ಶಶಸ್ತ್ರ ಕಾಯ್ದೆ ಅಡಿಯಲ್ಲಿ ಆರೋಪಿಗಳು ಮತ್ತು ನಾಡ ಬಂದೂಕು ವಶ: ಕೆಜಿಎಫ್: 24.09. 2023 ರಂದು ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಸರ ಹದ್ದಿನಲ್ಲಿ ಬಣಗೆರೆ ಗೊಲ್ಲಹಳ್ಳಿ ಗ್ರಾಮದ ಕೆರೆ ಕಟ್ಟೆ ಮೇಲೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಆರೋಪಿಗಳಾದ ಮುನಿಸ್ವಾಮಿ, ಕೆಜಿಎಫ್ ಮತ್ತು ರಾಹುಲ್ ಕುಪ್ಪಂ ತಾಲೂಕು, ಆಂಧ್ರಪ್ರದೇಶ ದವರನ್ನ ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಶ್ರೀ ಮಂಜುನಾಥ .ಬಿ ಎ ಎಸ್ ಐ .ವಿ ರಮೇಶ್ ಹಾಗೂ ಸಿಬ್ಬಂದಿಗಳಾದ ವೆಂಕಟೇಶ್.ಸುನಿಲ್ ಕುಮಾರ್. ಪರಶುರಾಮ. ಕೌಳಗಿ. ರವಿಕುಮಾರ್ ರವರು ವಶಕ್ಕೆ ಪಡೆದು, ವಿಚಾರಣೆ ಮಾಡಿ ಅವರು ಬೇಟೆ ಆಡಲು ಅವರೊಂದಿಗೆ ಅಕ್ರಮವಾಗಿ ಇಟ್ಟುಕೊಂಡಿದ್ದ ಒಂದು ನಾಡ ಬಂದೂಕು ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ. ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಪಿ ಎಸ್ ಐ ಮತ್ತು ಸಿಬ್ಬಂದಿಯವರ ಉತ್ತಮ ಕಾರ್ಯವನ್ನು ಪ್ರಶಂಸಿಸಲಾಗಿದೆ.

Sep 26, 2023

Leave a Reply

Your email address will not be published. Required fields are marked *