“ಬಡವ ಮತ್ತು ಧನಿಕರ ಕೈಗೆಟಕುವ ದರದಲ್ಲಿ ನಿವೇಶನಗಳ ಮಾರಾಟಕ್ಕೆ ಚಾಲನೆ ನೀಡಿದ ಶ್ರೀನಿವಾಸ ಅಮ್ಮಾಪುರ್”
(ನರಸಿಂಹಮೂರ್ತಿ ವೈ ಜಿ ವರದಿಗಾರರು ಬಯಲು ಸಿಂಹ ಪೀಣ್ಯ ದಾಸರಹಳ್ಳಿ)
ಪೀಣ್ಯ ದಾಸರಹಳ್ಳಿ: ಸಮೀಪದ ನೆಲಮಂಗಲ ನಗರಕ್ಕೆ ಕೂಗಳತೆ ದೂರದಲ್ಲಿರುವ ಸೊಂಡೆಕೊಪ್ಪ ಮುಖ್ಯರಸ್ತೆಯ ಬಳೆ ವೀರನ ಹಳ್ಳಿಯಲ್ಲಿ ಅಮ್ಮಾಪುರ್ ಮಿಲೇನಿಯಂ ವತಿಯಿಂದ ಉದ್ಯಮಿ ಶ್ರೀನಿವಾಸ್ ಅಮ್ಮಾಪುರ್, ಹೆರೋಹಳ್ಳಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಬಿಲ್ಡರ್ಸ್ ವಿ.ನಾಗರಾಜ್, ಪಂಚಾಯಿತಿಯ ಅಧ್ಯಕ್ಷ ಸುಭಾಷ್, ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ. ಆನಂದ್, ಬೆಂಬಲದೊಂದಿಗೆ ಬಳೆವೀರನಹಳ್ಳಿಯಲ್ಲಿ ವಿಂಗಡಣೆ ಮಾಡಿರುವ ಕಾಲಿ ನಿವೇಶನಗಳಿಗೆ ಪೂಜೆ ಪುನಸ್ಕಾರ ಸಲ್ಲಿಸಿ ಮಾರಾಟಕ್ಕೆ ಉದ್ಯಮಿ ಶ್ರೀನಿವಾಸ್ ಅಮ್ಮಾಪುರ್ ಚಾಲನೆ ನೀಡಿ ಮಾತನಾಡಿ ನಾವು ನಿರ್ಮಾಣ ಮಾಡಿರುವ ಕಾಲಿ ನಿವೇಶನಗಳು ಸುತ್ತಮುತ್ತಲ ಪ್ರದೇಶಗಳ ಬಡ ಮತ್ತು ಧನಿಕರ ಕೈಗೆಟಕುವ ದರದಲ್ಲಿ ಮತ್ತು ಬಡವರು ಕೂಲಿ ನಾಲಿ ಮಾಡಿ ಕೂಡಿಟ್ಟ ಹಣದಲ್ಲಿ ಎಲ್ಲರಂತೆ ಅವರು ಸಹ ಅವರ ಆಸೆಯಂತೆ ಅವರು ಒಂದು ಸುಂದರ ಮನೆಯನ್ನು ನಿರ್ಮಿಸಿಕೊಂಡು ಅವರು ಮತ್ತು ಅವರ ಮಕ್ಕಳು ನೆಮ್ಮದಿಯಿಂದ ಬಾಳಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಈ ನಿವೇಶನಗಳನ್ನು ವಿಂಗಡನೆ ಮಾಡಿದ್ದೇವೆ ಆದ್ದರಿಂದ ಬಡ ಮತ್ತು ಧನಿಕರು ಇಲ್ಲಿ ವಿಂಗಡಣೆಯಾಗಿರುವ ನಿವೇಶನಗಳನ್ನು ಖರೀದಿಸಿ ನೆಮ್ಮದಿಯ ಜೀವನ ಸಾಗಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅಮ್ಮಾಪುರ್ ,ವಿನಯ್,ಉದಯ್,ಅಮರ್, ಗೋವಿಂದ್ ರಾಜ್,ಗುಂಡು, ವಿನೋದ್, ಮುಂತಾದವರು ಇದ್ದರು.