

: ದಿನಾಂಕ 30-10-2023ರ ಸೋಮವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವಾರ್ಷಿಕ ಶಿಬಿರವು ವನ ಕಲ್ಲುಮಲ್ಲೇಶ್ವರ ಮಹಾಸಂಸ್ಥಾನ ಮಠ ಹೆಗ್ಗುಂದ ಅಂಚೆ ಸೋಂಪುರ ಹೋಬಳಿ ನೆಲಮಂಗಲ ತಾಲ್ಲುಕು ಬೆಂಗಳೂರು ಗ್ರಾಮಾಂತರ ಇಲ್ಲಿ ಆಯೋಜಿಸಲಾಗಿತ್ತು. ಶಿಬಿರವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ NSS ಸಂಯೋಜನಾಧಿಕಾರಿಗಳಾದ ಶ್ರೀ ಡಾ. ಗೋವಿಂದೇಗೌಡರವರು ಉದ್ಘಾಟಿಸಿ NSS ಶಿಬಿರಗಳಿಂದ ಸ್ವಯಂ ಸೇವಕರಿಗೆ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎ೦ದು ತಿಳಿಸಿದರು. ಶ್ರೀಡಾ ಬಸವ ರಮಾನಂದ ಸ್ವಾಮೀಜಿಯವರು ಕಾಯಕವೇ ಕೈಲಾಸದ ಮಹತ್ವವನ್ನು ತಿಳಿಸಿದರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮಂಜುನಾಥರವರು ಮಾತನಾಡಿ ಸ್ವಯಂ ಸೇವಕರನ್ನು ಉತ್ತೇಜಿಸಿ ಕಾಲೇಜುಗಳು ಇಂತಹ ಕಾರ್ಯಕ್ರಮವನ್ನು ನಡೆಯಿಸಬೇಕೆಂದು ತಿಳಿಸಿದರು ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳೀಮಠ ಅವರು ಏಳು ದಿವಸದ ಶಿಬಿರದಲ್ಲಿ ಸ್ವಚ್ಛ ಕಾಯಕದತ್ತ ಯುವಜನತೆ ಎಂಬ ಧ್ಯೇಯೋದ್ದೇಶವನ್ನು ಕುರಿತು – ಕೈತೊಳೆಯುವ ಸಂಸ್ಕೃತಿ ನನ್ನ ಮಣ್ಣು ನನ್ನ ದೇಶ. ಯೋಗ – ಗೋಶಾಲೆಯ ಸ್ವಚ್ಛತೆ ಸಸ್ಯಕಾಶಿ ನಿರ್ಮಾಣ ಅನಾಥಾಶ್ರಮ. ವೃದ್ಧಾಶ್ರಮ ಅವರಣದ ಸ್ವಚ್ಛತೆ – ಮಳೆ ಸಂಗ್ರಹಿಸುವ ನೀರಿನ ಕಟ್ಟಡ ನಿರ್ಮಾಣ – ಉಪನ್ಯಾಸ ಮಾಲಿಕೆ ಇಂತಹ ಚಟುವಟಿಕೆಗಳು ಸ್ವಚ್ಛ ಕಾಯಕದತ್ತ ಯುವಜನತೆ ಎಂಬ ಉದ್ದೇಶವನ್ನು ಸಫಲಗೊಳಿಸಲಾಗುವುದೆಂದು ಸಭೆಗೆ ತಿಳಿಸಿದರು – ಅಧ್ಯಕ್ಷತೆ ವಹಿಸಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಎಸ್ಎಸ್ ದೊಡ್ಡಣ್ಣವರ ಅವರು ಸ್ವಯಂ ಸೇವಕರು ಭಾರತದ ದಿಟ್ಟ – ಸಧೃಢಪ್ರಜೆಯಾಗಬೇಕೆಂದು ಕರೆ ನೀಡಿದರು. ವಿದ್ಯಾರ್ಥಿ ಸಂಯೋಜಕರಾದ ಕು.ಗಗನ್ ನಿರೂಪಣೆ ಮಾಡಿದರು. ಕು ಅರ್ಚನಾ ಸ್ವಾಗತ ಕೋರಿದರು. ಕುಶ್ವತಿ ವಂದನಾರ್ಪಣೆ ಮಾಡಿದರು. ಸ್ವಯಂ ಸೇವಕರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಸ್ವಚ್ಛ ಕಾಯಕವನ್ನು ಶ್ರದ್ಧೆಯಿಂದ ಬದ್ಧತೆಯಿಂದ ಮಾಡುವುದಾಗಿ ಸಂಕಲ್ಪವನ್ನು ಹೊಂದಿದರು.