

ಬೆಂಗಳೂರು : ಒಕ್ಕಲಿಗರು ನಮ್ಮ ಹಿಂದೂ ಸಮಾಜದ ಒಂದು ಜೀವನಾತ್ಮಕ ಕೊಂಡಿಯಾಗಿದ್ದು, ‘ಒಕ್ಕಲಿಗರು ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ” ಎಂಬ ಜನಜನಿತ ನಾಣ್ಣುಡಿಯೇ ಇದೆ ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮಿಗಳು ತಿಳಿಸಿದರು,
ನಗರದ ನಯನ ಸಭಾಂಗಣದಲ್ಲಿ ಒಕ್ಕಲಿಗ ಧರ್ಮ ಮಹಾಸಭಾ (ರಿ) ವತಿಯಿಂದ ಭಾನುವಾರ ಆಯೋಜಿಸಿದ್ದ “ರಾಜ್ಯ ಮಹಿಳಾ ಘಟಕ ” ಉದ್ಘಾಟನೆ ,ಹಾಗೂ “ಧರ್ಮ ಸಂಸ್ಕಾರಗಳು” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಒಕ್ಕಲಿಗರೆಂದರೆ ಈ ನಾಡಿನ ಮಣ್ಣಿನ ಜೊತೆ ಕರುಳು ಬಳ್ಳಿಯ ಸಂಬಂಧ ಹೊಂದಿರುವ ಮಣ್ಣಿನ ಮಕ್ಕಳು, ಇಡೀ ಜಗತ್ತಿನ ಏಳಿಗೆಗೆ ಅಪ್ರತಿಮ ಮಹಾನಾಯಕರನ್ನು ಕೊಡುಗೆಯಾಗಿ ಕೊಟ್ಟ ಸಮುದಾಯ ಒಕ್ಕಲಿಗರದ್ದು, ಮುಂದಿನ ದಿನಗಳಲ್ಲಿ ಸಮುದಾಯದ ಮಕ್ಕಳು ಒಗ್ಗಟ್ಟಾಗಿ ಅಭಿವೃದ್ಧಿಯತ್ತ ಸಾಗೋಣ ಎಂದರು.
ಕಾರ್ಯಕ್ರಮದಲ್ಲಿ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ವೈನವಿ ಬಿ.ಸಿ. ಕ್ರೀಡಾ ಸಾಧಕ ನಂದ ಕುಮಾರ್, ಕೃಷಿ ಕ್ಷೇತ್ರದ ಸಾಧಕ ಮಾಣಿಕ್ಯ ಬಿ ಚಿಲ್ಲೂರು, ಸಮಾಜ ಸೇವಕ ಮಂಜುನಾಥ್, ಕೆಂಪೇಗೌಡ ವಿಚಾರ ವೇದಿಕೆಯ ಮಹಿಳಾ ಅಧ್ಯಕ್ಷೆ ಮಹಾಲಕ್ಷ್ಮಿ ಅಶೋಕ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಪ್ರತಿಭಾವಂತರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಲ್.ಬೈರಪ್ಪ. ಚಿಕ್ಕಣ್ಣ ಗಂಗಟ್ಕಾರ್, ನಂದಕುಮಾರ್, ಮಂಜುಳಾ ನಾರಾಯಣಸ್ವಾಮಿ, ರಾಜೇಶ್ ಗೌಡ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ
ಸಂಪರ್ಕಿಸಿ. 9845085793. R hanumanthu
7349337989. R hanumanthu
9035282296. Rahul