ಚಿಕ್ಕಬಳ್ಳಾಪುರ: ಪ್ರವಾದಿ ಮಹಮ್ಮದ್ ಪೈಗಂಬರ್
ರವರ ಜನ್ಮ ದಿನಾಚರಣೆಯ ಈದ್ ಮಿಲಾದ್ ಅಂಗವಾಗಿ ಇಂದು ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ಮತ್ತು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಚಿಕ್ಕಬಳ್ಳಾಪುರ ಇವರ ಸಹ ಬಾಗಿತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗು ನಗರದ ಉಸ್ಮಾನೇ ಘನೀ ಮದ್ರಸಾದಲ್ಲಿ ಮಕ್ಕಳಿಗೆ ಸಿಹಿ ಹಂಚಿ ಊಟದ ವ್ಯವಸ್ಥೆ ಮಾಡಿ ಮಕ್ಕಳ ಜೊತೆ ಕೆಲ ಸಮಯ ಇದ್ದು ಈದ್ ಮೀಲಾದ್ ಆಚರಣೆ ಮಾಡಿದರು.
ಈ ವೇಳೆ ಮಾತನಾಡಿದ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ರಾಜ್ಯಾಧ್ಯಕ್ಷ ಡಾ. ಎಂ.ಎಂ.ಬಾಷಾ ಪ್ರವಾದಿ ಮಹಮದ್ ಪೈಗಂಬರ್
ರವರು ಇಡೀ ವಿಶ್ವಕ್ಕೆ ಶಾಂತಿ ಸಾರಿದ ಮಹಾನ್ ವ್ಯಕ್ತಿ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಈದ್ ಮಿಲಾದ್ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗು ಮದರಸಾ ಮಕ್ಕಳಿಗೆ ಸಿಹಿ ಹಂಚಿಕೆ ಕಾರ್ಯಕ್ರಮವನ್ನ ಆಯೋಜಿಸಿದ್ದೇವೆ.ಈದ್ ಮೀಲಾದ್ ಅಂಗವಾಗಿ ದೇಶದ ಅಭಿವೃದ್ಧಿ ಶಾಂತಿ ಸೌಹಾರ್ದತೆ ಗೊಸ್ಕರ ನಾವೆಲ್ಲರೂ ಪ್ರಾರ್ಥನೆ ಸಲ್ಲಿಸಲಿದ್ದೀವಿ ಎಂದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂ ಬನ್ನೂರು, ಜಿಲ್ಲಾಧ್ಯಕ್ಷ ವಿ.ರಾಜಶೇಖರ,
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಜಿಲ್ಲಾ ಅಧ್ಯಕ್ಷ ರೆಹಮಾನ್ ಸಾಬ್, ಸೈಯದ್ ಅಮಾನುಲ್ಲಾ, ನಾತಿಖ್ ಅಲಿ, ಬಷೀರ್ ಸಾಬ್,ಅಬ್ದುಲ್,
ಫಝಲುಲ್ಲಾ,ಅರ್ಬಾಜ್, ನವಾಝ್, ಜಯಕುಮಾರ್, ಮೋಹನ್, ಅಬೂಬಕರ್, ಜಾವಿದ್ ಸಾಬ್ ಹಾಗೂ ಇನ್ನಿತರರು
ಉಪಸ್ಥಿತರಿದ್ದರು.
