ಹುಬ್ಬಳ್ಳಿ:- ಕರ್ನಾಟಕ ರಾಜ್ಯ ಸೋಶಿಯಲ್ ಡೆಮಾಕ್ರೇಟಿಕ್ ಪಾರ್ಟಿ ಒಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ನೂತನ ರಾಜ್ಯ ಸಮಿತಿ ಸದಸ್ಯರಾಗಿ ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರಾಗಿ ಹುಬ್ಬಳ್ಳಿಯ ಡಾ. ವಿಜಯ ಎಮ್ ಗುಂಟ್ರಾಳ ಅವರನ್ನು ನೇಮಕ ಮಾಡಲಾಗಿದೆ.

ಸಹ ಸಂಚಾಲಕರು, ಇತರೆ ಸಮಿತಿ ಸದಸ್ಯರು ಸೇರಿದಂತೆ ಒಟ್ಟು 11 ಜನರನ್ನು ಒಳಗೊಂಡ ಸಮಿತಿ ಇದಾಗಿದ್ದು, ರಾಜ್ಯಾದ್ಯಂತ ಸಂಚರಿಸಿ ಪಕ್ಷದ 14 ವರ್ಷಗಳ ಜನಪರ ಸೇವೆಯನ್ನು ಮನದಟ್ಟು ಮಾಡಿ “ಹಸಿವು ಮುಕ್ತ ಸ್ವಾತ್ಯಂತ್ರ್ಯ – ಭಯ ಮುಕ್ತ ಸ್ವಾತಂತ್ರ್ಯ” ಪಕ್ಷದ ಉದ್ದೇಶವನ್ನು ಸಾಕಾರ ಗೊಳಿಸಲು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪಕ್ಷಕ್ಕೆ ಕರೆತರುವ ಮಹತ್ತರ ಜವಾಬ್ದಾರಿ ಇದಾಗಿದೆ.

ಈಗಾಗಲೇ ಹಲವಾರು ಹೋರಾಟಗಳ ಮೂಲಕ ಹುಬ್ಬಳ್ಳಿಯಲ್ಲಿ ತಮ್ಮ ಛಾಪು ಮೂಡಿಸಿರುವ ಡಾ. ವಿಜಯ ಗುಂಟ್ರಾಳ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಪಕ್ಷ ಸೇರ್ಪಡೆಗೊಂಡು ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡಿದ್ದರು. ಇದೀಗ ಅವರ ಸಂಘಟನಾ ಚಾತುರ್ಯವನ್ನು ಮೆಚ್ಚಿ ಹೊಸ ಜವಾಬ್ದಾರಿ ನೀಡಿದ್ದು,ರಾಜ್ಯಾದ್ಯಂತ ಸಂಚರಿಸಿ ಪಕ್ಷದ ಬಲ ವರ್ಧನೆಗೆ ಹಗಲಿರುಳು ಶ್ರಮಿಸುವುದಾಗಿ ಮತ್ತು ಇದಕ್ಕಾಗಿ ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀ ಅಬ್ದುಲ್ ಮಜೀದ್ ಅವರಿಗೆ ಹಾಗೂ ಪಕ್ಷದ ಎಲ್ಲ ಹಿರಿಯ ಮುಖಂಡರಿಗೆ, ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಡಾ.ವಿಜಯ ಎಮ್ ಗುಂಟ್ರಾಳ, ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರು ತಿಳಿಸಿದರು.

ಎಸ್.ಡಿ.ಪಿ.ಐ.ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರಾಗಿ ಡಾ. ವಿಜಯ ಗುಂಟ್ರಾಳ ನೇಮಕ


ಹುಬ್ಬಳ್ಳಿ:- ಕರ್ನಾಟಕ ರಾಜ್ಯ ಸೋಶಿಯಲ್ ಡೆಮಾಕ್ರೇಟಿಕ್ ಪಾರ್ಟಿ ಒಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ನೂತನ ರಾಜ್ಯ ಸಮಿತಿ ಸದಸ್ಯರಾಗಿ ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರಾಗಿ ಹುಬ್ಬಳ್ಳಿಯ ಡಾ. ವಿಜಯ ಎಮ್ ಗುಂಟ್ರಾಳ ಅವರನ್ನು ನೇಮಕ ಮಾಡಲಾಗಿದೆ.

ಸಹ ಸಂಚಾಲಕರು, ಇತರೆ ಸಮಿತಿ ಸದಸ್ಯರು ಸೇರಿದಂತೆ ಒಟ್ಟು 11 ಜನರನ್ನು ಒಳಗೊಂಡ ಸಮಿತಿ ಇದಾಗಿದ್ದು, ರಾಜ್ಯಾದ್ಯಂತ ಸಂಚರಿಸಿ ಪಕ್ಷದ 14 ವರ್ಷಗಳ ಜನಪರ ಸೇವೆಯನ್ನು ಮನದಟ್ಟು ಮಾಡಿ “ಹಸಿವು ಮುಕ್ತ ಸ್ವಾತ್ಯಂತ್ರ್ಯ – ಭಯ ಮುಕ್ತ ಸ್ವಾತಂತ್ರ್ಯ” ಪಕ್ಷದ ಉದ್ದೇಶವನ್ನು ಸಾಕಾರ ಗೊಳಿಸಲು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪಕ್ಷಕ್ಕೆ ಕರೆತರುವ ಮಹತ್ತರ ಜವಾಬ್ದಾರಿ ಇದಾಗಿದೆ.

ಈಗಾಗಲೇ ಹಲವಾರು ಹೋರಾಟಗಳ ಮೂಲಕ ಹುಬ್ಬಳ್ಳಿಯಲ್ಲಿ ತಮ್ಮ ಛಾಪು ಮೂಡಿಸಿರುವ ಡಾ. ವಿಜಯ ಗುಂಟ್ರಾಳ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಪಕ್ಷ ಸೇರ್ಪಡೆಗೊಂಡು ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡಿದ್ದರು. ಇದೀಗ ಅವರ ಸಂಘಟನಾ ಚಾತುರ್ಯವನ್ನು ಮೆಚ್ಚಿ ಹೊಸ ಜವಾಬ್ದಾರಿ ನೀಡಿದ್ದು,ರಾಜ್ಯಾದ್ಯಂತ ಸಂಚರಿಸಿ ಪಕ್ಷದ ಬಲ ವರ್ಧನೆಗೆ ಹಗಲಿರುಳು ಶ್ರಮಿಸುವುದಾಗಿ ಮತ್ತು ಇದಕ್ಕಾಗಿ ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀ ಅಬ್ದುಲ್ ಮಜೀದ್ ಅವರಿಗೆ ಹಾಗೂ ಪಕ್ಷದ ಎಲ್ಲ ಹಿರಿಯ ಮುಖಂಡರಿಗೆ, ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಡಾ.ವಿಜಯ ಎಮ್ ಗುಂಟ್ರಾಳ, ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರು ತಿಳಿಸಿದರು.

Leave a Reply

Your email address will not be published. Required fields are marked *