ಜುಲೈ-೧೪, ದೇವನಹಳ್ಳಿ , : ಗ್ರಾಮೀಣ ಭಾಗದಲ್ಲಿ ರೈತರ ಜೀವನ ಆಧಾರ ಹೈನುಗಾರಿಕೆ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೫ ರೂ ಏರಿಕೆ ಮಾಡುವ ಭರವಸೆ ನೀಡಿದ್ದರು ಆದಷ್ಟು ಬೇಗ ಈಡೇರಿದರೆ ಸಾಕಷ್ಟದ ಲ್ಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಬಮೂಲ್ ಪ್ರಭಾರ ಅದ್ಯಕ್ಷ ಮಂಜುನಾಥ್ ಅಭಿಪ್ರಾಯಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘದ ಮೊದಲನೇ ಅಂತಸ್ಥಿನಲ್ಲಿ ನೂತನ ಸಬಾಂಗಣ ಹಾಗೂ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೇ ನೀಡಿ ಮಾತನಾಡಿ, ಸರ್ಕಾರ ಈಗಾಗಲೇ ೮೫ ಪೈಸೆಯನ್ನು ಸರ್ಕಾರ ಕಡಿತ ಮಾಡಿದೆ ಪಶು ಆಹಾರದ ಬೆಲೆಗಳು ಗಗನಕ್ಕೇರಿರುವ ಸಂಕಷ್ಟಕಾಲದಲ್ಲಿ ಹಾಲಿನ ಬೆಲೆ ಇಳಿಕೆಯಿಂದ ರೈತನಿಗೆ ಬರೆ ಎಳೆದಂತಾಗಿದೆ.
ಬೆಂಗಳೂರು ಹಾಲು ಒಕ್ಕೂಟ ಸಭೆಯಲ್ಲಿ ಹೈನುಗಾರಿಕೆ ಅವಲಂಬಿತ ರೈತರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಬೀರಸಂದ್ರದ ಡೈರಿ ನಿರ್ಮಾಣಗೊಂಡು ೭೩ ವರ್ಷದ ಜತೆಗೆ ಬೆಳ್ಳಿ ಹಬ್ಬದ ಆಚರಣೆಗೆ ೨ ವರ್ಷ ಬಾಕಿ ಉಳಿದಿದೆ, ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ ಎಂದು ಶುಭ ಹಾರೈಸಿದರು.
ಡೈರಿ ಅದ್ಯಕ್ಷ ಮುರಳಿ ಮಾತನಾಡಿ, ಬೀರಸಂದ್ರ ಗ್ರಾಮದಲ್ಲಿ ೧೯೭೫ ರಲ್ಲಿ ಡೈರಿ ಪ್ರಾರಂಭವಾದರು, ಕಟ್ಟಡ ಮಾತ್ರ ೧೯೯೩ರಲ್ಲಿ ಸ್ಥಾಪನೆಯಾಗಿದೆ. ಈ ಹಿಂದೆ ೧೧೦ ಲೀಟರ್ ನಿಂದ ೮೦೦ ಕ್ಕೂ ಹೆಚ್ಚು ಲೀಟರ್ ಹಾಲು ಶೇಖರಣೆಯಾಗಿದೆ. ಬೆಂಗಳೂರು ಡೈರಿಯಿಂದ ೩ ಲಕ್ಷ ರೂ ಹಾಗೂ ಡೈರಿ ಉಳತಾಯ ಖಾತೆಯಿಂದ ೮ ಲಕ್ಷರೂ ಸೇರಿ ೧೧.೬೫ ಲಕ್ಷ ರೂ ವೆಚ್ಚದಲ್ಲಿ ಪಿಠೋಪಕರಣಗಳು, ಮೊದಲನೇ ಅಂತಸ್ಥಿನ ಸಭಾಂಗಣದ ಕಟ್ಟಡ ನಿರ್ಮಾಣ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ.
ನಮ್ಮ ಗ್ರಾಮದಲ್ಲೇ ಸುಮಾರು ೪೬೦ಕ್ಕೂ ಹೆಚ್ಚು ಹಸು, ಎಮ್ಮೆ, ಕುರಿ, ಮೇಕೆ ಮುಂತಾದ ಸಾಕುಪ್ರಾಣ ಗಳಿದ್ದು, ಜಾನುವಾರುಗಳ ಅಗತ್ಯ ಚಿಕಿತ್ಸೆಗೆ ದೂರದೂರಿನ ಕೊಯಿರ ಗ್ರಾಮಕ್ಕೆ ತೆರಳಬೇಕಿದ್ದು ಪಶುಚಿಕಿತ್ಸ ಆಸ್ಪತ್ರೆ ಗ್ರಾಮದಲ್ಲಿ ತೆರೆದರೆ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ.
ಈ ಹಿಂದೆ ೮ ರಿಂದ ೧೦ ಗ್ರಾಮಗಳಿಂದ ಬೀರಸಂದ್ರ ಡೈರಿಗೆ ಬಂದು ಹಾಲು ಸರಬ ರಾಜು ಮಾಡುತಿದ್ದರು, ನಮ್ಮ ಡೈರಿ ಲಾಭದಾಯಕ ಹಾಗೂ ಗುಣಮಟ್ಟದ ಹಾಲು ಶೇಕರಿಸಿ ಬೆಂಗಳೂರು ಡೈರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್, ಜಿ.ಪಂ. ಮಾಜಿ ಅದ್ಯಕ್ಷ ಬೀರಪ್ಪ, ಕಾಂಗ್ರೇಸ್ ಮುಖಂಡ ರವಿ ಕುಮಾರ್, ಬಿಡಿಸಿಸಿ ಅದ್ಯಕ್ಷ ಎಸಿ.ನಾಗರಾಜು ಮಾಜಿ ಅದ್ಯಕ್ಷ ಸೊಣ್ಣಪ್ಪ, ತಾಲ್ಲೂಕು ಸೂಸೈಟಿ ನಿರ್ದೇಶಕ ಕಾಮೇನಹಳ್ಳಿ ರಮೇಶ್, ಮಂಡಿಬೆಲೆ ರಾಜಣ್ಣ, ಗ್ರಾ.ಪಂ. ಅದ್ಯಕ್ಷೆ ಗೌರಮ್ಮ ರಾಮಣ್ಣ, ಉಪಾದ್ಯಕ್ಷೆ ಕಾಂತಮುನಿರಾಜು, ಸದಸ್ಯರಾದ ಬೈರೇಗೌಡ, ಕೃಷ್ಣಮ್ಮ ಯಲ್ಲಪ್ಪ, ಬಿಜೆಪಿ ಮುಖಂಡರಾದ ಹೊಸೂರು ರವಿಕುಮಾರ್, ಸಿದ್ದಲಿಂಗಮೂರ್ತಿ, ಡೈರಿ ಅದ್ಯಕ್ಷ ಮುರಳಿ, ಕಾರ್ಯದರ್ಶಿ ನಾಗರಾಜು, ನಿರ್ದೇಶಕರಾದ ಮುರಳಿ, ಸಿದಪ್ಪ, ತಿಮ್ಮರಾಯಪ್ಪ, ನಾರಾಯಣಸ್ವಾಮಿ, ಮುನೇಗೌಡ, ಲೋಕೇಶ್, ಕಾಂತರಾಜು, ಕೆಂಪೇಗೌಡ, ಚನ್ನಕೃಷ್ಣಪ್ಪ. ಕೆಂಪಮ್ಮ, ಆಂಜಿನಮ್ಮ ಹಾಗೂ ಹಾಲು ಉತ್ಪಾಧಕರು, ಗ್ರಾಮಸ್ಥರಿದ್ದರು.
ಜುಲೈ-೧೪, ದೇವನಹಳ್ಳಿ, ಪೋಟೊ-೧
ಹಾಲು ಉತ್ಪಾಧಕರ ಸಹಕಾರ ಸಂಘದ ಮೊದಲನೇ ಅಂತಸ್ಥಿನಲ್ಲಿ ನೂತನ ಮೀಟಿಂಗ್ ಹಾಲ್ ಹಾಗೂ ಶುದ್ದ ಕುಡಿಯುವ ನೀರಿನ ಘಟಕವನ್ನು ಬೆ.ಹಾ.ಒಕ್ಕೂಟದ ಪ್ರಭಾರ ಅದ್ಯಕ್ಷ ಮಂಜುನಾಥ್ ಶುಕ್ರವಾರ ಉದ್ಘಾಟಿಸಿದರು.
ಬೀರಸಂದ್ರದಲ್ಲಿ ಪಶುಚಿಕಿತ್ಸಾ ಆಸ್ಪತ್ರೆ ತೆರೆಯಲು ಡೈರಿ ಅದ್ಯಕ್ಷ ಮುರಳಿ ಸರ್ಕಾರಕ್ಕೆ ಒತ್ತಾಯ
ಜುಲೈ-೧೪, ದೇವನಹಳ್ಳಿ , : ಗ್ರಾಮೀಣ ಭಾಗದಲ್ಲಿ ರೈತರ ಜೀವನ ಆಧಾರ ಹೈನುಗಾರಿಕೆ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೫ ರೂ ಏರಿಕೆ ಮಾಡುವ ಭರವಸೆ ನೀಡಿದ್ದರು ಆದಷ್ಟು ಬೇಗ ಈಡೇರಿದರೆ ಸಾಕಷ್ಟದ ಲ್ಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಬಮೂಲ್ ಪ್ರಭಾರ ಅದ್ಯಕ್ಷ ಮಂಜುನಾಥ್ ಅಭಿಪ್ರಾಯಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘದ ಮೊದಲನೇ ಅಂತಸ್ಥಿನಲ್ಲಿ ನೂತನ ಸಬಾಂಗಣ ಹಾಗೂ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೇ ನೀಡಿ ಮಾತನಾಡಿ, ಸರ್ಕಾರ ಈಗಾಗಲೇ ೮೫ ಪೈಸೆಯನ್ನು ಸರ್ಕಾರ ಕಡಿತ ಮಾಡಿದೆ ಪಶು ಆಹಾರದ ಬೆಲೆಗಳು ಗಗನಕ್ಕೇರಿರುವ ಸಂಕಷ್ಟಕಾಲದಲ್ಲಿ ಹಾಲಿನ ಬೆಲೆ ಇಳಿಕೆಯಿಂದ ರೈತನಿಗೆ ಬರೆ ಎಳೆದಂತಾಗಿದೆ.
ಬೆಂಗಳೂರು ಹಾಲು ಒಕ್ಕೂಟ ಸಭೆಯಲ್ಲಿ ಹೈನುಗಾರಿಕೆ ಅವಲಂಬಿತ ರೈತರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಬೀರಸಂದ್ರದ ಡೈರಿ ನಿರ್ಮಾಣಗೊಂಡು ೭೩ ವರ್ಷದ ಜತೆಗೆ ಬೆಳ್ಳಿ ಹಬ್ಬದ ಆಚರಣೆಗೆ ೨ ವರ್ಷ ಬಾಕಿ ಉಳಿದಿದೆ, ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ ಎಂದು ಶುಭ ಹಾರೈಸಿದರು.
ಡೈರಿ ಅದ್ಯಕ್ಷ ಮುರಳಿ ಮಾತನಾಡಿ, ಬೀರಸಂದ್ರ ಗ್ರಾಮದಲ್ಲಿ ೧೯೭೫ ರಲ್ಲಿ ಡೈರಿ ಪ್ರಾರಂಭವಾದರು, ಕಟ್ಟಡ ಮಾತ್ರ ೧೯೯೩ರಲ್ಲಿ ಸ್ಥಾಪನೆಯಾಗಿದೆ. ಈ ಹಿಂದೆ ೧೧೦ ಲೀಟರ್ ನಿಂದ ೮೦೦ ಕ್ಕೂ ಹೆಚ್ಚು ಲೀಟರ್ ಹಾಲು ಶೇಖರಣೆಯಾಗಿದೆ. ಬೆಂಗಳೂರು ಡೈರಿಯಿಂದ ೩ ಲಕ್ಷ ರೂ ಹಾಗೂ ಡೈರಿ ಉಳತಾಯ ಖಾತೆಯಿಂದ ೮ ಲಕ್ಷರೂ ಸೇರಿ ೧೧.೬೫ ಲಕ್ಷ ರೂ ವೆಚ್ಚದಲ್ಲಿ ಪಿಠೋಪಕರಣಗಳು, ಮೊದಲನೇ ಅಂತಸ್ಥಿನ ಸಭಾಂಗಣದ ಕಟ್ಟಡ ನಿರ್ಮಾಣ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ.
ನಮ್ಮ ಗ್ರಾಮದಲ್ಲೇ ಸುಮಾರು ೪೬೦ಕ್ಕೂ ಹೆಚ್ಚು ಹಸು, ಎಮ್ಮೆ, ಕುರಿ, ಮೇಕೆ ಮುಂತಾದ ಸಾಕುಪ್ರಾಣ ಗಳಿದ್ದು, ಜಾನುವಾರುಗಳ ಅಗತ್ಯ ಚಿಕಿತ್ಸೆಗೆ ದೂರದೂರಿನ ಕೊಯಿರ ಗ್ರಾಮಕ್ಕೆ ತೆರಳಬೇಕಿದ್ದು ಪಶುಚಿಕಿತ್ಸ ಆಸ್ಪತ್ರೆ ಗ್ರಾಮದಲ್ಲಿ ತೆರೆದರೆ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ.
ಈ ಹಿಂದೆ ೮ ರಿಂದ ೧೦ ಗ್ರಾಮಗಳಿಂದ ಬೀರಸಂದ್ರ ಡೈರಿಗೆ ಬಂದು ಹಾಲು ಸರಬ ರಾಜು ಮಾಡುತಿದ್ದರು, ನಮ್ಮ ಡೈರಿ ಲಾಭದಾಯಕ ಹಾಗೂ ಗುಣಮಟ್ಟದ ಹಾಲು ಶೇಕರಿಸಿ ಬೆಂಗಳೂರು ಡೈರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್, ಜಿ.ಪಂ. ಮಾಜಿ ಅದ್ಯಕ್ಷ ಬೀರಪ್ಪ, ಕಾಂಗ್ರೇಸ್ ಮುಖಂಡ ರವಿ ಕುಮಾರ್, ಬಿಡಿಸಿಸಿ ಅದ್ಯಕ್ಷ ಎಸಿ.ನಾಗರಾಜು ಮಾಜಿ ಅದ್ಯಕ್ಷ ಸೊಣ್ಣಪ್ಪ, ತಾಲ್ಲೂಕು ಸೂಸೈಟಿ ನಿರ್ದೇಶಕ ಕಾಮೇನಹಳ್ಳಿ ರಮೇಶ್, ಮಂಡಿಬೆಲೆ ರಾಜಣ್ಣ, ಗ್ರಾ.ಪಂ. ಅದ್ಯಕ್ಷೆ ಗೌರಮ್ಮ ರಾಮಣ್ಣ, ಉಪಾದ್ಯಕ್ಷೆ ಕಾಂತಮುನಿರಾಜು, ಸದಸ್ಯರಾದ ಬೈರೇಗೌಡ, ಕೃಷ್ಣಮ್ಮ ಯಲ್ಲಪ್ಪ, ಬಿಜೆಪಿ ಮುಖಂಡರಾದ ಹೊಸೂರು ರವಿಕುಮಾರ್, ಸಿದ್ದಲಿಂಗಮೂರ್ತಿ, ಡೈರಿ ಅದ್ಯಕ್ಷ ಮುರಳಿ, ಕಾರ್ಯದರ್ಶಿ ನಾಗರಾಜು, ನಿರ್ದೇಶಕರಾದ ಮುರಳಿ, ಸಿದಪ್ಪ, ತಿಮ್ಮರಾಯಪ್ಪ, ನಾರಾಯಣಸ್ವಾಮಿ, ಮುನೇಗೌಡ, ಲೋಕೇಶ್, ಕಾಂತರಾಜು, ಕೆಂಪೇಗೌಡ, ಚನ್ನಕೃಷ್ಣಪ್ಪ. ಕೆಂಪಮ್ಮ, ಆಂಜಿನಮ್ಮ ಹಾಗೂ ಹಾಲು ಉತ್ಪಾಧಕರು, ಗ್ರಾಮಸ್ಥರಿದ್ದರು.
ಜುಲೈ-೧೪, ದೇವನಹಳ್ಳಿ, ಪೋಟೊ-೧
ಹಾಲು ಉತ್ಪಾಧಕರ ಸಹಕಾರ ಸಂಘದ ಮೊದಲನೇ ಅಂತಸ್ಥಿನಲ್ಲಿ ನೂತನ ಮೀಟಿಂಗ್ ಹಾಲ್ ಹಾಗೂ ಶುದ್ದ ಕುಡಿಯುವ ನೀರಿನ ಘಟಕವನ್ನು ಬೆ.ಹಾ.ಒಕ್ಕೂಟದ ಪ್ರಭಾರ ಅದ್ಯಕ್ಷ ಮಂಜುನಾಥ್ ಶುಕ್ರವಾರ ಉದ್ಘಾಟಿಸಿದರು.