ಅಡಿಕೆ ಬೆಳೆಗೆ ಜು.15 ಮತ್ತು ಮಾವಿಗೆ ಜು.31 ಬೆಳೆವಿಮೆ ನೊಂದಾಯಿಸಲು ಕೊನೆಯ ದಿನವಾಗಿದೆ ಎಂದು ಕೊರಟಗೆರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರಟಗೆರೆ ತಾಲೂಕಿನ ಅಡಿಕೆ ಮತ್ತು ಮಾವು ಬೆಳೆಗಳನ್ನು ಈ ಯೋಜನೆಯಡಿ ಒಳಪಡಿಸಲಾಗಿದೆ. ರೈತರು ನಿಗಧಿತ ಅರ್ಜಿಯ ಜೊತೆ ಪ್ರಸಕ್ತ ಸಾಲಿನ ಭೂಮಿಯ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ ನಕಲು ಪ್ರತಿ ಮತ್ತು ಸ್ವಯಂಘೋಷಿತ ಬೆಳೆ ವಿವರದೊಂದಿಗೆ ತಾಲೂಕಿನ ಯಾವುದಾದ್ರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನೊಂದಣಿ ಮಾಡಿಸಬಹುದಾಗಿದೆ.

ಬೆಳೆಸಾಲ ಪಡೆಯುವ ರೈತರು ಮತ್ತು ಬೆಳೆಸಾಲ ಪಡೆಯದ ರೈತರ ಸಹ ನೊಂದಾವಣಿ ಮಾಡಿಸಬಹುದಾಗಿದೆ. ಅಡಿಕೆ ಬೆಳೆಯ ಪ್ರತಿ ಹೆಕ್ಟರಿಗೆ ಶೇ.5ರಂತೆ ರೂ.6400 ಮತ್ತು ಮಾವು ಬೆಳೆಯ ಪ್ರತಿ ಹೆಕ್ಟರಿಗೆ ರೂ.4ಸಾವಿರದಂತೆ ವಿಮಾ ಕಂತಿನ ದರವನ್ನು ನಿಗಧಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ಆರ್‍ಎಸ್‍ಕೆ ಅಧಿಕಾರಿ ಅಥವಾ ದೂ.08138-295577ಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

ಹವಾಮಾನ ಆಧಾರಿತ ಬೆಳೆವಿಮೆ ಅರ್ಜಿ ಆಹ್ವಾನ
ಕೊರಟಗೆರೆ:- 2023-24ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಯಾದ ಅಡಿಕೆ ಮತ್ತು ಮಾವಿನ ಬೆಳೆವಿಮೆ ಅರ್ಜಿ ಆಹ್ವಾನಿಸಲಾಗಿದೆ.

ಅಡಿಕೆ ಬೆಳೆಗೆ ಜು.15 ಮತ್ತು ಮಾವಿಗೆ ಜು.31 ಬೆಳೆವಿಮೆ ನೊಂದಾಯಿಸಲು ಕೊನೆಯ ದಿನವಾಗಿದೆ ಎಂದು ಕೊರಟಗೆರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರಟಗೆರೆ ತಾಲೂಕಿನ ಅಡಿಕೆ ಮತ್ತು ಮಾವು ಬೆಳೆಗಳನ್ನು ಈ ಯೋಜನೆಯಡಿ ಒಳಪಡಿಸಲಾಗಿದೆ. ರೈತರು ನಿಗಧಿತ ಅರ್ಜಿಯ ಜೊತೆ ಪ್ರಸಕ್ತ ಸಾಲಿನ ಭೂಮಿಯ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ ನಕಲು ಪ್ರತಿ ಮತ್ತು ಸ್ವಯಂಘೋಷಿತ ಬೆಳೆ ವಿವರದೊಂದಿಗೆ ತಾಲೂಕಿನ ಯಾವುದಾದ್ರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನೊಂದಣಿ ಮಾಡಿಸಬಹುದಾಗಿದೆ.

ಬೆಳೆಸಾಲ ಪಡೆಯುವ ರೈತರು ಮತ್ತು ಬೆಳೆಸಾಲ ಪಡೆಯದ ರೈತರ ಸಹ ನೊಂದಾವಣಿ ಮಾಡಿಸಬಹುದಾಗಿದೆ. ಅಡಿಕೆ ಬೆಳೆಯ ಪ್ರತಿ ಹೆಕ್ಟರಿಗೆ ಶೇ.5ರಂತೆ ರೂ.6400 ಮತ್ತು ಮಾವು ಬೆಳೆಯ ಪ್ರತಿ ಹೆಕ್ಟರಿಗೆ ರೂ.4ಸಾವಿರದಂತೆ ವಿಮಾ ಕಂತಿನ ದರವನ್ನು ನಿಗಧಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ಆರ್‍ಎಸ್‍ಕೆ ಅಧಿಕಾರಿ ಅಥವಾ ದೂ.08138-295577ಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *