ದೇವನಹಳ್ಳಿ: ಇಂದಿನ ವ್ಯಾಪಾರ ವಹಿವಾಟುಗಳಲ್ಲಿ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಉತ್ಪನ್ನಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಪೂರೈಕೆ ಮಾಡುವ ಅನಿವಾರ್ಯತೆಯ ನಡುವೆ ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಹೊಸತನದ ಮೂಲಕ ಅವರುಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡುವ ಯಾವುದೇ ವ್ಯವಹಾರ ಯಶಸ್ವಿಯಾಗಿ ನಡೆಯುತ್ತದೆ ಎಂದು, ಆಹಾರ ಮತ್ತು ನಾಗರೀಕ ಸರಬರಾಜು ಹಾಗು ಗ್ರಾಹಕ ವ್ಯವಹಾರಗಳ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರವಿರುವ ದೇವನಹಳ್ಳಿಯ ಅಕ್ಕುಪೇಟೆಯ ಕೋಟೆ ಸರ್ಕಲ್ ಬಳಿ ಆರ್ ಆರ್ ಪೆಟ್ರೋಲ್ ಕೆಮಿಕಲ್ಸ್ ಲಿಮಿಟೆಡ್ ವತಿಯಿಂದ ಸೋಮವಾರ ಉದ್ಘಾಟನೆಯಾಗಿದ್ದ ಫ್ರೀ ಮಾಕ್ಸ್ (Premax)ಇಂಜಿನ್ ಆಯಿಲ್ ಶಾಖೆಗೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.
ಫ್ರೀ ಮಾಕ್ಸ್ (Premax)ಇಂಜಿನ್ ಆಯಿಲ್ ಶಾಖೆಯ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಹೆಡ್ ನರಸಿಂಮೂರ್ತಿ ಮಾತನಾಡಿ ರಾಜ್ಯದ ಜನತೆಗೆ ಅತ್ಯಂತ ಒಳ್ಳೆಯ ಗುಣಮಟ್ಟದ ಇಂಜಿನ್ ಆಯಿಲ್ ನೀಡುವ ಉದ್ದೇಶದೊಂದಿಗೆ ಗ್ರಾಹಕರಿಗೆ ಅನುಕೂಲವಾಗುವಂತೆ ಕೈಗೇಟಗುವ ಬೆಲೆಯಲ್ಲಿ ಕಾರು ಮತ್ತು ಬೈಕ್ ಗಳಿಗೆ ಇಂಜಿನ್ ಆಯಿಲ್ ಶಾಖೆ ಪ್ರಥಮ ಬಾರಿಗೆ ಕರ್ನಾಟಕದ ದೇವನಹಳ್ಳಿಯಲ್ಲಿ ಪ್ರಾರಂಭವಾಗಿದೆ ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
ಶಾಖೆಯ ಮ್ಯಾನೇಜರ್ ಶ್ರೀನಿವಾಸ್ ಮಾತನಾಡಿ ನಾವು ಈಗಾಗಲೇ 15 ರಿಂದ 20 ಜಿಲ್ಲೆಗಳಲ್ಲಿ ಮೆಕಾನಿಕ್ ಗಳ ಹತ್ತಿರ ಇಂಜಿನ್ ಆಯಿಲ್ ಗುಣಮಟ್ಟದ ಕುರಿತು ಪರೀಕ್ಷೆ ನಡೆಸಿ ಅದರ ಪ್ರತಿಫಲವೇ ದೇಶದ ನಾಲ್ಕು ರಾಜ್ಯಗಳಲ್ಲಿ ನಮ್ಮ ಇಂಜಿನ್ ಆಯಿಲ್ ಶಾಖೆ ಚಾಲ್ತಿಯಲ್ಲಿದೆ ಈಗ ಪ್ರಾರಂಭವಾಗಿರುವ ಕರ್ನಾಟಕದ ದೇವನಹಳ್ಳಿ ಶಾಖೆಯ ಇಂಜಿನ್ ಆಯಿಲ್ ಖರೀದಿಸಿ ಬಳಕೆ ಮಾಡುವುದರ ಮೂಲಕ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫ್ರೀ ಮ್ಯಾಕ್ಸ ಕಂಪನಿಯ ಎಂ .ಡಿ ಮನೋಹರ್, ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ್, ಶಾಖಾ ಕಾರ್ಯ ನಿರ್ವಹಕರಾದ ರೆಡ್ಡಪ್ಪ, ತೆಲಂಗಾಣ ಶಾಖಾ ವ್ಯವಸ್ಥಾಪಕರಾದ ಬೋಯಾ ಹಾಜಿಬಾಬು, ಡಿಐಸಿಸಿಐ ಅಧ್ಯಕ್ಷ ಕೋಲಾರ ನಾರಾಯಣಸ್ವಾಮಿ ಮುಂತಾದವರು ಇದ್ದರು.


