
ಮಾಲೂರು:-ಸರ್ಕಾರಿ ಪದವಿ ಪೂರ್ವ ಕಾಲೇಜು ಲಕ್ಕೂರು , ಮಾಲೂರು (ತಾ) ಕೋಲಾರ ಜಿಲ್ಲೆ
ಕನಕದಾಸ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಶ್ರೀ ಶ್ರೀನಿವಾಸ ರೆಡ್ಡಿಯವರು ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು . ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಮಾತನಾಡುತ್ತ ಸರ್ಕಾರಿ ಕಾಲೇಜುಗಳು ಕೇವಲ ಸರ್ಕಾರದಿಂದ ಮಾತ್ರ ಅಭಿವೃದ್ದಿಯಾಗದೆ ಶ್ರೀನಿವಾಸ ರೆಡ್ಡಿಯವರಂತಹ ದಾನಿಗಳಿಂದ ಕೂಡ ಅಭಿವೃದ್ದಿ ಆಗುತ್ತಿವೆ. ಹಾಗಾಗಿ ಅವರ ಈ ಕಾರ್ಯ ಶ್ಲಾಘನೀಯವಾಗಿದೆ. ಹಾಗೇಯೇ ಬೇರೆ ವ್ಯಕ್ತಿಗಳಿಗೆ ಇದು ಮಾದರಿಯಾಗಿದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಮತ್ತು ಯಾವುದೇ ಜಾತಿ, ಧರ್ಮ, ಪ್ರದೇಶ ಭಾಷೆಗೆ ಸೀಮಿತವಾಗದ ಕನಕದಾಸರು ತಮ್ಮ ಕೀರ್ತನೆಗಳು, ಕಾವ್ಯಗಳ ಮೂಲಕ ಸಾರಿದ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆ ಪಡೆದಿವೆ., ಪ್ರಸ್ತುತ ಆಧುನಿಕ ಸಮಾಜಕ್ಕೆ ಅವರ ತತ್ವ ಮತ್ತು ಸಂದೇಶಗಳು ಅವಶ್ಯಕತೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಲೂರಿನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಮನೋಹರ್ ಎಂ. ಅವರು ಮಾತನಾಡಿ ಕನಕದಾಸರು ಮನುಷ್ಯನ ಅಹಂಕಾರ ಡಾಂಬಿಕತೆ ಹಾಗೂ ಭೋಗದ ಜೀವನವನ್ನು ಕಟುವಾಗಿ ಟೀಕಿಸಿದರು, ಅವರ ತತ್ವಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ಶೇಖರ್ ಪಿ. ಸುರೇಶ್ ಕೆ. ಪುಷ್ಪ ಜಿ. ಪ್ರದೀಪ್ ಕುಮಾರ್ ಎಂ. ಆಶಾ ರಾಣಿ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಲೋಕೇಶ್ ಎಲ್ ಕೆ. ನಾಗೇಶ್ ಎಲ್ ವಿ. ಸತೀಶ್ ಕುಮಾರ್. ವರುಣ್. ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ವರದಿ: ದ್ವಾರಗಾನಹಳ್ಳಿ ಕೃಷ್ಣಪ್ಪ
ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ
9845085793. 7349337989
9035282296. R hanumanthu