
ಯಲಹಂಕ ಕೋಗಿಲು ರಸ್ತೆ ಶ್ರೀನಿವಾಸಪುರದ ಅಕ್ಸಫಡ್೯ ಶಾಲಾ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ದಿನಾಂಕ 1/ 11/ 2023 ರಂದು 63ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಧ್ಯಕ್ಷತೆ ವಹಿಸಿದ ಬೆಟ್ಟದ ಹಲಸೂರು ಪ್ರಾಂಶುಪಾಲರ ಸುರೇಶ್ ಅವರು ಮಾತನಾಡಿ ಕನ್ನಡ ಭಾಷೆಗೆ ಮಲತಾಯಿ ಧೋರಣೆ ಮಾಡುವುದು ಸರಿಯಲ್ಲ ಮಾತೃಭೂಮಿ ಮಾತೃ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.
ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಅತ್ಯಂತ ವೈಭವದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಾಲಕರು ಲೆಸಿಂಮ್ ಮೂಲಕ ನೃತ್ಯ ಪ್ರದರ್ಶನ ಮಂತ್ರ ಮುದ್ಧಗೊಳಿಸಿದರೆ ಬಾಲಕಿರ ಹಾಡು ನೃತ್ಯಗಳು ಮನೋರಂಜನೆಗೆ ಪ್ರತಿಫಲದಂತೆ ಸಂತೃಪ್ತಗೊಳಿಸಿದವು. ಪೋಷಕರು ಶಿಕ್ಷಕರು ಮತ್ತು ಆಡಳಿತ ಮಂಡಳಿಗಳೆಲ್ಲರೂ ಈ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು.
ಶಾಲಾ ಕೀರ್ತಿಗೆ ಕಳಶಪ್ರಾಯರಾದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಪ್ರಥಮ ಭಾಷೆ ಕನ್ನಡದಲ್ಲಿ 100 ಅಂಕಗಳಿದ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಸನ್ಮಾನಗಳನ್ನು ಮಾಡುವುದು ಕನ್ನಡ ನಾಡು ನುಡಿ ಸಂರಕ್ಷಣೆಯ ಪ್ರತೀಕವೆಂದು ಹೇಳಿ ತಮ್ಮ ಶಾಲೆಯಲ್ಲಿ ಪ್ರಥಮ ಭಾಷಾ ವಿಷಯ ಕನ್ನಡ ಇದು ನಾಡ ನುಡಿಗೆ ಸಲ್ಲಿಸುವ ನಮನ ವೆಂದು ತಿಳಿಸಿದರು.