





ಬೆಂಗಳೂರಿ
ದಿನಾಂಕ 04 – 11 – 2023
ಸೇಂಟ್ ಆನ್ಸ್ ಪ್ರೌಢ ಶಾಲೆ ರಾಜಾಜಿನಗರ ಬೆಂಗಳೂರು
ಈ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆಯೂಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೆಂಕಟ್, ಸೇಂಟ್ ಆನ್ಸ್ ಮತ್ತು ವಿನಸ್ ಸಮೂಹ ಶಿಕ್ಷಣ ಸಂಸ್ಥೆಗಳಾದ ಉಪಾಧ್ಯಕ್ಷರಾದ ಶ್ರೀ ಯುತ ಬಿ ವೆಂಕಟೇಶ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಾ ನಾವೆಲ್ಲರೂ ಎಲ್ಲೇ ಇರಲಿ… ಹೇಗೆ ಇರಲಿ… ನಮ್ಮಲ್ಲರ ಭಾಷೆ ಕನ್ನಡ ನಮ್ಮ ನಾಡು ಕರ್ನಾಟಕ…. ನಾಡು ನುಡಿ , ಸೇವೆಗಾಗಿ ಸದಾ ಸಿದ್ದರೋಣ ಎಂದು ಹೇಳುತ್ತಾ ಕನ್ನಡ ಏಕೀಕರಣಕ್ಕೆ ಶ್ರಮಿಸಿದ ಮಹಾತ್ಮರನ್ನು ನೆನೆಯುತ್ತಾ,ಅವರ ಶ್ರಮ ಸಾರ್ಥಕವಾಗಬೇಕಾದರೆ ನಾವೆಲ್ಲರೂ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕೆಂದು ಮಕ್ಕಳಿಗೆ ತಿಳಿಸುವ ಮುಖಾಂತರ
ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ೧ ರಂದು ಕನ್ನಡ ನಾಡಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ, ನವೆಂಬರ್ ತಿಂಗಳಲ್ಲಿ ಎಲ್ಲೆಲ್ಲೂ ಕನ್ನಡ ಬಾವುಟಗಳು ಹಾರಾಡುತ್ತವೆ.
ಇದೇ ಸಂದರ್ಭದಲ್ಲಿ ರಾಜಾಜಿನಗರದ ಇಸ್ಕಾನ್ ದೇವಾಲಯದ ಸದಸ್ಯರು ಭಾಗವಹಿಸಿದ್ದರು ಶಾಲೆಯ ಪ್ರಾಂಶುಪಾಲರಾದ ಶ್ರೀ ರವೀಂದ್ರ ಹಾಗೂ ಮುರಳೀಧರ ಕುಲಕರ್ಣಿ ಮತ್ತು ಶಾಲಾ ಶಿಕ್ಷಕರು ವೃಂದದವರು ಹಾಗೂ ವಿಧ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಮುರಳೀಧರ ಕುಲಕರ್ಣಿ
ಚಿತ್ರಕಲಾ ಶಿಕ್ಷಕರು
ಸೇಂಟ್ ಆನ್ಸ್ ಪ್ರೌಢ ಶಾಲೆ ರಾಜಾಜಿನಗರ ಬೆಂಗಳೂರು