ಮಕ್ಕಳು, ಮಹಿಳೆಯರಲ್ಲಿ ಅಪೌಷ್ಟಿಕತೆ ನಿವಾರಣೆಗೆ ವಿಶ್ವ ಪೋಷಣ್ ದಿನಾಚರಣೆ: ಶ್ರೀನಿವಾಸ್: ಕೆಜಿಎಫ್: ವಿದ್ಯಾರ್ಥಿನಿಯರು, ಮಕ್ಕಳು ಮಹಿಳೆಯರಲ್ಲಿ ವೈಯಕ್ತಿಕ ಸ್ವಚ್ಛತೆ. ಸಮತೋಲಿನ ಆಹಾರ, ಆರೋಗ್ಯ ರಕ್ಷಣೆ ಮತ್ತು ಪೌಷ್ಠಿಕತೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದಲೇ ಪ್ರಧಾನ ಮಂತ್ರಿಗಳ ಪೋಷಣೆ ಮಾಸಾಚರಣೆ ಆಚರಿಸಲಾಗುತ್ತದೆ ಎಂದು. ಶಾಲೆಯ ಮುಖ್ಯ ಶಿಕ್ಷಕ ಎಂ ಶ್ರೀನಿವಾಸ್ ತಿಳಿಸಿದರು .ಕೆಜಿಎಫ್ ತಾಲೂಕಿನ ಮಸ್ಕಾಂ ಶಾಲೆಯಲ್ಲಿ ಪೋಷಣ್ ದಿನಾಚರಣೆ ಮಾಸ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು. ಮಕ್ಕಳ ಉತ್ತಮ ಆರೋಗ್ಯಕರ ಪೋಷಣೆಯೊಂದಿಗೆ ಉತ್ತಮ ಕಲಿಕೆಯನ್ನು ವೃದ್ಧಿಸುವದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಮಹಿಳೆಯರಲ್ಲಿ ಅದರಲ್ಲೂ ಗರ್ಭಿಣಿಯದಲ್ಲಿ ಅಪೌಷ್ಟಿಕತೆ ಕಾಡಿದ್ದಲ್ಲಿ ಅದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದಲೇ ಸರ್ಕಾರ ಪೋಷಣ್ ಮಾಸಾಚರಣೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಂ ಶ್ರೀನಿವಾಸ್ ಶಾಲೆಯ ಸಿಬ್ಬಂದಿ ವರ್ಗ ಮಕ್ಕಳು ಇದ್ದರು

Sep 29, 2023

Leave a Reply

Your email address will not be published. Required fields are marked *