ದಿನಾಂಕ 22 – 12, 2023ರ ಶುಕ್ರವಾರ 11.00 ಗಂಟೆಗೆ ಬಿಎಸ್ಸಿ ವಿದ್ಯಾರ್ಥಿಗಳಿಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗಣಿತಶಾಸ್ತ್ರ ದಿನಾಚರಣೆಯ ಪ್ರಯುಕ್ತ ಗಣಿತ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ 6ನೇ ಸೆಮೆಸ್ಟರ್ ಸಂಜನಾ ಹಾಗೂ 3 ನೇ ಸೆಮೆಸ್ಟರ್ ಲಾವಣ್ಯ ಪ್ರತಿಭಾನ್ವಿತ ವಿದ್ಯಾರ್ಥಿಯರನ್ನು ಸನ್ಮಾನಿಸಲಾಯ್ತು – ಇದೇ ಸಂದರ್ಭದಲ್ಲಿ, ಡಾ. ಶಿಲ್ಪ ಪ್ರಸಿಡೆನ್ಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೂ ಸನ್ಮಾನಿಸಿ ಪ್ರಸ್ತುತ ಸಮಾಜದಲ್ಲಿ ಗಣಿತಶಾಸ್ತ್ರದ ಪಾತ್ರ ಎಂಬ ವಿಷಯ ಕುರಿತು ವಿಷಯ ಮಂಡನೆ ಯಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. – ಪ್ರಾಂಶುಪಾಲರಾದ ಡಾ ಶೀಲಾ ದೇವಿಎಸ್ ಮಳಿಮಠರವರು ಶ್ರೀನಿವಾಸ ರಾಮಾನುಜಂ ವ್ಯಕ್ತಿತ್ವವನ್ನು ಕುರಿತು ಆಶಯ ನುಡಿಗಳನ್ನಾಡಿದರು. ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೂಪಶ್ರೀ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು ಸ್ವಾಗತ ಹಾಗೂ ವಂದನಾರ್ಪಣೆಯನ್ನು ವಿದ್ಯಾರ್ಥಿಗಳೇ ನಡೆಯಿಸಿಕೊಟ್ಟರು ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಶ್ರೀ ವಿಜಯ ಕುಮಾರ ಪಾಟೀಲ್ -ಜಯಶ್ರೀ ಕೋರಿ ಶ್ರೀರಾಯಣ್ಣ ಶ್ರೀಮತಿ ಸುಪ್ರಿಯಾ ಪತ್ತನ್ನವರ – ಹಾಗೂ ವಿದ್ಯಾರ್ಥಿಗಳು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿದರು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ. 9845085793. 7349337989

9035282296

Leave a Reply

Your email address will not be published. Required fields are marked *