

ಎನ್ ಎಂ ಐ ಟಿ ಯಲ್ಲಿ ಇಪ್ಪತ್ತೊಂದನೇ ಶತಮಾನ ಕೇಂದ್ರಿತ ಕೌಶಲ್ಯ ತರಬೇತಿ ಕಾರ್ಯಕ್ರಮ :
ಯಲಹಂಕ : 21ನೇ ಶತಮಾನ ಭಾರತದ ಪಾಲಿಗೆ ‘ಅಮೃತ ಕಾಲ’ವಾಗಿದ್ದು, ಈ ಶತಮಾನದ ಯುವ ಪೀಳಿಗೆ ತಮ್ಮ ತಾಂತ್ರಿಕ ಸಂಶೋಧನೆ ಮತ್ತು ಕೌಶಲ್ಯತೆಯ ಮೂಲಕ ಭಾರತವನ್ನು ‘ವಿಶ್ವಗುರು’ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಗೋಪಕುಮಾರ್ ಅಭಿಪ್ರಾಯಪಟ್ಟರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ರಿಸರ್ಚ್ ಹಾಗೂ ಐಕ್ಯುಎಸಿ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ’21ನೇ ಶತಮಾನ ಕೇಂದ್ರಿತ ಕೌಶಲ್ಯ ತರಬೇತಿ’ ಕುರಿತ ಅಮೃತ ಕಾಲ ಸರಣಿ ಮಾಲೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಪ್ರಸ್ತುತವಾಗಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯ ಕಲ್ಪಿಸುವ ನಿಟ್ಟಿನಲ್ಲಿ 2015ರ ಜುಲೈ 15ರಂದು ಕೌಶಲ್ಯ ತರಬೇತಿಗೆ ನಿರ್ದಿಷ್ಟ ನೀತಿ ರೂಪಿಸಿದ್ದು, ಇದರ ಪ್ರಕಾರ ಪ್ರಸ್ತುತ ಪದವಿ ಪಡೆಯುತ್ತಿರುವ ಎಲ್ಲಾ ಪದವೀಧರರು ಬಹುತೇಕ ಜನ್ಮ ತಾಳಿರುವುದು 21ನೇ ಶತಮಾನದಲ್ಲಿ ಜನ್ಮತಾಳಿದವ ರಾಗಿದ್ದಾರೆ. ಈ ಕಾಲಘಟ್ಟವನ್ನು ಭಾರತ ಸರ್ಕಾರ ‘ಅಮೃತ ಕಾಲ’ ಎಂದು ಗುರುತಿಸಿದೆ. ಭಾರತ ದೇಶ ಸ್ವಾತಂತ್ರ್ಯದ ನೂರನೇ ವರ್ಷ ಆಚರಿಸುವ ವೇಳೆಗೆ ಪ್ರಸ್ತುತ ವಿರುವ ಪದವೀಧರರು ನಲವತ್ತು ವರ್ಷ ದಾಟಿರುವ ಜವಾಬ್ದಾರಿಯುತ ನಾಗರೀಕರಾಗಿ ಹೊರಹೊಮ್ಮಿರುತ್ತಾರೆ. ಇವರು ತಾವು ಪಡೆದಿರುವ ಶಿಕ್ಷಣ ಮತ್ತು ಕೌಶಲ್ಯದ ಪ್ರತಿಭೆಯಿಂದ ನಮ್ಮ ದೇಶವನ್ನು ವಿಶ್ವಗುರು ಮಟ್ಟಕ್ಕೆ ಕೊಂಡೊಯ್ಯಲಿದ್ದಾರೆ, ಹಾಗೆಯೇ ಹೊಸ ಯುವ ಸಮೂಹವನ್ನು ಸಂದರ್ಭಕ್ಕೆ ಅನುಗುಣವಾದ ನವೀನ ಕೌಶಲ್ಯಗಳ ಮೂಲಕ ಸಬಲಗೊಳಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ರಿಸರ್ಚ್ ನ ದಕ್ಷಿಣ ಪ್ರಾದೇಶಿಕ ಮುಖ್ಯಸ್ಥ ಡಾ.ಜಾಕೊಬ್ ಕಲ್ಲೆ ಅಮೃತ ಕಾಲ ಉಪನ್ಯಾಸ ಸರಣಿಯ ಹಿಂದಿನ ಉದ್ದೇಶ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಅಕ್ಯಾಡೆಮಿ ಡೀನ್ ಡಾ.ಸಂದೀಪ್ ಶಾಸ್ತ್ರಿ, ಎನ್ ಎಂಐಟಿ ಪ್ರಾಂಶುಪಾಲರಾದ ಡಾ.ಎಚ್ ಸಿ ನಾಗರಾಜ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎ.ಸಿ.ರಾಮಚಂದ್ರ, ವಿದೇಶ ವ್ಯವಹಾರಗಳ ಡೀನ್ ಡಾ.ಜೆ.ಸುಧೀರ್ ರೆಡ್ಡಿ, ಕಾರ್ಯಕ್ರಮದ ಸಂಯೋಜಕರಾದ ಸುಗನ್ಯ, ಸ್ಮಿತಾ ಶರತ್ ಸೇರಿದಂತೆ ಇನ್ನಿತರರಿದ್ದರು.