






ಬೆಂಗಳೂರಿನ ರಾಜಾಜಿನಗರದ ಸೇಂಟ್ ಅನ್ಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯದ ಆವಿಷ್ಕಾರ ವಸ್ತು ಪ್ರದರ್ಶನವನ್ನು ಪ್ರದರ್ಶಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೇಂಟ್ ಅನ್ಸ್, ವೆಂಕಟ್ ಮತ್ತು ವೀನಸ್ ಸಮೂಹ ಶಿಕ್ಷಣದ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಟಿ ಬಾಲಕೃಷ್ಣರವರು, ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ವೆಂಕಟೇಶ್ ಅವರು ಹಾಗೂ ಸಂಸ್ಥೆಯ ನಿರ್ದೇಶಕರಾದ ಶೇಖರ್ ಅವರು ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ ಅಲಂಕೃತ ಮೇಡಂ ಅವರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಟಿ ಬಾಲಕೃಷ್ಣರವರು ಜ್ಯೋತಿ ಬೆಳಗಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಮಕ್ಕಳಿಗೆ ವೈಜ್ಞಾನಿಕ ಸೃಜನಶೀಲತೆಯ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು, ಹಾಗೂ ಇತ್ತೀಚೆಗೆ ಯಶಸ್ವಿಯಾದ ಚಂದ್ರಯಾನವನ್ನು ಕುರಿತು ಮಕ್ಕಳಿಗೆ ಜ್ಞಾನದ ಶಕ್ತಿಯನ್ನು ತುಂಬಿ, ಯಾಂತ್ರಿಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವುದರ ಮೂಲಕ ಮಕ್ಕಳಿಗೆ ಜ್ಞಾನದ, ವಿಜ್ಞಾನದ ಆವಿಷ್ಕಾರಕ್ಕೆ ಚಾಲನೆಯನ್ನು ನೀಡಿದರು. ಹಾಗೂ ಇದೇ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ರವೀಂದ್ರ ರವರು, ಶಿಕ್ಷಕ ವೃಂದದವರು, ಶಾಲೆಯ ವಿದ್ಯಾರ್ಥಿಗಳು, ಹಾಗೂ ಪೋಷಕ ವೃಂದದವರು ಭಾಗವಹಿಸಿದ್ದರು.
ಈ ಸುದ್ದಿಯನ್ನು ತಮ್ಮ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
ವಂದನೆಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿ
ಮುರಳಿಧರ್ ಕುಲಕರ್ಣಿ
ಚಿತ್ರಕಲಾ ಶಿಕ್ಷಕರು, ಸೇಂಟ್ ಅನ್ಸ್ ಪ್ರೌಢಶಾಲೆ ರಾಜಾಜಿನಗರ ಬೆಂಗಳೂರು.