ಆಧುನಿಕ ವಚನ
ಕಳೆದು ಹೋಗಬೇಕು ಪ್ರೀತಿಯಲ್ಲಿ ದ್ವೇಷದಲ್ಲಲ್ಲ.
ಉಳಿದು ಬದುಕಬೇಕು ನಂಬಿಕೆಯಲ್ಲಿ, ನಂಬಿಕೆ ದ್ರೋಹದಲ್ಲಲ್ಲ .
ಬಾಳಿ ಬದುಕಬೇಕು ಭರವಸೆಯಲ್ಲಿ, ಭ್ರಮಲೋಕದಲ್ಲಲ್ಲ. ಕೂಡಿ ಬಾಳಬೇಕು ಕುಸಲೋಪರಿಯಲ್ಲಿ, ಕಲ್ಮಸದಿಂದಲ್ಲ.
ಕಾಡದೇ, ಬೇಡದೇ ಬದುಕುವವನು
ನಿಜ ಶರಣ ಎಂದ ನಮ್ಮ ಬಸವಪ್ರೀಯ ಪಾಲಾಮೂರೇಶ್ವರ.
- ಎಂP