ಆರೋಗ್ಯ ಸಮಸ್ಯೆ ಉಂಟಾದಾಗ ಬೆಂಗಳೂರಿಗೆ ಅಥವಾ ಗ್ರಾಮಗಳಿಂದ ನಗರಕ್ಕೆ ಹೋಗಲು ಬಡ ಜನರ ಬಳಿ ದುಡ್ಡು ಇರೂಲ್ಲ ಹಾಗಾಗಿ ನನ್ನ ಕ್ಷೇತ್ರದಲ್ಲಿ ಬಡ ಜನರ ಅನುಕೂಲಕ್ಕಾಗಿ ನನ್ನ ವಿಧಾನಸಭಾ ಕ್ಷೇತ್ರಕ್ಕೆ ೫ ಆಂಬ್ಯುಲೆನ್ಸ್ ನನ್ನ ಕಡೆಯಿಂದ ಉಚಿತವಾಗಿ ನೀಡಲಾಗುವುದು ದಿನದ ೨೪ ಘಂಟೆ ಈ ಆಂಬ್ಯುಲೆನ್ಸ್ ಕಾರ್ಯ
ನಿರ್ವಹಿಸಲಿದೆ ಎಂದರು.
ಜೀವನದಲ್ಲಿ ಯಶಸ್ಸು ಕಾಣಲು ಮುಂದೆ ಬರಲು ಜನರ ಆಶೀರ್ವಾದ ಬಹಳ ಮುಖ್ಯ ಇರಷ್ಟು ದಿನ ಜನರಿಗೆ ಒಳ್ಳೆಯದನ್ನ ಮಾಡಬೇಕು ಅಧಿಕಾರ ಇದೆ ಅಂತ ಇನ್ನೂ ೨೦ ವರ್ಷ ನಾನೆ ನಿಮ್ಮ ಪ್ರತಿ ನಿಧಿ ಎಂದುಕೊಂಡರೆ ಅದು ಸುಳ್ಳು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಜನರ ಆಶೀರ್ವಾದ ಬೇಕು ಅವರ ಆಶೀರ್ವಾದಬೇಕಾದರೆ ಅವರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಬಗೆಹರಿಸಿ ಅವರ ಸೇವೆ ಮಾಡಬೇಕು ಎಂದರು.ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿ ಕಡೆ ಸಾಗಿಸುವ ನಿಟ್ಟಿನಲ್ಲಿ ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಹೆಚ್ಚಿನ ಅನುದಾನ ತರಲು ಸಂಭಂದ ಪಟ್ಟ ಇಲಾಖೆಯ ಮಂತ್ರಿಗಳೂಂದಿಗೆ ಚರ್ಚಿಸುತ್ತಿದ್ದೇನೆ ಎಂದರು.ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರಾದ ಪ್ರದೀಪ್ ಈಶ್ವರ್ ಜನರ ಅಹವಾಲುಗಳನ್ನು ಸ್ವೀಕರಿಸಿ ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ದಯಾನಂದ್,ಕ್ವಾಲಟಿ ನಾರಾಯಣಸ್ವಾಮಿ,ಎಂ.ಎನ್ ಜೋಳದ ಲಕ್ಷಿಪತಿ, ಮತ್ತು ಹಲವಾರು ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಅದಿಕೃತವಾಗಿ ಸೇರ್ಪಡೆಗೊಂಡರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಟ್ಟಣ್ಣ,ನಾಗಭೂಷಣ್, ಶಂಕರ ಎನ್.ವಿ.ಎಂ.ವೆoಕಟೇಶ್,ರಮೇಶ್, ಕುಪೇಂದ್ರ, ಡಿ.ವಿ.ಆರ್.ರಾಜೇಶ್,
ಬಿ.ಆರ್.ವಿಜಯಕುಮಾರ್, ಬಾಂಬೆ ನಾಗರಾಜ್,ರಾಮಾಂಜಿ,ಮತ್ತಿತರರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾಕ್ಟರುಗಳು,ಪೋಲಿಸ್ ಸಿಬ್ಬಂದಿ,ಮತ್ತು ಇಂಜಿನಿಯರ್ಗಳನ್ನು ಶಾಸಕರು ಆತ್ಮೀಯವಾಗಿ ಸನ್ಮಾನಿಸಿದರು.


