ಬ್ಯಾಟರಾಯನಪುರ : 12ನೆಯ ಶತಮಾನದ ಶರಣರಂತೆಯೇ ಜಾತಿ ವ್ಯವಸ್ಥೆಯ ವಿರುದ್ಧ ಕಟುವಾಗಿ ಟೀಕಿಸಿದ ವಿರಳರಲ್ಲಿ ಕನಕದಾಸರು ಸಹ ಒಬ್ಬರಾಗಿದ್ದು, ಜಾತಿ ಮೀರಿದ ಸಮ ಸಮಾಜ ನಿರ್ಮಾಣ ಅವರ ಕನಸಾಗಿತ್ತು ಎಂದು ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್ ಕೆ ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರದ ಚಿಕ್ಕಜಾಲದಲ್ಲಿರುವ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಕನಕದಾಸರ 536ನೇ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕನಕದಾಸರು ತಮ್ಮ ಹೆಸರಿಂತೆಯೇ ಸಮಾಜಕ್ಕೆ ಬಂಗಾದಂತಹ ಸಂದೇಶ ನೀಡಿದ ಮಹಾನ್ ಮಾನವತಾವಾದಿ. ಬುದ್ಧ, ಬಸವ, ಅಂಬೇಡ್ಕರ್ ರಂತೆಯೇ ಸಮಾನತೆಯ ಹರಿಕಾರರಾಗಿ ಕನಕ ದಾಸರು ನಾಡಿನಲ್ಲಿ ಹೆಸರಾಗಿದ್ದಾರೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಎಂಬ ಕೀರ್ತನೆಯ ಮೂಲಕ ಜಾತಿ ಪದ್ದತಿಯನ್ನು ಅತ್ಯಂತ ಕಟುವಾಗಿ ಟೀಕಿಸಿದ್ದಾರೆ.

ಸಾವಿರಾರು ಕೀರ್ತನೆಗಳನ್ನು ರಚಿಸಿರುವ ಕನಕದಾಸರು ಅವುಗಳಲ್ಲಿ ಸಾಮಾಜಿಕ ಸಮಾನತೆ, ಆದರ್ಶ ಬದುಕಿನ ರೀತಿ, ಮೌಲ್ಯಯುತ ಜೀವನದ ಮೂಲಕ ಕೈವಲ್ಯಕ್ಕೆ ಪಾತ್ರರಾಗಬಹುದಾದ ಬಗೆ ಸೇರಿದಂತೆ ಹಲವು ಸತ್ಸಂದೇಶಗಳನ್ನು ಸಮಾಜಕ್ಕೆ ಸಾರಿದ್ದಾರೆ. ಅವರು ಹಾಕಿಕೊಟ್ಟಿರುವ ಉದಿತ ಮಾರ್ಗದಲ್ಲಿ ನಾವು ನಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಜಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ, ಪ.ಜಾ./ಪ.ಪಂ. ವಿಭಾಗದ ಅಧ್ಯಕ್ಷ ಮರಳುಕುಂಟೆ ರಮೇಶ್, ಚಿಕ್ಕಜಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ರವಿಕುಮಾರ್, ಮುಖಂಡರಾದ ತಿರುಮಳಪ್ಪ, ಮುನಿರಾಜು, ಬಾಲಿ, ಕಿರಣ್, ರಮೇಶ್ ಎನ್ ಕೆ, ಶಿವರಾಜ್, ಸುಜಾತ, ಯುವ ಕಾಂಗ್ರೆಸ್ ನ ಪ್ರದೀಪ್, ಶಿವರಾಜ್ ಮುರಳಿ, ಪ್ರಭಾಕರ್, ವಿನಯ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *