ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ.ನಿ 4ನೇ ದಿನದ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯನ್ನು ಜಿಲ್ಲೆಯ ಗೌರಿಬಿದನೂರಿನ ಕೋಚಿಮುಲ್,
ಶಿಬಿರ ಕಚೇರಿಯಲ್ಲಿ ಆಚರಿಸಲಾಯಿತು. ಒಕ್ಕೂಟದ ಅಧ್ಯಕ್ಷರಾದ ಹೆಚ್.ವಿ ನಾಗರಾಜ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾದ ಜೆ.ವಿ ಹನುಮೇಗೌಡ ಇಂದಿನ ದಿನದ ವಿಷಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂಜಯ್ಯಗಾರಹಳ್ಳಿ ಎಂಪಿಸಿಎಸ್ ನ ಅಧ್ಯಕ್ಷರಾದ ರಾಮಕೃಷ್ಣಾರೆಡ್ಡಿ,
ನೌಕರರ ಒಕ್ಕೂಟದ ಅಧ್ಯಕ್ಷರಾದ ವೆಂಕಟೇಶರೆಡ್ಡಿ,ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಪಕರಾದ ಸತೀಶ್ ಪಾಟೀಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಎನ್.ಕೆ ಲಕ್ಷ್ಮೀಪತಿ,ನಿರ್ದೇಶಕರಾದ ಎನ್.ಎ ಆದಿನಾರಾಯಣರೆಡ್ಡಿ, ಜೆ.ನರಸಿಂಹಮೂರ್ತಿ ಜಿ.ಎನ್ ವೆಂಕಟಸ್ವಾಮಿಗೌಡ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಕಿರಣ್ ಕುಮಾರ್,ಸಚಿನ್ ಧರ್ಮಟ್ಟಿ, ನವೀನ್ ಕುಮಾರ್,ಮಂಜುನಾಥ್,
ನೌಕರರ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀನಿವಾಸ್ ಮತ್ತು ತಾಲ್ಲೂಕಿನ ಎಂಪಿಸಿಎಸ್ ಅಧ್ಯಕ್ಷರು,
ಮುಖ್ಯಕಾರ್ಯನಿರ್ವಾಹಕರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಘಗಳಿಗೆ ಸನ್ಮಾನ ಮಾಡಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

Nov 19, 2023

Leave a Reply

Your email address will not be published. Required fields are marked *