

ಶುಕ್ರವಾರದಂದು ರಾಷ್ಟ್ರೀಯ ಏಕತಾ ದಿವಸದ ಪ್ರಯುಕ್ತ ಸರ್ದಾರ್ ವಲ್ಲಭಾಯ ಪಟೇಲ್ ರ ಸ್ಮರಣಾರ್ಥ ಐಕ್ಯತೆ ಬಿಂಬಿಸುವ ಏಕತಾ ಪ್ರತಿಜ್ಞಾ ವಿಧಿಯನ್ನು ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳಿಮಠರವರುಸ್ವಯಂ ಸೇವಕರಿಗೆ ಬೋಧಿಸಿದರು ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠರವರು ಒಗ್ಗಟ್ಟು ಎಂದರೇನು? ಅದರಿಂದಾಗುವ ಪ್ರಯೋಜನವೇ ಏಕತಾ ದಿವಸದ ಸಂಕಲ್ಪ ಎಂದು ತಿಳಿಸಿದರು. NSS ನ ಅಧಿಕಾರಿಯಾದ ಶ್ರೀಗಿರೀಶ ವೈ ಅವರು ಸರ್ದಾರ್ ವಲ್ಲಬಾಯು ಪಟೇಲರ ಕುರಿತಂತೆ ವೈಚಾರಿಕತೆಯ ಮಾತುಗಳನ್ನಾಡಿದರು. ನೂರಾರು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಿಂದ ಜಾಗೃತಿ ಪಡೆದು ಧೀಮಂತರಾಗಬಹುದಾದ ಫಲಿತಗಳು ಈ ಕಾರ್ಯಕ್ರಮದಿಂದ ಹೊರ ಹೊಮ್ಮಿತು. ಮಾಜಿ NSS ಅಧಿಕಾರಿಗಳಾದ ಪೊವಿಜಯ ಕುಮಾರ್ ಪಾಟೀಲ್ ಅವರು ಮಾತನಾಡಿ ಐಕ್ಯತೆಯ ಪ್ರಾಮುಖ್ಯತೆ ತಿಳಿಸಿದರು – ಗಿರೀಶ ಪಿ ಹೆಚ್-ರೂಪಶ್ರೀ ಜಯಶ್ರಿ ವಿದ್ಯಾರ್ಥಿ ಸಂಯೋಜಕರಾದ ಕುಮಾರ ಗಗನ ಹಾಗೂ ಕುಮಾರಿ ಅಪರ್ಣಾ ಉಪಸ್ಥಿತಿರಿದ್ದರು.