್ ಈಶ್ವರ್ ರವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು ಈ ವೇಳೆ ಮಾತನಾಡಿದ ಅವರು ಕೇವಲ ಚುನಾವಣೆ ಹತ್ತಿರ ಬಂದಾಗ ಜನರ ಸೇವೆ ಮಾಡುವುದು ಸರಿಯಲ್ಲ,ಜನರನ್ನ ತಮ್ಮ ಕಡೆ ಸೆಳೆಯಲು ಚುನಾವಣೆ ಸಂಧರ್ಭದಲ್ಲಿ ಅವರ ಹತ್ತಿರ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಿಲ್ಲ ನನಗೆ ಅಧಿಕಾರ ಸಿಕ್ಕಿದೆ ಜನರ ಸೇವೆಯೆ ನನ್ನ ಪ್ರಥಮ ಆದ್ಯತೆ ಅಧಿಕಾರ ಇರಲಿ ಬಿಡಲಿ ಮುಂದೆ ನಾನು ಗೆಲ್ಲಲಿ ಅಥವಾ ಸೋಲಲಿ ಜನರೊಂದಿಗೆ ಇರುತ್ತೇನೆ ಎಂದ ಅವರು ಶಾಸಕನಾದ ನಂತರ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮುಖಾಂತರ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.ಈ ಕಾರ್ಯಕಮ ಎಂದಿಗೂ ನಿಲ್ಲಲ್ಲ ನನ್ನನ್ನು ಆಯ್ಕೆ ಮಾಡಿ ಈ ಕ್ಷೇತ್ರದ ಜನ ವಿಧಾನ ಸೌಧ ಗೆ ಕಳಿಸಿದ್ದಾರೆ ಅವರ ಪ್ರತಿ ಒಂದು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನನ್ನದು ಹಾಗಾಗಿ ನನ್ನ ಜನರ ಅನುಕೂಲಕ್ಕಾಗಿ ಏನೆಲ್ಲಾ ಮಾಡಬೇಕು ಹಂತ ಹಂತವಾಗಿ ಮಾಡಲಾಗುವುದು ಎಂದರು.

Aug 29, 2023

ಆರೋಗ್ಯ ಸಮಸ್ಯೆ ಉಂಟಾದಾಗ ಬೆಂಗಳೂರಿಗೆ ಅಥವಾ ಗ್ರಾಮಗಳಿಂದ ನಗರಕ್ಕೆ ಹೋಗಲು ಬಡ ಜನರ ಬಳಿ ದುಡ್ಡು ಇರೂಲ್ಲ ಹಾಗಾಗಿ ನನ್ನ ಕ್ಷೇತ್ರದಲ್ಲಿ ಬಡ ಜನರ ಅನುಕೂಲಕ್ಕಾಗಿ ನನ್ನ ವಿಧಾನಸಭಾ ಕ್ಷೇತ್ರಕ್ಕೆ ೫ ಆಂಬ್ಯುಲೆನ್ಸ್ ನನ್ನ ಕಡೆಯಿಂದ ಉಚಿತವಾಗಿ ನೀಡಲಾಗುವುದು ದಿನದ ೨೪ ಘಂಟೆ ಈ ಆಂಬ್ಯುಲೆನ್ಸ್ ಕಾರ್ಯ
ನಿರ್ವಹಿಸಲಿದೆ ಎಂದರು.

ಜೀವನದಲ್ಲಿ ಯಶಸ್ಸು ಕಾಣಲು ಮುಂದೆ ಬರಲು ಜನರ ಆಶೀರ್ವಾದ ಬಹಳ ಮುಖ್ಯ ಇರಷ್ಟು ದಿನ ಜನರಿಗೆ ಒಳ್ಳೆಯದನ್ನ ಮಾಡಬೇಕು ಅಧಿಕಾರ ಇದೆ ಅಂತ ಇನ್ನೂ ೨೦ ವರ್ಷ ನಾನೆ ನಿಮ್ಮ ಪ್ರತಿ ನಿಧಿ ಎಂದುಕೊಂಡರೆ ಅದು ಸುಳ್ಳು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಜನರ ಆಶೀರ್ವಾದ ಬೇಕು ಅವರ ಆಶೀರ್ವಾದಬೇಕಾದರೆ ಅವರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಬಗೆಹರಿಸಿ ಅವರ ಸೇವೆ ಮಾಡಬೇಕು ಎಂದರು.ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿ ಕಡೆ ಸಾಗಿಸುವ ನಿಟ್ಟಿನಲ್ಲಿ ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಹೆಚ್ಚಿನ ಅನುದಾನ ತರಲು ಸಂಭಂದ ಪಟ್ಟ ಇಲಾಖೆಯ ಮಂತ್ರಿಗಳೂಂದಿಗೆ ಚರ್ಚಿಸುತ್ತಿದ್ದೇನೆ ಎಂದರು.ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರಾದ ಪ್ರದೀಪ್ ಈಶ್ವರ್ ಜನರ ಅಹವಾಲುಗಳನ್ನು ಸ್ವೀಕರಿಸಿ ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ದಯಾನಂದ್,ಕ್ವಾಲಟಿ ನಾರಾಯಣಸ್ವಾಮಿ,ಎಂ.ಎನ್ ಜೋಳದ ಲಕ್ಷಿಪತಿ, ಮತ್ತು ಹಲವಾರು ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಅದಿಕೃತವಾಗಿ ಸೇರ್ಪಡೆಗೊಂಡರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಟ್ಟಣ್ಣ,ನಾಗಭೂಷಣ್, ಶಂಕರ ಎನ್.ವಿ.ಎಂ.ವೆoಕಟೇಶ್,ರಮೇಶ್, ಕುಪೇಂದ್ರ, ಡಿ.ವಿ.ಆರ್.ರಾಜೇಶ್,
ಬಿ.ಆರ್.ವಿಜಯಕುಮಾರ್, ಬಾಂಬೆ ನಾಗರಾಜ್,ರಾಮಾಂಜಿ,ಮತ್ತಿತರರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾಕ್ಟರುಗಳು,ಪೋಲಿಸ್ ಸಿಬ್ಬಂದಿ,ಮತ್ತು ಇಂಜಿನಿಯರ್‌ಗಳನ್ನು ಶಾಸಕರು ಆತ್ಮೀಯವಾಗಿ ಸನ್ಮಾನಿಸಿದರು.

Leave a Reply

Your email address will not be published. Required fields are marked *