Post navigation ಚಿಕ್ಕಬಳ್ಳಾಪುರ: ಪ್ರತಿಯೊಬ್ಬರೂ ಕ್ರೀಡಾಶಕ್ತಿಯನ್ನು ಬೆಳೆಸಿಕೊಂಡು ದೇಶಿಯ ಕ್ರೀಡೆಗಳನ್ನು ಉತ್ತುಂಗಕ್ಕೆ ಏರಿಸಬೇಕು ಎಂದು ಜೈ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಯಕುಮಾರ್ ಹೇಳಿದರು.ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿ ಕೇಂದ್ರದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜೈ ಫೌಂಡೇಶನ್ ಹಾಗೂ ಮಾನ್ ಸ್ಟಾರ್ ಬಾಯ್ಸ್ ಸಂಯುಕ್ತ ಆಶ್ರಯದಲ್ಲಿ ಮತ್ತು ಜೈ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಯಕುಮಾರ್ ಅವರ ಸಾರಥ್ಯದಲ್ಲಿ “ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ” ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಮಾತ್ರ ಅಲ್ಲದೆ ಕ್ರೀಡೆಗಳಲ್ಲಿ ಆಸಕ್ತಿ ಬಳಸಿಕೊಂಡಿರುವ ಎಲ್ಲರೂ ಇಂತಹ ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವನೆಗಳನ್ನು ರೂಡಿಸಿಕೊಳ್ಳಬೇಕು ಎಂದರು. ಅದೇ ರೀತಿ ಕ್ರೀಡೆಗಳು ನಮ್ಮ ಮಾನಸಿಕ ತುಮುಲಗಳನ್ನು ದೂರ ಮಾಡಲಿವೆ ನಾವು ಕಡೆಗಳಲ್ಲಿ ಭಾಗವಹಿಸಿ ಇನ್ನಿತರಗು ಸಹ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೆಪಣೆ ನೀಡಬೇಕು.ಇಂದು ಮಂಚೇನಹಳ್ಳಿಯಲ್ಲಿ ಮಾನ್ ಸ್ಟಾರ್ ಬಾಯ್ಸ್ ಯುವಕರು ಮುತುವರ್ಜಿಯಿಂದ ಹೋಬಳಿ ಕೇಂದ್ರದ ಕ್ರೀಡಾಕೂಟದಲ್ಲಿ ಭಾಗವಹಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ, ಜಾತಿಭೇದ ಮತ್ತು ಧರ್ಮಭೇದ ಇಲ್ಲದೆ ಇಂತಹ ಕ್ರೀಡೆಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿಯೂ ಇದೇ ಸಂದರ್ಭದಲ್ಲಿ ಜಯಕುಮಾರ್ ಅವರು ತಿಳಿಸಿದರು.ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 25,000 ಮತ್ತು ದ್ವಿತೀಯ ಸ್ಥಾನ ತಂಡಕ್ಕೆ15,000 ಜೈ ಫೌಂಡೇಶನ್ ವತಿಯಿಂದ ನಗದು ಬಹುಮಾನ ನೀಡುವುದಾಗಿ ಜಯಕುಮಾರ್ ಘೋಷಣೆ ಮಾಡಿದರು.ಜೈ ಫೌಂಡೇಶನ್ ಕಾರ್ಯದರ್ಶಿ ಮುಬಾರಕ್ ಮಾತನಾಡಿ ವಿದ್ಯಾದಿಸೆ ಜೊತೆ ಜೊತೆಯಲ್ಲಿಯೇ ಕ್ರೀಡೆಗಳನ್ನು ಹವ್ಯಾಸವನ್ನಾಗಿ ಮಾಡಿಕೊಂಡು ಬರುವುದು ಒಂದು ವಿಧವಾದರೆ ನಂತರ ಸಂಘ ಸಂಸ್ಥೆಗಳ ಒಡನಾಡಿಗಳಾಗಿ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಇನ್ನಿತರಗು ಪ್ರೇರೇಪಣೆ ನೀಡುವುದು ಒಳ್ಳೆಯ ಬೆಳವಣಿಗೆ, ಇಂತಹ ಕಾರ್ಯಕ್ರಮಗಳಿಗೆ ಜೈ ಫೌಂಡೇಶನ್ ವತಿಯಿಂದ ಇಡೀ ಮಂಚೇನಹಳ್ಳಿ ಹೋಬಳಿ ಕೇಂದ್ರದಲ್ಲಿ ಮಾತ್ರವಲ್ಲದೆ ವಿಧಾನಸಭಾ ಕ್ಷೇತ್ರದಾದ್ಯಂತ ನಾನಾ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲ್ಲಾಗುತ್ತಿದೆ ಅಲ್ಲದೆ ಆರೋಗ್ಯ, ಶಿಕ್ಷಣಕ್ಕೆ ಜೈ ಫೌಂಡೇಶನ್ ಹೆಚ್ಚು ಒತ್ತು ನೀಡುತ್ತಾ ಬಂದಿದೆ ಎಂದ ಅವರು ಇಂದು ಆಯೋಜಿಸಿರುವ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.ಫೌಂಡೇಷನ್ ಟ್ರಸ್ಟಿ ನವೀನ್ ಮಾತನಾಡಿ ವ್ಯಾಸಂಗಕ್ಕೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆಗಳಿಗೂ ಮೀಸಲಿಡಬೇಕು ಆಗ ತಮ್ಮಲ್ಲಿನ ಪ್ರತಿಭೆ ಹೊರ ಪ್ರದರ್ಶಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವಂತಾಗಲಿದೆಎಂದರು.ಜೈ ಫೌಂಡೇಶನ್ ಟ್ರಸ್ಟಿಗಳಾದ ಸುಬ್ರಮಣಿ, ಗೋವಿಂದರಾಜು, ಹಾಗೂ ಮಾನ್ ಸ್ಟಾರ್ ಬಾಯ್ಸ್ ಪದಾಧಿಕಾರಿಗಳು ಮತ್ತು ಕ್ರೀಡಾಪಟುಗಳು ಹಾಜರಿದ್ದರು. ಪಬ್ಲಿಕ್ ಪವರ್. ****************ಆನೇಕಲ್ ಸುದ್ದಿ.ದಲಿತ ಸಂಘರ್ಷ ಸೇನೆ ಪದಾಧಿಕಾರಿಗಳ ನೇಮಕಾತಿ..ದಲಿತ ಸಂಘರ್ಷ ಸೇನೆ ಎಇಸಿ ಎಸ್ ಲೇಔಟ್ ಕೂಡ್ಲು ಬೆಂಗಳೂರು ಕೇಂದ್ರ ಕಛೇರಿ ಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಜ್ಯದ ಪ್ರಸಿದ್ಧ ದಲಿತಪರ ಹೋರಾಟಗಾರರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಜಿ. ರವಿಕುಮಾರ್ ಕಾರ್ಯಾಧ್ಯಕ್ಷರಾದ ಭದ್ರಯ್ಯ ಆನೇಕಲ್ ತಾಲ್ಲೂಕು ದಲಿತ ಸಂಘರ್ಷ ಸೇನೆ ಅಧ್ಯಕ್ಷರಾದ ಮುರುಗೇಶ್ ಅವರ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷರ ಮತ್ತು ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ ನಡೆಯಿತುದಲಿತ ಸಂಘರ್ಷ ಸೇನೆ ಆನೇಕಲ್ ತಾ ಉಪಾಧ್ಯಕ್ಷರಾಗಿ ವೈ. ಗೋಪಾಲ್ ಪ್ರಧಾನ ಕಾರ್ಯದರ್ಶಿಯಾಗಿ ಪಿ. ಯೋಗೀಶ್ ಸಂಘಟನಾ ಕಾರ್ಯದರ್ಶಿಯಾಗಿ ಬಿ. ಸುಮನ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ನಂಜುಂಡ ರವರನ್ನು ಆಯ್ಕೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯ ಧ್ಯಕ್ಷರಾದ ಮುನಿರಾಜು ಪ್ರಧಾನ ಕಾರ್ಯದರ್ಶಿ ಪಾಲಾಕ್ಷ ಬೆಂಗಳೂರು ದಕ್ಷಿಣ ತಾಲೂಕು ಗೌರವಾಧ್ಯಕ್ಷರಾದ ನಾರಾಯಣಪ್ಪ ಅಧ್ಯಕ್ಷರಾದ ಪಿ. ರವಿಕುಮಾರ್ ಉಪಾಧ್ಯಕ್ಷರಾದ ಸಂತೋಷ್ ಕಾರ್ಯಧ್ಯಕ್ಷರು ಶಿವಕುಮಾರ್ ಆನೇಕಲ್ ತಾಲೂಕು ಗೌರವಾಧ್ಯಕ್ಷರಾದ ರಾಮಸ್ವಾಮಿ ಕಾರ್ಯಧ್ಯಕ್ಷರಾದ ರಾಜಪ್ಪ ಬೆಂಗಳೂರು ನಗರ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಆಶಾ ಉಪಾಧ್ಯಕ್ಷರಾದ ಚಂದ್ರಕಲಾ ಕಾರ್ಯಾಧ್ಯಕ್ಷರಾದ ರಾಧಾ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಮಾದಮ್ಮ ಸೇರಿದಂತೆ ದಲಿತ ಸಂಘರ್ಷ ಸೇನೆ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು