ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಅಧಿಕೃತ ಬೆವರೇಜ್ ಪಾರ್ಟ್ನರ್ ’ಥಮ್ಸ್ ಅಪ್’ ತನ್ನ ಹೊಸ ಅಭಿಯಾನ “ಥಮ್ಸ್ ಅಪ್ ಉಠಾ, ಇಂಡಿಯಾ ಇಂಡಿಯಾ ಮಚಾ” ಬಿಡುಗಡೆ ಮಾಡಿದೆ.

~ ಕ್ರಿಕೆಟ್ ಐಕಾನ್‌ಗಳಾದ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇದರಲ್ಲಿ ಪಾತ್ರಧಾರಿಗಳು
~ “ನಂಬಿಕೆಯ ಧ್ವನಿ”ಯಾಗಿದ್ದಾರೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್
TVC ಗೆ ಲಿಂಕ್- https://youtu.be/6QYzPiwKdUE

ರಾಷ್ಟ್ರೀಯ, ಸೆಪ್ಟೆಂಬರ್ 05, 2023: ಕೋಕಾ-ಕೋಲಾ ಕಂಪನಿಯ ಐಕಾನಿಕ್ ಸ್ವದೇಶಿ ಪಾನೀಯ ಬ್ರ್ಯಾಂಡ್ ’ಥಮ್ಸ್ ಅಪ್’, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ ಜೊತೆಗಿನ ತನ್ನ ಒಡನಾಟವನ್ನು “ಥಮ್ಸ್ ಅಪ್ ಉಠಾ, ಇಂಡಿಯಾ ಇಂಡಿಯಾ ಮಚಾ” ಅಭಿಯಾನದ ಮೂಲಕ ಮುಂದುವರಿಸುತ್ತಿದೆ. ಈ ಅಭಿಯಾನ, ಮುಂಬರುವ ವಿಶ್ವಕಪ್‌ ಗೆಲ್ಲಲೇಬೇಕೆಂಬ ನಮ್ಮ ಆಟಗಾರರ ಛಲದ ಪ್ರತೀಕವಾಗಿದೆ. ಅಭಿಮಾನಿಗಳಲ್ಲಿ, ಭಾರತ ತನ್ನ ಗೆಲುವಿನ ಓಟವನ್ನು ಮುಂದುವರಿಸುತ್ತದೆ ಎಂಬ ನಂಬಿಕೆಯನ್ನು ಈ ಅಭಿಯಾನ ಮೂಡಿಸುವಂತಿದೆ.

ಈ ರೋಮಾಂಚಕಾರಿ ಅಭಿಯಾನದಲ್ಲಿ ಕ್ರಿಕೆಟ್ ಐಕಾನ್‌ಗಳಾದ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಡೈನಾಮಿಕ್ ಕ್ಯಾಪ್ಟನ್ ರೋಹಿತ್ ಶರ್ಮ ಅವರನ್ನು ಕೇಂದ್ರವಾಗಿರಿರಿಕೊಂಡ ಚಲನಚಿತ್ರವೊಂದಿದೆ. ‘ಟೀಮ್ ಇಂಡಿಯಾ’ ಬಗ್ಗೆ ಇಡೀ ಭಾರತವೇ ನಂಬಿಕೆ ಇಡುವಂತೆ ಮಾಡುವುದೇ ಈ ಚಲನಚಿತ್ರದ ಮುಖ್ಯ ಉದ್ದೇಶ. ಈ ಅಭಿಯಾನದ ಮುಖ್ಯ ವೈಶಿಷ್ಟ್ಯ,ಅದರ ಕಥಾ ನಿರೂಪಣೆ. ಬಾಲಿವುಡ್‌ನ ಬಾದಷಾಹ ಶಾರುಖ್ ಖಾನ್ ‘ನಂಬಿಕೆಯ ಧ್ವನಿ’ಯಾಗಿ ನಿರೂಪಣೆಗೆ ಜೀವ ತುಂಬಿದ್ದಾರೆ.

ಈ ನಿರೂಪಣೆಯು ‘ಭಾರತ ಗೆಲ್ಲುತ್ತದೆ!’ ಎಂಬ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಭಾವನೆಗಳಿಗೆ ಒತ್ತಾಸೆಯನ್ನು ನೀಡುತ್ತದೆ. ಭಾರತೀಯರ ಹೃದಯಗಳು ’ಭಾರತ ಗೆಲ್ಲುತ್ತದೆ’ ಎಂದು ಹೇಳಿದರೂ ಮನಸ್ಸು ಒಳಗೊಳಗೇ, ‘ಭಾರತ ಗೆಲ್ಲುತ್ತದೆಯೇ?’ ಎಂಬ ಭಾವನೆಗಳಿಂದ ಹೊಯ್ದಾಡುತ್ತಿರುತ್ತದೆ. ಈ ಹೃದಯ-ಮನಸ್ಸುಗಳ ಸಂಘರ್ಷವನ್ನು ಥಮ್ಸ್ ಅಪ್‌ನ ಸಾಂಪ್ರದಾಯಿಕ ಸ್ಪ್ಲಿಟ್ ಕ್ಯಾನ್, ಅದ್ಭುತವಾಗಿ ಮತ್ತು ಥಟ್ಟನೆ ಕಾಣುವಂತೆ ಚಿತ್ರಿಸುತ್ತದೆ.

ಐಸಿಸಿ ವಿಶ್ವಕಪ್ ಅಭಿಯಾನದ ಮುಂದಿನ ಅಧ್ಯಾಯದ ಕುರಿತು ಅರ್ಣಾಬ್ ರಾಯ್, ವೈಸ್ ಪ್ರೆಸಿಡೆಂಟ್, ಮಾರ್ಕೆಟಿಂಗ್, ಕೋಕಾ-ಕೋಲಾ ಇಂಡಿಯಾ ಮತ್ತು ಸೌತ್ ವೆಸ್ಟ್ ಏಷ್ಯಾ ಹೀಗೆ ಅಭಿಪ್ರಾಯಪಟ್ಟಿದ್ದಾರೆ: “ಅಭಿಮಾನಿಗಳಿಗೆ ಬಲ ತುಂಬುವ ಮತ್ತು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಏಕೈಕ ಉದ್ದೇಶದಿಂದ ಥಮ್ಸ್ ಅಪ್, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ ಜೊತೆ ಕೈಜೋಡಿಸುತ್ತಿದೆ. ನಮಗೆ ಕಿಂಗ್ ಖಾನ್ ಮತ್ತು ದೇಶದ ಕ್ರಿಕೆಟ್ ಐಕಾನ್‌ಗಳೊಂದಿಗೆ ಉತ್ತಮ ಸಹಯೋಗವಿದೆ. ಇದು, ಅಭಿಮಾನಿಗಳು ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತೆ ಮಾಡುತ್ತದೆ ಮತ್ತು ಟೀಮ್ ಇಂಡಿಯಾ ವಿಶ್ವಕಪ್ ಅನ್ನು ಮರಳಿ ಭಾರತಕ್ಕೆ ತರುತ್ತದೆ ಎಂಬ ನಮ್ಮ ಅಚಲ ವಿಶ್ವಾಸವನ್ನು ಪ್ರದರ್ಶಿಸುತ್ತದೆ. ನಾವಿದನ್ನು ತಂತ್ರಜ್ಞಾನದ ನೆರವಿನಿಂದ, ಪರಿಣತ ಪ್ಯಾನೆಲ್‌ಗಳ ಮತ್ತು ವಿಶ್ವಸನೀಯ ಪ್ರಭಾವಶಾಲಿಗಳ ರಿಯಲ್ ಟೈಮ್ ಪ್ರತಿಕ್ರಿಯೆಗಳ ಮೂಲಕ ಸಾಧಿಸುತ್ತೇವೆ. ಪ್ರತಿಯೊಬ್ಬರೂ ನಮ್ಮ ತಂಡವನ್ನು ಪ್ರೋತ್ಸಾಹಿಸುವಂತೆ ಮಾಡಬೇಕೆನ್ನುವುದೇ ನಮ್ಮ ಉದ್ದೇಶ.

ಒಗಿಲ್ವಿ ಇಂಡಿಯಾದ ಚೀಫ್ ಕ್ರಿಯೆಟಿವ್ ಆಫೀಸರ್ ಸುಕೇಶ್ ನಾಯಕ್ ಪ್ರಕಾರ: “ಸಾಮಾನ್ಯವಾಗಿ ಪ್ರತಿರೋಧ, ಹೊರಗಿನಿಂದ ಬರುವುದಿಲ್ಲ. ನಮ್ಮಲ್ಲಿರುವ ಸಂದೇಹಗಳೇ ನಮಗೆ ಅತಿ ದೊಡ್ಡ ಶತ್ರು. ನಾವು ಅಂತರಂಗದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಬೇಕು. ‘ಭಾರತ ಈ ವಿಶ್ವಕಪ್ ಗೆಲ್ಲುತ್ತದೆಯೇ?’ ಎಂಬುದಕ್ಕೆ ಥಮ್ಸ್ ಅಪ್, ಎಸ್ ಆರ್ ಕೆ ಧ್ವನಿಯಲ್ಲಿ ಗಟ್ಟಿಯಾಗಿ ಉತ್ತರಿಸಿದೆ.

ಐಸಿಸಿ ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ, ಆಟಗಾರರಿಗೆ ಸ್ಫೂರ್ತಿಯನ್ನು ನೀಡುತ್ತ ಅಭಿಮಾನಿಗಳಿಗೆ ಮರೆಯಲಾಗದ ಕ್ಷಣಗಳನ್ನು ಸೃಷ್ಟಿಸಲು ಥಮ್ಸ್ ಅಪ್‌ ಬದ್ಧವಾಗಿದೆ. ಅಸಲಿ ’ತೂಫಾನಿ ವಿಶ್ವಕಪ್’ ಗೆ ವೇದಿಕೆಯನ್ನು ಸಿದ್ಧಪಡಿಸುತ್ತಿದೆ.

ನಮ್ಮ ಬ್ರ್ಯಾಂಡ್, ಸಮಗ್ರವಾದ ಕಾರ್ಯವಿಧಾನದ ಮೂಲಕ ಐಸಿಸಿ ವಿಶ್ವಕಪ್ 2023 ರ ಸಮಯದಲ್ಲಿ ಅಭಿಮಾನಿಗಳಿಗಾಗಿ ಪ್ರತಿಯೊಂದು ಸ್ವಾರಸ್ಯಕರವಾದ ಮಾತು ಮತ್ತು ಅವಿಸ್ಮರಣೀಯ ಕ್ಷಣಗಳನ್ನು ಹಿಡಿದಿಡಲಿದೆ.

Leave a Reply

Your email address will not be published. Required fields are marked *