ಬಳ್ಳಾರಿ ಆ,31,
ನಗರ ಶಾಸಕ ಭರತ್ ರೆಡ್ಡಿಯವರು ಕಾಂಗ್ರೆಸ್ ಗ್ಯಾರೆಂಟಿಗಳಿಂದ ಗೆದ್ದು ಬಂದಿದ್ದಾರೆಯೇ ಹೊರತು ಸ್ವಂತ ಬಲದಿಂದ ಗೆದ್ದಿಲ್ಲ ಅವರಿಗೆ ತಾಕತ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ವಿರುದ್ದ ನೀವು ಸ್ವತಂತ್ರವಾಗಿ ನಿಂತು ಗೆದ್ದು ತೋರಿಸಿ. ನಾನು ಸೋತರೆ ನಿಮ್ಮ ಮನೆ ಮುಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವೆ. ನೀವು ಸೋತರೆ ಏನು ಮಾಡ್ತೀರಿ? ಹೇಳಿ ಎಂದು ಶಾಸಕ ಭರತ್ ರೆಡ್ಡಿ ಅವರಿಗೆ ಕೆ.ಆರ್.ಪಿ.ಪಕ್ಷದ ಮುಖಂಡ, ಮಾಜಿ ಬೂಡಾ ಅಧ್ಯಕ್ಷ ದಮ್ಮೂರು ಶೇಖರ್ ಶಾಸಕ ಭರತ್ ರೆಡ್ಡಿಗೆ ನೇರ ಸವಾಲು ಹಾಕಿದ್ದಾರೆ.
ಅವರು ನಗರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾತನಾಡಿ, ನಿನ್ನೆ ದಿನ ಸರ್ಕಾರಿ ಸಾರ್ವಜನಿಕ ಸಮಾರಂಭದಲ್ಲಿ ನಮ್ಮ ನಾಯಕ, ಜನಾರ್ಧನರೆಡ್ಡಿ ಅವರ ಬಗ್ಗೆ ಟೀಕಿಸಿದ್ದು ಖಂಡನೀಯವಾದುದು. ಜಿಲ್ಲೆಯ ಪ್ರಮುಖ ರಾಜಕಾರಣಿಗಳಾದ ಎಂ.ವೈ ಘೋರ್ಪಡೆ, ಎಂ.ಪಿ ಪ್ರಕಾಶ್, ಅಲ್ಲಂ ವೀರಭದ್ರಪ್ಪ, ಕೆ.ಸಿ ಕೊಂಡಯ್ಯ ಇವರುಗಳ ಸಾಲಿನಲ್ಲಿರುವ ಜನಾರ್ಧನರೆಡ್ಡಿ ಬಗ್ಗೆ ನೀನು ಮಾತನಾಡುವಾಗ ಜಾಗೃತರಾಗಿರಬೇಕು ಎಂದು ಶಾಸಕ ರೆಡ್ಡಿ ವಿರುದ್ಧ ಕಿಡಿ ಕಾರಿದರು.
ನಿಮ್ಮ ಗ್ರಾನೈಟ್ ವ್ಯವಹಾರದ ಪಾಲುದಾರ ದೇವರೆಡ್ಡಿ ಅವರ ಸಾವಿನ ಬಗ್ಗೆ ತನಿಖೆ ಆಗಬೇಕು. ಅವರ ಕುಟುಂಬದ ಸದಸ್ಯರು ಗಾಂಧಿನಗರ ಠಾಣೆಯಲ್ಲಿ ದೂರು ನೀಡಿದರೆ ಅದಕ್ಕೆ ನಿಮ್ಮರಾಜಕೀಯ ಪ್ರಭಾವ ಬಳಿಸಿ ಬಿ.ರಿಪೋರ್ಟ್ ಹಾಕಿಸಿದ್ದೀರಿ. ನಿಮ್ಮ ಅಕ್ರಮಗಳಿಗೆ ಬೆಂಬಲವಾಗಿ ಗಾಂಧಿನಗರ ಠಾಣೆಯ ಸಿಪಿಐ ನಿಲ್ಲುತ್ತಿದ್ದಾರೆ ಎನ್ನುವ ಕಾರಣದಿಂದ ಅವರನ್ನು ನೀವು ವರ್ಗಾವಣೆ ಮಾಡಿಸಿಲ್ಲ ಎಂದು ಆರೋಪಿಸಿದರು. ದೇವರೆಡ್ಡಿ ಅವರ ಕುಟುಂಬದ ಹೋರಾಟಕ್ಕೆ ನಮ್ಮಪಕ್ಷ ಬೆಂಬಲ ನೀಡಲಿದೆ ಎಂದು ಇದೇ ಸಂದರ್ಭದ್ಲಲಿ ಹೇಳಿದರು. ಕೊರ್ಲಗುಂದಿ ಜಿಪಂ ಸದಸ್ಯರಾಗಿ ಎಷ್ಟು ಬಾರಿ ಕ್ಷೇತ್ರಕ್ಕೆ ಹೋಗಿದ್ದಿರಿ? ಅತ್ತ ತಿರುಗಿಯೂ ನೋಡದ ನೀವು ಅಲ್ಲಿ ಏನೂ ಅಭಿವೃದ್ದಿ ಮಾಡಿದ್ದಿರಿ ಎಂಬುದು ಜನರಿಗೆ ಗೊತ್ತಿದೆ , ಬಳ್ಳಾರಿಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳ ಅದೃಷ್ಟದಿಂದ ಗೆದ್ದಿದ್ದೀರಿ, ಪ್ರತಿ ವಿದಾನಸಭೆಗೆ ಒಬ್ಬ ಶಾಸಕರಿರುತ್ತಾರೆ ಆದರೆ ಬಳ್ಳಾರಿ ನಗರ ಕ್ಷೇತ್ರಕ್ಕೆ. ಭರತ್ ರೆಡ್ಡಿ, ಅವರ ತಂದೆ ಸೂರ್ಯನಾರಾಯಣ ರೆಡ್ಡಿ, ಸಹೋದರ ಶರತ್ ರೆಡ್ಡಿ , ಚಿಕ್ಕಪ್ಪ ಪ್ರತಾಪ್ ರೆಡ್ಡಿ, ಆಪ್ತ ಚಾನಾಳ್ ಶೇಖರ್ ಸೇರಿದಂತೆ ಈ ಐದು ಜನರ ಮಧ್ಯೆ ಕೆಲಸ ಮಾಡುವುದು ಸಾಕಾಗಿದೆಂದು ಅಧಿಕಾರಿಗಳು ಅಲವತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕೆಆರ್ ಪಿ ಪಕ್ಷದ ಕಾರ್ಯಕರ್ತರಿಗೆ ನಾವು ಧಮಕಿ ಹಾಕಿಲ್ಲ ಎನ್ನುವ ಶಾಸಕರು, ಪಾಲಿಕೆ ಸಾಮಾನ್ಯ ಸಭೆಯಲ್ಲಿಯೇ ಪ್ರತಿಪಕ್ಷದ ನಾಯಕ ಇಬ್ರಾಹಿಂ ಬಾಬು ಅವರಿಗೆ ಧಮಕಿ ಹಾಕಿದ್ದಾರೆ. ನಮ್ಮ ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ರಾಜಶೇಖರ ಗೌಡ ಅವರ ಮೇಲೆ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕೆ.ಆರ್.ಪಿ ಪಕ್ಷದ ಮುಖಂಡ ಮೆಹಫೂಜ್ ಅಲಿಖಾನ್, ನಗರ ಅಧ್ಯಕ್ಷ ಸುನೀಲ್, ಮುಖಂಡರಾದ ಮಾಜಿ ಮೇಯರ್ ಜಿ.ವೆಂಕಟರಮಣ, ಹಂಪಿ ರಮಣ, ಭೀಮಲಿಂಗ, ಧರಪ್ಪ ನಾಯ್ಕ, ಸಂಜಯ್ ಬೆಟಗೇರಿ. ಕೊಳಗಲ್ಲು ಅಂಜಿನಿ ಮೊದಲಾದವರು ಇದ್ದರು,

1ನೇ ಸುದ್ದಿ ಸಾರ್,

ಭರತ್ ರೆಡ್ಡಿ ನನ್ನ ವಿರುದ್ಧ ಪಕ್ಷೇತರರಾಗಿ ನಿಂತು ಗೆಲ್ಲಲಿ
ಅವರ ಮನೆ ಗೇಟ್ ಕಾಯುವೆ : ದಮ್ಮೂರು ಶೇಖರ್ ಸವಾಲ್

ಬಳ್ಳಾರಿ ಆ,31,
ನಗರ ಶಾಸಕ ಭರತ್ ರೆಡ್ಡಿಯವರು ಕಾಂಗ್ರೆಸ್ ಗ್ಯಾರೆಂಟಿಗಳಿಂದ ಗೆದ್ದು ಬಂದಿದ್ದಾರೆಯೇ ಹೊರತು ಸ್ವಂತ ಬಲದಿಂದ ಗೆದ್ದಿಲ್ಲ ಅವರಿಗೆ ತಾಕತ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ವಿರುದ್ದ ನೀವು ಸ್ವತಂತ್ರವಾಗಿ ನಿಂತು ಗೆದ್ದು ತೋರಿಸಿ. ನಾನು ಸೋತರೆ ನಿಮ್ಮ ಮನೆ ಮುಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವೆ. ನೀವು ಸೋತರೆ ಏನು ಮಾಡ್ತೀರಿ? ಹೇಳಿ ಎಂದು ಶಾಸಕ ಭರತ್ ರೆಡ್ಡಿ ಅವರಿಗೆ ಕೆ.ಆರ್.ಪಿ.ಪಕ್ಷದ ಮುಖಂಡ, ಮಾಜಿ ಬೂಡಾ ಅಧ್ಯಕ್ಷ ದಮ್ಮೂರು ಶೇಖರ್ ಶಾಸಕ ಭರತ್ ರೆಡ್ಡಿಗೆ ನೇರ ಸವಾಲು ಹಾಕಿದ್ದಾರೆ.
ಅವರು ನಗರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾತನಾಡಿ, ನಿನ್ನೆ ದಿನ ಸರ್ಕಾರಿ ಸಾರ್ವಜನಿಕ ಸಮಾರಂಭದಲ್ಲಿ ನಮ್ಮ ನಾಯಕ, ಜನಾರ್ಧನರೆಡ್ಡಿ ಅವರ ಬಗ್ಗೆ ಟೀಕಿಸಿದ್ದು ಖಂಡನೀಯವಾದುದು. ಜಿಲ್ಲೆಯ ಪ್ರಮುಖ ರಾಜಕಾರಣಿಗಳಾದ ಎಂ.ವೈ ಘೋರ್ಪಡೆ, ಎಂ.ಪಿ ಪ್ರಕಾಶ್, ಅಲ್ಲಂ ವೀರಭದ್ರಪ್ಪ, ಕೆ.ಸಿ ಕೊಂಡಯ್ಯ ಇವರುಗಳ ಸಾಲಿನಲ್ಲಿರುವ ಜನಾರ್ಧನರೆಡ್ಡಿ ಬಗ್ಗೆ ನೀನು ಮಾತನಾಡುವಾಗ ಜಾಗೃತರಾಗಿರಬೇಕು ಎಂದು ಶಾಸಕ ರೆಡ್ಡಿ ವಿರುದ್ಧ ಕಿಡಿ ಕಾರಿದರು.
ನಿಮ್ಮ ಗ್ರಾನೈಟ್ ವ್ಯವಹಾರದ ಪಾಲುದಾರ ದೇವರೆಡ್ಡಿ ಅವರ ಸಾವಿನ ಬಗ್ಗೆ ತನಿಖೆ ಆಗಬೇಕು. ಅವರ ಕುಟುಂಬದ ಸದಸ್ಯರು ಗಾಂಧಿನಗರ ಠಾಣೆಯಲ್ಲಿ ದೂರು ನೀಡಿದರೆ ಅದಕ್ಕೆ ನಿಮ್ಮರಾಜಕೀಯ ಪ್ರಭಾವ ಬಳಿಸಿ ಬಿ.ರಿಪೋರ್ಟ್ ಹಾಕಿಸಿದ್ದೀರಿ. ನಿಮ್ಮ ಅಕ್ರಮಗಳಿಗೆ ಬೆಂಬಲವಾಗಿ ಗಾಂಧಿನಗರ ಠಾಣೆಯ ಸಿಪಿಐ ನಿಲ್ಲುತ್ತಿದ್ದಾರೆ ಎನ್ನುವ ಕಾರಣದಿಂದ ಅವರನ್ನು ನೀವು ವರ್ಗಾವಣೆ ಮಾಡಿಸಿಲ್ಲ ಎಂದು ಆರೋಪಿಸಿದರು. ದೇವರೆಡ್ಡಿ ಅವರ ಕುಟುಂಬದ ಹೋರಾಟಕ್ಕೆ ನಮ್ಮಪಕ್ಷ ಬೆಂಬಲ ನೀಡಲಿದೆ ಎಂದು ಇದೇ ಸಂದರ್ಭದ್ಲಲಿ ಹೇಳಿದರು. ಕೊರ್ಲಗುಂದಿ ಜಿಪಂ ಸದಸ್ಯರಾಗಿ ಎಷ್ಟು ಬಾರಿ ಕ್ಷೇತ್ರಕ್ಕೆ ಹೋಗಿದ್ದಿರಿ? ಅತ್ತ ತಿರುಗಿಯೂ ನೋಡದ ನೀವು ಅಲ್ಲಿ ಏನೂ ಅಭಿವೃದ್ದಿ ಮಾಡಿದ್ದಿರಿ ಎಂಬುದು ಜನರಿಗೆ ಗೊತ್ತಿದೆ , ಬಳ್ಳಾರಿಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳ ಅದೃಷ್ಟದಿಂದ ಗೆದ್ದಿದ್ದೀರಿ, ಪ್ರತಿ ವಿದಾನಸಭೆಗೆ ಒಬ್ಬ ಶಾಸಕರಿರುತ್ತಾರೆ ಆದರೆ ಬಳ್ಳಾರಿ ನಗರ ಕ್ಷೇತ್ರಕ್ಕೆ. ಭರತ್ ರೆಡ್ಡಿ, ಅವರ ತಂದೆ ಸೂರ್ಯನಾರಾಯಣ ರೆಡ್ಡಿ, ಸಹೋದರ ಶರತ್ ರೆಡ್ಡಿ , ಚಿಕ್ಕಪ್ಪ ಪ್ರತಾಪ್ ರೆಡ್ಡಿ, ಆಪ್ತ ಚಾನಾಳ್ ಶೇಖರ್ ಸೇರಿದಂತೆ ಈ ಐದು ಜನರ ಮಧ್ಯೆ ಕೆಲಸ ಮಾಡುವುದು ಸಾಕಾಗಿದೆಂದು ಅಧಿಕಾರಿಗಳು ಅಲವತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕೆಆರ್ ಪಿ ಪಕ್ಷದ ಕಾರ್ಯಕರ್ತರಿಗೆ ನಾವು ಧಮಕಿ ಹಾಕಿಲ್ಲ ಎನ್ನುವ ಶಾಸಕರು, ಪಾಲಿಕೆ ಸಾಮಾನ್ಯ ಸಭೆಯಲ್ಲಿಯೇ ಪ್ರತಿಪಕ್ಷದ ನಾಯಕ ಇಬ್ರಾಹಿಂ ಬಾಬು ಅವರಿಗೆ ಧಮಕಿ ಹಾಕಿದ್ದಾರೆ. ನಮ್ಮ ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ರಾಜಶೇಖರ ಗೌಡ ಅವರ ಮೇಲೆ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕೆ.ಆರ್.ಪಿ ಪಕ್ಷದ ಮುಖಂಡ ಮೆಹಫೂಜ್ ಅಲಿಖಾನ್, ನಗರ ಅಧ್ಯಕ್ಷ ಸುನೀಲ್, ಮುಖಂಡರಾದ ಮಾಜಿ ಮೇಯರ್ ಜಿ.ವೆಂಕಟರಮಣ, ಹಂಪಿ ರಮಣ, ಭೀಮಲಿಂಗ, ಧರಪ್ಪ ನಾಯ್ಕ, ಸಂಜಯ್ ಬೆಟಗೇರಿ. ಕೊಳಗಲ್ಲು ಅಂಜಿನಿ ಮೊದಲಾದವರು ಇದ್ದರು,

1ನೇ ಸುದ್ದಿ ಸಾರ್,

Leave a Reply

Your email address will not be published. Required fields are marked *