ಬೀದರ್ ಸುಲ್ತಾನಪುರ್ (ಜೆ )ಗ್ರಾಮದ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಸಭೆಯ ಪಾಸ್ಟಾರ್ ರೇ.ಡೇವಿಡ್ ಅವರು ಮತ್ತು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷರಾದ ನವೀನ್ ಅಲ್ಲಾಪುರೆ ಬೀದರ ರವರ ಮುಖಾಂತರ ಕ್ರಿಸ್ಮಸ್ ಹಬ್ಬದ ನಿಮಿತ್ತ ಬಡು ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು. ಪಾಸ್ಟರ್ ಡೇವಿಡ್ ಅವರು ಮಾತನಾಡಿ ನಾವು ಇಂದು ನಮ್ಮ ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಮಾಡುತಲಿದ್ದು ಜನರಿಗೆ ಶುಭ ಸಂದೇಶವನ್ನು ಮುಟ್ಟಿಸುವ ಸೇವೆಯನ್ನು ಮಾಡಬೇಕು ಮತ್ತು ಯೇಸು ಹುಟ್ಟಿ ಭೂಮಿಗೆ ಬೆಳಕಾಗಿ ಶಾಂತಿ ಸೌಹಾರ್ದತೆ ನೀಡಿದ್ದಾರೆ ಈ ವೇಳೆ ಅವರ ಹುಟ್ಟಿದ ದಿನವೆಂದು ಕ್ರಿಸ್ಮಸ್ ಹಬ್ಬ ದಿನವನ್ನು ಆಚರಣೆ ಮಾಡುತ್ತಾ ಜನರಿಗೆ ಶುಭಾಶಯ ತಿಳಿಸುತ್ತೇವೆ ಎಂದು ಪ್ರೀತಿ ವಚನ ನುಡಿದರು ಇದೆ ಸಂಧರ್ಬದಲ್ಲಿ ನವೀನ್ ಅಲ್ಲಾಪೂರೆ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷರು ಅವರಿಗೆ ಸನ್ಮಾನ ಮಾಡಿದರು ನವೀನ್ ಆಲ್ಲಪುರೆ ಅವರು ಮಾತನಾಡಿ ನಾವು ಹಬ್ಬಗಳು ಆಚರಣೆ ಮಾಡುವುದು ಸಹಜ ಆದರೆ ಅದರಲ್ಲಿ ನಮ್ಮ ಪ್ರೀತಿ ಕಾಳಜಿ ಇರಬೇಕು ನಾವು ನಮ್ಮ ಮನ ತೃಪ್ತಿಗೊಸ್ಕರ ಹಬ್ಬಗಳು ಆಚರಣೆ ಮಾಡುವುದು ಹಬ್ಬವಲ್ಲ ನಮ್ಮ ಸುತ್ತ ಮುತ್ತಲಿನ ಜನರು ಕೂಡ ಅವರವರ ಪರಿಸ್ಥಿತಿ ಪ್ರಕಾರ ಅವರನ್ನ ಗುರುತಿಸಿ ನಮ್ಮ ಕೈಯಿಂದ ಆಗುವಷ್ಟು ಸಹಾಯ ಅವರನ್ನು ಮಾಡುತ್ತಾ ಅವರು ಕೂಡ ಹಬ್ಬ ಆಚರಣೆ ಮಾಡಲು ಬಹಳ ಆಸೆ ಪಡುತ್ತಾರೆ ಆದರೆ ಅವರಿಗೆ ಇಂತಹ ಸಮಯದಲ್ಲಿ ನಾವು ಅವರಿಗೆ ಅಲ್ಪ ಸಹಾಯ ಮಾಡಿದರು ಅವರಿಗೆ ಬಹಳಷ್ಟು ಅನುಕಾಲತೆ ಆಗುವುದೂ ಎಂದು ನಾನು ಭಾವಿಸುತ್ತೇನೆ ಎಂದು ಮಾತನಾಡಿ ಮತ್ತು ನನಗೆ ಇಲ್ಲಿನ ಸೇವಕರು ಹಾಗೂ ಗ್ರಾಮದ ಚರ್ಚಿನ ಮುಖಂಡರು ಸನ್ಮಾನಿಸಿ ಗೌರವಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಅವರಿಗೆ ಸಲ್ಲಿಸುತ್ತೇನೆ ಎಂದು ತಿಳಿಸಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು,

Leave a Reply

Your email address will not be published. Required fields are marked *