ಕೋಲಾರ: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಲು ಶ್ರಮ ವಹಿಸಿದ ನಿಕಟಪೂರ್ವ ಅಧ್ಯಕ್ಷ ವಿಟ್ಟಪನಹಳ್ಳಿ ಡೇರಿ ವೆಂಕಟೇಶ್ ಅವರನ್ನು ಬ್ಯಾಂಕ್ ಆವರಣದಲ್ಲಿ ಮಂಗಳವಾರ ಷೇರುದಾರರು, ರೈತರು, ಸಿಬ್ಬಂದಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ವಿಟ್ಟಪನಹಳ್ಳಿ ಡೇರಿ ವೆಂಕಟೇಶ್ ಪಿಎಲ್ಡಿ ಬ್ಯಾಂಕ್ ರೈತರ ಅಭಿವೃದ್ಧಿಗಾಗಿ ದುಡಿಯುತ್ತೀರುವ ಬ್ಯಾಂಕ್ ಆಗಿದ್ದು ಹಿಂದಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಕಾಳಜಿಯಿಂದ ಸಾಲ ವಸೂಲಾತಿಯಲ್ಲಿ ಇಡೀ ಬ್ಯಾಂಕ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಗಳಿಸಿದ್ದು ಹೆಮ್ಮೆಯಾಗಿದೆ ಜೊತೆಗೆ ಈ ಸಾಲಿನಲ್ಲಿ 11 ಲಕ್ಷದಷ್ಟು ಲಾಭವನ್ನು ಬ್ಯಾಂಕ್ ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬೊಮ್ಮಸಂದ್ರ ಕೃಷ್ಣೇಗೌಡ ಮಾತನಾಡಿ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಸೇರಿದಂತೆ ವೆಂಕಟಗಿರಿಯಪ್ಪ, ಸಿ.ಬೈರೇಗೌಡ ಅಂತಹ ಮಹಾನ್ ನಾಯಕರು ಅಧ್ಯಕ್ಷರಾಗಿದ್ದ ಬ್ಯಾಂಕ್ ಇದಾಗಿದ್ದು ರೈತರ ಅಭಿವೃದ್ಧಿಗಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ್ದಾರೆ ಬ್ಯಾಂಕ್ ತನ್ನ ಸ್ವಂತ ಮನೆಯ ರೀತಿಯಲ್ಲಿ ರೈತರ ಮನವೊಲಿಸಿ ಸಾಲ ವಸೂಲಿ ಮಾಡಿದ್ದರಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ ಮುಂದೆಯೂ ಇದೇ ಮಾದರಿಯಾಗಿ ಬ್ಯಾಂಕ್ ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ದಿನ್ನೆಹೊಸಹಳ್ಳಿ ಮಾಲಾ ರಾಜಣ್ಣ, ರೈತರು ಷೇರುದಾರರಾದ ಕೆಂಬೋಡಿ ನಾರಾಯಣಗೌಡ, ಆಟೋ ನಾರಾಯಣಸ್ವಾಮಿ, ವಕ್ಕಲೇರಿ ನಾಗರಾಜ್, ಶ್ಯಾನಬೋಗನಹಳ್ಳಿ ಗೋಪಾಲಪ್ಪ, ಷಾಪೂರು ಮುನಿಸ್ವಾಮಿಗೌಡ, ಹರಟಿ ಸುರೇಶ್, ಸೀಸಂದ್ರ ರಮೇಶ್, ದಿನ್ನೆಹೊಸಹಳ್ಳಿ ವೆಂಕಟೇಶ್, ನಾರಾಯಣಸ್ವಾಮಿ, ಗೋವಿಂದಪ್ಪ, ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್, ಲೆಕ್ಕಾಧಿಕಾರಿ, ಶೋಭಾರಾಣಿ, ಸಿಬ್ಬಂದಿ ಶ್ಯಾಮಲಾ, ಶೇಖರ್ ಮುಂತಾದವರು ಇದ್ದರು