ಚಿಕ್ಕಬಳ್ಳಾಪುರ:ತಾಲೂಕಿನ ಕಣಜೇನಹಳ್ಳಿಯ ಶ್ರೀ ಕಾಳಿಕಾದೇವಿ ವಿಶ್ವಕರ್ಮ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯ ಅಂಗವಾಗಿ ಗುರುವಾರ ಗ್ರಾಮದಲ್ಲಿ ಬೆಳ್ಳಿರಥದಲ್ಲಿ ಶ್ರೀ ವಿಶ್ವಕರ್ಮ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.ವಿಶ್ವಕರ್ಮ ಜಯಂತಿ ಅಂಗವಾಗಿ ಗ್ರಾಮದೇವತೆಯಾಗಿರುವ ಶ್ರೀ ಪಾರ್ವತಮ್ಮ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.ಬಳಿಕ ಸಂಘದ ಪದಾಧಿಕಾರಿಗಳು,ಗ್ರಾಮದ ಸಮುದಾಯದ ಮಹಿಳೆಯರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಬಳಿಕ ನಗರದಲ್ಲಿ ಆಯೋಜಿಸಿರುವ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಸಂಘದ ಅಧ್ಯಕ್ಷ ಜಗದೀಶಚಾರಿ ಮಾತನಾಡಿ ಗ್ರಾಮದಲ್ಲಿ ಕಳೆದ ೭ ವರ್ಷಗಳಿಂದ ಸಂಘದಿಂದ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತಿದ್ದು,ಪ್ರತಿ ಬಾರಿಯಂತೆ ಗ್ರಾಮದಲ್ಲಿ ಬೆಳ್ಳಿರಥದಲ್ಲಿ ವಿಶ್ವಕರ್ಮರ ಭಾವಚಿತ್ರವನ್ನು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ನಗರದಲ್ಲಿ ಆಯೋಜಿಸಿರುವ ಉತ್ಸವದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.ಇನ್ನೂ ವಿಶ್ವಕರ್ಮ ಜನಾಂಗದ ಮಹಿಳೆಯರು ಸಹ ಉತ್ಸಾಹದಿಂದ ಈ ಜಯಂತಿಯಲ್ಲಿ ಭಾಗಿಯಾಗಿದ್ದು ಮೆರಗು ತಂದಿದೆ.ಹಾಗೆ ಬಂದ ಭಕ್ತಾದಿಗಳಿಗೆ ಪ್ರಸಾಧ ವಿನಿಯೋಗ ಮಾಡಿದ್ರು‌.ಸಂಘದ ಉಪಾಧ್ಯಕ್ಷ ಶಂಕರಚಾರಿ,ಕಾರ್ಯದರ್ಶಿ ಶಿವಶಂಕರಚಾರಿ,ಖಜಾಂಚಿ ರಾಘವೇಂದ್ರಚಾರಿ,ಸುರೇಶಾಚಾರಿ,ಉಮಾಶಂಕರಚಾರಿ,ರಾಜಾಚಾರಿ,
ಪುಷ್ಪ, ಗೀತಾ ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *