ಬಳ್ಳಾರಿ ಸೆ.26
ಸ್ಥಳೀಯ ಬಿ.ಡಿ.ಡಿ.ಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ದಲಿತ ಸೇನೆ ಘರ್ಜನೆಯಿಂದ ಭಾರತ ಸಂವಿಧಾನದ ಮುಂದಿನ ಸಾವಲುಗಳು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಬೆಂಗಳೂರಿನ ದಲಿತ ಹೋರಾಟಗಾರ ಹಾಗೂ ಚಿಂತಕರಾದ ಬಿ.ಅರ್. ಭಾಸ್ಕರ್ ಪ್ರಸಾದ್ ಹಾಗೂ ಚಿಂತಕರು ಹಾಗೂ ಖ್ಯಾತ ವಕೀಲರಾದ ಹರಿರಾಮ್ ಅವರು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಹನುಮಂತ ಜೀ ಯಳಸಂಗಿ ವಹಿಸಿದ್ದರು. ಅತಿಥಿಗಳಾಗಿ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿಡಾ ಶ್ರೀನಿವಾಸ ಕೋಲಾರ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ಬೆಂಗಳೂರು, ಕೋಲಾರ, ವಿಜಾಪುರ, ಬಾಗಲಕೋಟೆ, ರಾಯಚೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲಾಧ್ಯಕ್ಷರುಗಳು ಆಗಮಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿಜಯನಗರ ಜಿಲ್ಲೆಯ ಶಿವಶಂಕರ್ ನೆರವೇರಿಸಿದರು. ಕೊನೆಯಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಕಟ್ಟೆ ಸ್ವಾಮಿ ವಂದಿಸಿದರು.
ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ದಲಿತ ಸೇನೆಯ ಬಳ್ಳಾರಿ ಜಿಲ್ಲಾಅಧ್ಯಕ್ಷರಾಗಿ ದಲಿತ ಯುವನಾಯಕ ಕಟ್ಟೇಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರದಾನ ಕಾರ್ಯದರ್ಶಿಯಾಗಿ ರತ್ನಯ್ಯ , ಉಪಾಧ್ಯಕ್ಷರಾಗಿ ರಾಜು ಕುರುವಳ್ಳಿ. ಮಾನಪ್ಪ ಕೊಳಗಲ್ಲು, ಕುಮಾರಸ್ವಾಮಿ ಸಂಡೂರು, ಜಿಲ್ಲಾ ಯುವ ಅಧ್ಯಕ್ಷರಾಗಿ ಕುಮಾರ್., ಕಾನೂನು ಸಲಹೆಗಾರರಾಗಿ ಪ್ರಹ್ಲಾದ್. ಬಳ್ಳಾರಿ ನಗರ ಅಧ್ಯಕ್ಷರಾಗಿ ತಾಯಣ್ಣ. ನಗರ ಯುವ ಅಧ್ಯಕ್ಷರಾಗಿ ಮುಂಡ್ರಿಗಿ ಸಿದ್ದೇಶ್. ಶಿವು. ಸಂಘಟನಾ ಕಾರ್ಯದರ್ಶಿಯಾಗಿ ಮುರಳಿಕೃಷ್ಣ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಮೇಘನಾಥ. ಶ್ರೀರಾಮ. ಮತ್ತು ವಿವಿಧ ತಾಲುಕು ಅಧ್ಯಕ್ಷರು ಸೇರಿದಂತೆ ಇನ್ನೂ ಅನೇಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಡೂರು ತಾಲೂಕು ಅಧ್ಯಕ್ಷರಾಗಿ ರಾಜೇಶ್ ಹೆಗಡೆ. ಆಯ್ಕೆಯಾದರು.

Leave a Reply

Your email address will not be published. Required fields are marked *