ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಮನವಿ
ಕೂಡಲೇ ಸರ್ಕಾರ ಅರೆಕಾಲಿಕ ಉಪನ್ಯಾಸಕರನ್ನು ಖಾಯಂ ಗೊಳಿಸಬೇಕೆಂದು ಒತ್ತಾಯ
ಚಿಂತಾಮಣಿ: ರಾಜ್ಯ ಸರ್ಕಾರದ 105 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಹಲವಾರು ವರ್ಷಗಳಿಂದ ಸುಮಾರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷಾಂತರ ಬಡ ಕುಟುಂಬದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಒಂದು ವರ್ಷದ ವೇತನ ನೀಡಿ ಕಾಯಂ ಗೊಳಿಸಲು ಒತ್ತಾಯಿಸಿ ಇಂದು ಅಖಿಲ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಅಧಿಕಾರಿ ಉಪನ್ಯಾಸಕರ ಸಂಘದ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಅರೆಕಾಲಿಕ ಉಪನ್ಯಾಸಕರು ಇಂದಿನಿಂದ ಅನಿರ್ದಿಷ್ಟ ವಧಿವರೆಗೂ ಯಾವುದೇ ತರಗತಿ ಗಳು ನಡೆಸದಂತೆ ನಿರ್ಣಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ಅರೆಕಾಲಿಕ ಉಪನ್ಯಾಸಕರು ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಳಿ ವಿವಿಧ ಬೇರಿಕೆಗಳನ್ನು ಈಡೇರಿಸಲು ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ವೇಳೆ ಅರೆಕಾಲಿಕ ಉಪನ್ಯಾಸಕರಾದ ಬೈರೆಡ್ಡಿ, ಇಮ್ರಾನ್,ರವರು ಮಾತನಾಡಿ ನಮ್ಮನ್ನು ಕರ್ನಾಟಕ ನಾಗರೀಕ ಸೇವಾ ಅಧಿನಿಯಮ (KCSR)-1977 ರ 14(1) ಮತ್ತು (3) ರ ಅನ್ವಯ ಸೇವಾ ವಿಲೀನಾ ವ್ಯಾಪ್ತಿಗೆ ಒಳಪಡಿಸಬೇಕು ಎಂದ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಆದೀನದಲ್ಲಿರುವ ವಸತಿ ಶಿಕ್ಷಣ ಸಂಸ್ಥೆಗಳ ಮತ್ತು ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆ ಕಾಲಿಕ ಉಪನ್ಯಾಸಕರ ವೇತನ ಪರಿಷ್ಕರಣಿ ಮಾಡದೆ, ಆದರೆ ತಾಂತ್ರಿಕ ಶಿಕ್ಷಣ ಇಲಾಖೆಯ ಆದೀ ನದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ವೇತನದಲ್ಲಿ ಯಾವುದೇ ಬದಲಾವಣೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಮಾಡಿದಂತೆ ನಮಗೂ ಕೂಡ ವಾರದ ಆರು ದಿನಗಳ ಕೆಲಸ ಕೊಟ್ಟು ಅದಕ್ಕೆ ತಕ್ಕಂತೆ ವೇತನವನ್ನು ಹೆಚ್ಚಿಸಿ ಒಂದು ವರ್ಷ ವೇತನ ನೀಡಬೇಕೆಂದು ಸರ್ಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯವರು ಗಮನಹರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಾರೆಡ್ಡಿ, ಪ್ರಶಾಂತ್, ಆನಂದ್,ಕಿಶೋರ್, ರಾಜು, ಹರೀಶ್, ರಶ್ಮಿ, ಆಶಾ, ಸುಮಾ, ಗಂಗಾಧರ್, ಪ್ರಭಾವತಿ ಅಜಿತ, ಸೇರಿದಂತೆ ಅರೆಕಾಲಿಕ ಉಪನ್ಯಾಸಕರು ಹಾಜರಿದ್ದರು.