Post navigation ಸೆ. 30 ರಂದು ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದಲ್ಲಿ ನಮ್ಮೂರ ಜಾನಪದ ಜಾತ್ರೆಕುಂಭ ಕಳಶ ಮೆರವಣಿಗೆ ಮತ್ತು ಸಂಗೀತ ದರ್ಬಾರ್ನಲ್ಲಿ ಪಾಲ್ಗೊಳ್ಳಿ – ಬಜಾರೆಬೀದರ: ಸೆಪ್ಟೆಂಬರ್ 30 ರಂದು ನಾವದಗೇರಿಯ ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಪ್ರಯುಕ್ತ ಬೆಳಿಗ್ಗೆ 8 ಗಂಟೆಯಿoದ ಇಡೀ ದಿವಸ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಬೇಕೆಂದು ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಓಂಪ್ರಕಾಶ ಬಜಾರೆ ತಿಳಿಸಿದರು.ನಗರದ ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಜಾಪದ ಪರಿಷತ್ತು, ಸಂಸ್ಕೃತಿ ಸಚಿವಾಲಯ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ, ಕರುಣಾಮಯ ಯುವಕ ಸಂಘ ನಾವದಗೇರಿ, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.ಅಲ್ಲದೇ ಅಂದು ಬೆಳಿಗ್ಗೆ 8 ಗಂಟೆಗೆ ಕೇಂದ್ರ ನವಿಕರಿಸಬಹುದಾದ ಇಂಧನಗಳ ಮೂಲ, ರಾಸಾಯನಿಕ ರಸಗೊಬ್ಬರ ಖಾತೆ ಸಚಿವರಾದ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸುವರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಅರಣ್ಯ ಪರಿಸರ ಹಾಗೂ ಜೀವಿಶಾಸ್ತçದ ಸಚಿವರಾದ ಈಶ್ವರ ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹಿಂಖಾನ್, ಶಾಸಕರಾದ ಡಾ. ಶೈಲೇಂದ್ರ ಕೆ ಬೆಲ್ದಾಳೆ ಸೇರಿದಂತೆ ವಿವಿಧ ಮುಖಂಡರು ಹಾಗೂ ಸಾಹಿತಿಗಳು ಉಪಸ್ಥಿತರಿರಲಿದ್ದಾರೆ.ಅಂದು ಬೆ. 9 ಗಂಟೆಗೆ ನಾವದಗೇರಿಯ ಹನುಮಾನ ಮಂದಿರದಿoದ ಕುಂಭ ಕಳಶ ಮೆರವಣಿಗೆ ಆರಂಭವಾಗಿ ಶುಕ್ಲತೀರ್ಥ ಮಂದಿರವರೆಗೆ ಜರುಗಲಿದೆ. ಮೆರವಣಿಗೆಯನ್ನು ಗಾಂಧಿ ಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಉದ್ಘಾಟಿಸುವರು. ಇದೇ ವೇಳೆ ಪ್ರಮುಖರಾದ ಬಾಬು ಪಾಸ್ವಾನ್, ಫರ್ನಾಂಡಿಸ್ ಹಿಪ್ಪಳಗಾಂವೆ, ವಿಜಯಕುಮಾರ ಸೋನಾರೆ, ಸುನೀಲ ಬಚ್ಚನ್, ಮೋಜಸ್ ನಾಗೂರೆ, ಅಶೋಕ ಹೆಬ್ಬಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.ಅಂದು ಮಧ್ಯಾಹ್ನ 2 ಗಂಟೆಗೆ ನಗರಸಭೆ ಅಧ್ಯಕ್ಷ ಎಂಡಿ ಗೌಸೋದ್ದಿನ್ ಜನಪದ ಸಾಂಸ್ಕೃತಿಕ ಉತ್ಸವ ಮತ್ತು ನಮ್ಮೂರು ಜನಪದ ಜಾತ್ರೆ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ, ಹಿಂದೂ ಧರ್ಮದ ಚಿಂತಕ ಈಶ್ವರಸಿಂಗ್ ಠಾಕೂರ್, ಪ್ರಮುಖರಾದ ಧನರಾಜ ಹಂಗರಗಿ, ಡೆನ್ ನೆಟ್ವರ್ಕ್ ಮಾಲೀಕರಾದ ರವೀಂದ್ರ ಸ್ವಾಮಿ, ಹಿರಿಯ ಪತ್ರಕರ್ತ ಮಾರುತಿ ಸೋನಾರ್, ಪುಂಡಲಿಕ ಪಾಟೀಲ ಗುಮ್ಮಾ ಹಾಜರಿರುವರು. ಅಧ್ಯಕ್ಷತೆಯನ್ನು ಕ.ಜಾ.ಪ. ಬೆಂಗಳೂರಿನ ಆಡಳಿತ ಮಂಡಳಿ ಸದಸ್ಯ ಡಾ. ಜಗನ್ನಾಥ ಹೆಬ್ಬಾಳೆ ವಹಿಸುವರು.ಜಾನಪದ ಸಂಗೀತ ದರ್ಬಾರ್: ಗದಗನ ಖ್ಯಾತ ರಾಜ್ಯ ಮಟ್ಟದ ಜಾನಪದ ಕಲಾವಿದರಾದ ರಾಜಶೇಖರಯ್ಯ ಹಿರೇಮಠ ಹಾಗೂ ತಂಡದವರಿoದ ಸಂಗೀತ ದರ್ಬಾರ್ ನಡೆಯಲಿದೆ. ಇವರ ಜೊತೆಗೆ ಖ್ಯಾತ ಸಂಗೀತ ಕಲಾವಿದ ದಂಪತಿಗಳಾದ ಅಶ್ವಿನಿ ರಾಜಕುಮಾರ ಬಂಪಳ್ಳಿ ಅವರ ಕಲಾತಂಡದಿoದ ಸಂಗೀತ ಕಾರ್ಯಕ್ರಮ ಜರುಗಲಿದೆ. ಈ ಸಂಗೀತ ಸೇವೆಯಲ್ಲಿ ಭಾರತಿಬಾಯಿ ತಂಡದಿoದ ಲಂಬಾಣಿ ನೃತ್ಯ, ಶೇಷಪ್ಪ ಚಿಟ್ಟಾ ಹಲಗೆ ವಾದನ, ಮಾಣಿಕ ಮಾಳಪ್ಪ ತಂಡದಿoದ ಡೊಳ್ಳು ಕುಣಿತ, ವಿಜಯಕುಮಾರ ಐನೊಳ್ಳಿ ತಂಡದಿoದ ಪುರವಂತಿಕೆ ನೃತ್ಯ, ಅರುಣಕುಮಾರ ತಂಡದಿAದ ಭೂತೇರ ನೃತ್ಯ ಜರುಗಲಿದೆ ಎಂದು ಬಜಾರೆ ಮಾಹಿತಿ ನೀಡಿದರು.ಇದೇ ವೇಳೆ ಶುಕ್ಲತೀರ್ಥ ಸೇವಾ ಸಮಿತಿ ಅಧ್ಯಕ್ಷ ಸಂಗಮೇಶ ಬೀಕ್ಲೆ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ, ಪ್ರಮುಖರಾದ ಸಾಗರ ಗೌರ, ಜಗದೀಶ ಬಜಾರೆ, ಮಲ್ಲಿಕಾರ್ಜುನ ತಲವಾರ, ಪಾಂಡುನಾಥ ರಾಗಾಪುರ, ಸಂತೋಷ ಕಾಮಣ್ಣೋರ್, ರಾಜಕುಮಾರ ಜಮಾದಾರ್, ಮಡಿವಾಳಯ್ಯ ಮೇಲಿನಮಠ, ರವಿ ಕಣಜಿಕರ್, ವಿಜಯ್ ಪಾಟೀಲ ಮಾಮನಕೇರಿ, ರಾಜಕುಮಾರ ಡೊಂಗರಗಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಮಕ್ಕಳು, ಮಹಿಳೆಯರಲ್ಲಿ ಅಪೌಷ್ಟಿಕತೆ ನಿವಾರಣೆಗೆ ವಿಶ್ವ ಪೋಷಣ್ ದಿನಾಚರಣೆ: ಶ್ರೀನಿವಾಸ್: ಕೆಜಿಎಫ್: ವಿದ್ಯಾರ್ಥಿನಿಯರು, ಮಕ್ಕಳು ಮಹಿಳೆಯರಲ್ಲಿ ವೈಯಕ್ತಿಕ ಸ್ವಚ್ಛತೆ. ಸಮತೋಲಿನ ಆಹಾರ, ಆರೋಗ್ಯ ರಕ್ಷಣೆ ಮತ್ತು ಪೌಷ್ಠಿಕತೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದಲೇ ಪ್ರಧಾನ ಮಂತ್ರಿಗಳ ಪೋಷಣೆ ಮಾಸಾಚರಣೆ ಆಚರಿಸಲಾಗುತ್ತದೆ ಎಂದು. ಶಾಲೆಯ ಮುಖ್ಯ ಶಿಕ್ಷಕ ಎಂ ಶ್ರೀನಿವಾಸ್ ತಿಳಿಸಿದರು .ಕೆಜಿಎಫ್ ತಾಲೂಕಿನ ಮಸ್ಕಾಂ ಶಾಲೆಯಲ್ಲಿ ಪೋಷಣ್ ದಿನಾಚರಣೆ ಮಾಸ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು. ಮಕ್ಕಳ ಉತ್ತಮ ಆರೋಗ್ಯಕರ ಪೋಷಣೆಯೊಂದಿಗೆ ಉತ್ತಮ ಕಲಿಕೆಯನ್ನು ವೃದ್ಧಿಸುವದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಮಹಿಳೆಯರಲ್ಲಿ ಅದರಲ್ಲೂ ಗರ್ಭಿಣಿಯದಲ್ಲಿ ಅಪೌಷ್ಟಿಕತೆ ಕಾಡಿದ್ದಲ್ಲಿ ಅದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದಲೇ ಸರ್ಕಾರ ಪೋಷಣ್ ಮಾಸಾಚರಣೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಂ ಶ್ರೀನಿವಾಸ್ ಶಾಲೆಯ ಸಿಬ್ಬಂದಿ ವರ್ಗ ಮಕ್ಕಳು ಇದ್ದರು