“ಸಣ್ಣ ರೈತರಿಗೆ ಮತ್ತು ಬಡ ವರ್ಗದವರಿಗೆ ನಮ್ಮ ಸೊಸೈಟಿ ಸಹಕಾರಿಯಾಗಿದೆ -ಹೆಚ್ ಎಲ್ ಮಂಜಪ್ಪ”

(ವರದಿಗಾರರು ವೈ ಜಿ ನರಸಿಂಹ ಮೂರ್ತಿ ಬಯಲು ಸಿಂಹ ಪೀಣ್ಯ ದಾಸರಹಳ್ಳಿ)

ಪೀಣ್ಯ ದಾಸರಹಳ್ಳಿ: ಸದ್ಯದಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ ನಮ್ಮ ಶಾಖೆಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮತ್ತು ಸಣ್ಣ ರೈತರಿಗೆ ಬಡ ವರ್ಗದವರಿಗೆ ಕೂಲಿ ಕಾರ್ಮಿಕರಿಗೆ ಮತ್ತು ಮಹಿಳಾ ಸ್ವಯಂ ಉದ್ಯೋಗಕ್ಕೆ 12 ವರ್ಷಗಳಿಂದ ಸಹಾಯ ಸಹಕಾರ ನೀಡುತ್ತಿದ್ದೇವೆ ಎಂದು ಜನ ನಿಧಿ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಬೆಂಗಳೂರು ಸಂಸ್ಥಾಪಕ ಅಧ್ಯಕ್ಷ ಹೆಚ್ ಎಲ್ ಮಂಜಪ್ಪ ಹೇಳಿದರು.
ಅವರು 2022-23ನೇ ಲೆಕ್ಕಾ ಪರಿಶೋಧನಾ ಸಭೆ ಮತ್ತು ಜನನಿಧಿ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡಿನ 12ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಗಾಯಿತ್ರಿ ಗ್ರ್ಯಾಂಡ್ ಹೊಟೇಲ್ ಪಾರ್ಟಿ ಹಾಲಿನಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಗೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅವರು ಈಗಾಗಲೇ ದಕ್ಷ್ಮಿಣ ಕರ್ನಾಟಕ ಭಾಗದ ಮೈಸೂರು,ಮದ್ದೂರು, ಕುಣಿಗಲ್,ಗುಬ್ಬಿ,ಪಾವಗಡ, ತುಮಕೂರು, ಮಾಗಡಿ,ಮಂಡ್ಯ, ಮತ್ತು ಬೆಂಗಳೂರು ನಗರ ಹೀಗೆ ಅನೇಕ ಕಡೆ ನಮ್ಮ ಜನನಿಧಿ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಶಾಖೆಗಳು ಉತ್ತಮ ಒಡಂಬಡಿಕೆ ಮತ್ತು ವಿವಿಧ ಸಂಘ ಸಂಸ್ಥೆಗಳ ಒಡನಾಟದಿಂದ ಇನ್ನೂ ಹೆಚ್ಚು ಉತ್ತಮ ಕಾರ್ಯನಿರ್ವಸಿದಾಗ ಉತ್ತರ ಕರ್ನಾಟಕದಲ್ಲಿ ಶಾಖೆಗಳು ಪ್ರಾರಂಭ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಹೆಚ್ ಎಲ್ ಮಂಜಪ್ಪ ಸಭೆ ಉದ್ದೇಶಿಸಿ ಮಾತನಾಡಿದರು.
ಈ ವೇಳೆ ವಿವಿಧ ಶಾಖೆಗಳ ಸಿಬ್ಬಂದಿ ವರ್ಗದವರು ಉತ್ತಮ ಕಾರ್ಯ ನಿರ್ವಹಿದವರಿಗೆ ಪ್ರಶಸ್ತಿ ಮತ್ತು ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು.
ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತಾಪ್ ಚಂದ್ರ ಶೆಟ್ಟಿ ಸರ್ವರಿಗೂ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ದಿನೇಶ್ , ಮಾಜಿ ಉಪಾಧ್ಯಕ್ಷ ನಾಗರಾಜ್ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಸೊಸೈಟಿಯ ಸಿಬ್ಬಂದಿ ವರ್ಗದವರು ಮತ್ತು ಠೇವಣಿದಾರರು,ಸೇರ್ ಹೋಲ್ಡರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *